Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ ಬರಹಗಾರ ಎಂ. ಎಸ್. ಕೆ. ಪ್ರಭು

    July 15, 2025

    ಪುಸ್ತಕ ವಿಮರ್ಶೆ – ಪೀಳಿಗೆಯ ಯೋಚನೆಗಳನ್ನು ಬದಲು ಮಾಡಬಲ್ಲ ಕೃತಿ – ‘ಮಾತು ಎಂಬ ವಿಸ್ಮಯ’

    July 15, 2025

    ನಟನದಲ್ಲಿ ‘ಸುಬ್ಬಣ್ಣ ಸ್ಮರಣೆ 2025’ | ಜುಲೈ 16

    July 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ರಂಗ ಕಲಾವಿದೆ ಸುಶ್ಮಿತಾ ‘ನೀನಾಸಂ’ ತರಬೇತಿಗೆ ಆಯ್ಕೆ 
    Theatre

    ಕಾಸರಗೋಡಿನ ರಂಗ ಕಲಾವಿದೆ ಸುಶ್ಮಿತಾ ‘ನೀನಾಸಂ’ ತರಬೇತಿಗೆ ಆಯ್ಕೆ 

    July 3, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡಿನ ಯುವ ರಂಗನಟಿ ಸುಶ್ಮಿತಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ‘ನೀನಾಸಂ’ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ನೀನಾಸಂಗೆ ಆಯ್ಕೆ ಆಗಬೇಕೆಂಬುದು ಪ್ರತಿಯೊಬ್ಬ ರಂಗಭೂಮಿ ಕಲಾವಿದನ ಕನಸಾಗಿರುತ್ತದೆ. ಆ ನಿಟ್ಟಿನಲ್ಲಿ ಅಷ್ಟೇ ಶ್ರದ್ದೆ ಮತ್ತು ಪರಿಶ್ರಮದ ಅಗತ್ಯತೆ ಇದ್ದು, ಈಗಾಗಲೇ ಸಾವಿರಾರು ಕಲಾವಿದರು ಇಲ್ಲಿ ತರಬೇತಿ ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ.
    ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2020ರಲ್ಲಿ ‘ಸಾಹೇಬ್ರು ‘ಸಾಹೇಬ್ರು ಬಂದವೇ’ ನಾಟಕವನ್ನು ರಾಜ್ಯದ ಖ್ಯಾತ ರಂಗಭೂಮಿ ನಿರ್ದೆಶಕರಾದ ಡಾ. ಜೀವನ್ ರಾಂ ಸುಳ್ಯ ಇವರ ನಿರ್ದೇಶನದಲ್ಲಿ ಸಿದ್ಧಪಡಿಸಲಾಗಿತ್ತು. ರಾಜ್ಯಾದ್ಯಂತ ಸುಮಾರು 20 ಪ್ರದರ್ಶನಗಳನ್ನು ನೀಡಿದ ಈ ನಾಟಕ ರಂಗಭೂಮಿ ಪ್ರೇಕ್ಷಕರ ಮನ ಗೆದ್ದಿತ್ತು. ಇದರಲ್ಲಿ ಅಭಿನಯಿಸಿದ ಎಲ್ಲರೂ ರಂಗಭೂಮಿಗೆ ಹೊಸದಾಗಿ ಪರಿಚಯಗೊಂಡ ಕಲಾವಿದರೇ ಆಗಿದ್ದರು. ಇದರಲ್ಲಿ ಕಲ್ಮಕಾರಿನ ಪ್ರತಿಭೆ ಮಮತಾ ಕಳೆದ ಬಾರಿಯ ನೀನಾಸಂ ತರಬೇತಿಗೆ ಆಯ್ಕೆಯಾಗಿದ್ದು, ಇದೇ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರ ಮಾಡುತ್ತಿದ್ದ ಕೇರಳ ರಾಜ್ಯದ ಕಾಸರಗೋಡಿನ ಸುಶ್ಮಿತಾ ಮೋಹನ್ ಈ ಬಾರಿಯ ರಂಗ ತರಬೇತಿಗೆ ಆಯ್ಕೆಯಾಗುವುದರ ಮೂಲಕ ಅರೆಭಾಷೆ ರಂಗಭೂಮಿಗೆ ಮತ್ತೊಂದು ಗರಿ ತಂದಿದ್ದಾರೆ. ಸುಶ್ಮಿತಾ ಅವರು ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ನಿವಾಸಿ ಬೆಳ್ಳಿಪಾಡಿ ಪೆರುಂದಲಪದವು ಮೋಹನ್ ಮತ್ತು ಸುಶೀಲಾ ಅವರ ದ್ವಿತೀಯ ಪುತ್ರಿ.

    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡಿನಲ್ಲಿ ಯಕ್ಷಗಾನ ತರಗತಿ ಪ್ರಾರಂಭ | ಜುಲೈ 6
    Next Article ಕುಂದಾಪುರದ ಪ್ರಕಾಶಾಂಗಣ ಸ್ಟುಡಿಯೋದಲ್ಲಿ ‘ಶ್ವೇತಯಾನ-39’ನೆಯ ಕಾರ್ಯಕ್ರಮ
    roovari

    Add Comment Cancel Reply


    Related Posts

    ನಟನದಲ್ಲಿ ‘ಸುಬ್ಬಣ್ಣ ಸ್ಮರಣೆ 2025’ | ಜುಲೈ 16

    July 15, 2025

    ಅಭಿನಯ ತರಂಗ ವತಿಯಿಂದ ‘ಅಂತರಂಗದ ರಂಗ’ ಅಭಿನಯ ಶಿಬಿರ | ಆಗಸ್ಟ್ 01ರಿಂದ 15

    July 15, 2025

    ಬೆಂಗಳೂರಿನ ವಿಜಯನಗರ ಬಿಂಬದಲ್ಲಿ ‘ಭಾಸ’ನ ‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶನ | ಜುಲೈ 20

    July 14, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಕಟ್ಟೆ ಪುರಾಣ’ | ಜುಲೈ 13

    July 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications