Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ‘ವಸುಂಧರೋತ್ಸವ’ದಲ್ಲಿ ಭರತನಾಟ್ಯ ಪ್ರದರ್ಶನ

    November 28, 2025

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ತಾಳಮದ್ದಳೆ ಅರ್ಥಧಾರಿ ಕಾಂತ ರೈ ಸಂಸ್ಮರಣೆ

    November 28, 2025

    ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಕೊಂಕಣಿ ಮತ್ತು ಮರಾಠಿ ಬರಹಗಾರ ಮಹಾಬಲೇಶ್ವರ ಸೈಲ್ ಆಯ್ಕೆ

    November 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ: ವಿಚಾರ ಸಂಕಿರಣ
    News

    ಮಂಗಳೂರು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ: ವಿಚಾರ ಸಂಕಿರಣ

    February 24, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    24 ಫೆಬ್ರವರಿ 2023, ಮಂಗಳೂರು: ಹಳೆಯ ತಳಹದಿಯಲ್ಲಿ ಹೊಸದು ರೂಪುಗೊಳ್ಳುವಲ್ಲಿ ವಸ್ತು ಸಂಗ್ರಹಾಲಯಗಳು ಹಿರಿದಾದ ಪಾತ್ರ ವಹಿಸುತ್ತಿವೆ. ಇದರಿಂದ ಈ ಕಾಲದಲ್ಲಿ ನಿಂತು ಭೂತ ಕಾಲವನ್ನು ನೋಡುವ ಜತೆಗೆ ತುಳುನಾಡಿನ ಬದುಕು ಕೃಷಿ ಪರಂಪರೆ, ಅವಿಭಕ್ತ ಕುಟುಂಬದ ಕಲ್ಪನೆಯನ್ನು ಕಟ್ಟಿಕೊಡುವ ಕಾರ್ಯವನ್ನು ತುಳು ವಸ್ತು ಸಂಗ್ರಹಾಲಯ ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹೇಮಾವತಿ ವೀ. ಹೆಗ್ಗಡೆ ಹೇಳಿದರು.
    ಅವರು ಬಿ.ಸಿ. ರೋಡ್ ನ ಸಂಚಯ ಗಿರಿಯಲ್ಲಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ 30ರ ನೆನಪಿನ ಹಿನ್ನೆಲೆಯಲ್ಲಿ ವಿಚಾರ ಸಂಕಿರಣ-ಅರಿವು ಯಾನ ಮಾಳಿಕೆಯ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 23, ಫೆಬ್ರವರಿಯಂದು ಉದ್ಘಾಟಿಸಿ ಮಾತನಾಡಿದರು.
    ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯವು ಅಬ್ಬಕ್ಕನ ಇತಿಹಾಸ ಪರಿಚಯಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಸೆಲೆ, ವಿದ್ವಾಂಸರಿಗೆ ಅಧ್ಯಯನ ಕೇಂದ್ರವಾಗಿದ್ದು, ನಾಡಿನ ತನ್ಮಯತೆ ಕಲಾತ್ಮಕತೆಯನ್ನು ಪರಿಚಯಿಸುತ್ತಿದೆ . ಪ್ರೊ | ತುಕಾರಾಮ ಪೂಜಾರಿ ದಂಪತಿ ರಾಣಿಯ ಜೀವನ ವಿವರಿಸುವ ಜತೆಗೆ ನಾಡಿನ ಬದುಕನ್ನು ವಿವರಿಸುವುದಕ್ಕಾಗಿ ತಮ್ಮ ಸಂಪತ್ತನ್ನೇ ಧಾರೆ ಎರೆದಿದ್ದಾರೆ ಎಂದರು.
    ಅನಿವಾಸಿ ಭಾರತೀಯ ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಮಾತನಾಡಿ, ತುಳುನಾಡಿನ ಇತಿಹಾಸದ ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ಕೀರ್ತಿ ಈ ಕೇಂದ್ರಕ್ಕೆ ಸಲ್ಲುತ್ತದೆ ಎಂದರು. ಹಿರಿಯ ವಿದ್ವಾಂಸ ಡಾ| ಪಿ.ಎನ್. ನರಸಿಂಹಮೂರ್ತಿ ಹಾಗೂ ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೆ. ಶಂಕರ ಭಟ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ಮತ್ತಿತರರಿದ್ದರು.

    ಕೃತಿ ಬಿಡುಗಡೆ: ‘ಆಳುಪರು–ಕರಾವಳಿ ಕರ್ನಾಟಕದ ಒಂದು ಪ್ರಾಚೀನ ಅರಸು ಮನೆತನ” ಹಾಗೂ “ಐಗಳ್ ಎಂಬ ದ.ಕ. ಇತಿಹಾಸದ ದಂತಕಥೆ” ಕೃತಿಯನ್ನು ಬಿಡುಗಡೆಗೊಳಿಸಲಾಯಿತು ಸುರೇಶ್ ಕಿಣಿ ಉಪ್ಪಿನಂಗಡಿ, ಮಾಧವ ರೈ ಪೆರ್ನೆ ಅವರನ್ನು ಗೌರವಿಸಲಾಯಿತು ಡಾ.| ಸಾಯಿಗೀತಾ, ಗಾಯತ್ರಿ ಲೋಕೇಶ್ ಸನ್ಮಾನ ಪತ್ರ ವಾಚಿಸಿದರು. ನಮಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತುಳುವ ಇತಿಹಾಸ ಒಂದು ಅವಲೋಕನ ಹಾಗೂ ಸ್ಮಾರಕ ಸಂರಕ್ಷಣೆ : ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ವಿಚಾರದ ಕುರಿತು ಗೋಷ್ಟಿಗಳು ನಡೆದವು.

    Share. Facebook Twitter Pinterest LinkedIn Tumblr WhatsApp Email
    Previous Articleಸಂಚಾರಿ ಥಿಯೇಟರ್ “ಮಿಸ್ ಅಂಡರ್ ಸ್ಟ್ಯಾಂಡಿಂಗ್” 24, 25ರಂದು ಬೆಂಗಳೂರಿನಲ್ಲಿ
    Next Article ಮದುವೆಯೆಂಬ ಪೇಚಾಟದ ಒಂದು ಹಾಸ್ಯಮಯ ಚಿತ್ರಣ ‘ಸೀತೂ ಮದುವೆ’ ಫೆ25ಕ್ಕೆ ಬೆಂಗಳೂರಿನಲ್ಲಿ
    roovari

    Add Comment Cancel Reply


    Related Posts

    ಸ್ವರ, ತಾಳ, ಲಯಗಳ ಮಿಲನವೇ ಸಂಗೀತ – ನಿವೃತ್ತ ಡಿವೈಎಸ್ಪಿ ಟಿ.ಪಿ. ರಂಜಿತ್

    November 27, 2025

    ನೃತ್ಯಾಂತರಂಗದಲ್ಲಿ ಅಮೇರಿಕಾದ ಕಲಾವಿದೆಯಿಂದ ಅದ್ಭುತ ಕೂಚಿಪುಡಿ ನೃತ್ಯ

    November 27, 2025

    ಖ್ಯಾತ ಯಕ್ಷಗಾನ ಪ್ರಸಂಗಕರ್ತ, ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ಸ್ತ್ರೀ ವೇಷದಾರಿ ಕಂದಾವನ ರಘುರಾಮ ಶೆಟ್ಟಿ ನಿಧನ

    November 27, 2025

    ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಲ್ಲಿ “ಕೃಷ್ಣಾನಂದ ಲಹರಿ”

    November 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.