Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಆಗಸ್ಟ್ 03

    July 30, 2025

    ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ‘ತಿಂತಿಣಿ ಮೌನೇಶ್ವರ’ | ಆಗಸ್ಟ್ 03

    July 30, 2025

    ಪುಸ್ತಕ ವಿಮರ್ಶೆ | ʼಕನ್ನಡತನʼ ಎಂಬ ಪ್ರಜ್ಞೆಯ ಅಸಲಿ ಮುಖ

    July 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಲಾಗ್ರಾಮದಲ್ಲಿ ‘ಕುದುರೆ ಬಂತು ಕುದುರೆ’ ನಾಟಕ ಪ್ರದರ್ಶನ | ಜುಲೈ 13
    Drama

    ಕಲಾಗ್ರಾಮದಲ್ಲಿ ‘ಕುದುರೆ ಬಂತು ಕುದುರೆ’ ನಾಟಕ ಪ್ರದರ್ಶನ | ಜುಲೈ 13

    July 12, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಸಂಚಾರಿ ಥಿಯೇಟರ್ ಇದರ ಆದಿರಂಗ 2023-24ರ ಸಮಾರೋಪ ಸಮಾರಂಭವನ್ನು ದಿನಾಂಕ 13-07-2024ರಂದು ಸಂಜೆ 6-30 ಗಂಟೆಗೆ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ವರ್ಷದ ಆದಿರಂಗದ ಶಿಬಿರಾರ್ಥಿಗಳು ರಾಮಚಂದ್ರ ದೇವ ಅವರ ‘ಕುದುರೆ ಬಂತು ಕುದುರೆ’ ನಾಟಕವನ್ನು ಅಭಿನಯಿಸುವುದರ ಮೂಲಕ ರಂಗಾರ್ಪಣೆ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ನೆನಪಿನಲ್ಲಿ ಈ ಹೊಸ ಗುಂಪು ನಾಟಕ ಮಾಡುವುದರ ಮೂಲಕ ವಿಜಯ್ ಗೌರವ ಸೂಚಿಸುತ್ತಿದೆ. 80ರ ಹರೆಯದ ಹಿರಿಯ ರಂಗಕಲಾವಿದರಾದ ಶ್ರೀನಿವಾಸ ಮೇಷ್ಟ್ರು ಮುಖ್ಯ ಅತಿಥಿಯಾಗಿ ನಮ್ಮೊಡನೆ ಇರುತ್ತಾರೆ.

    ಜುಲೈ 17ಕ್ಕೆ ಅವನ ಹುಟ್ಟುಹಬ್ಬ. ಜೂನ್ 15ಕ್ಕೇ ಅವನು ಹೊರಟ.
    ಈ ಆಸುಪಾಸಿನಲ್ಲಿ ಅವನ ನೆನಪಿನಲ್ಲಿ ಸಂಚಾರಿ ಥಿಯೇಟರ್ ಕಳೆದ ಮೂರು ವರುಷದಿಂದ ನಾಟಕ ಪ್ರದರ್ಶನ ಮಾಡುತ್ತಿದೆ. ರಂಗಭೂಮಿಯಲ್ಲಿ ನಮ್ಮೊಡನೆ ಕಳೆದ ಈ ಸಂಚಾರಿ ವಿಜಯನಿಗೆ ಹುಟ್ಟುಹಬ್ಬಕ್ಕೆಂದು ಮತ್ತೆಂಥಹ ಉಡುಗೊರೆ ನೀಡಲು ಸಾಧ್ಯ ?

    ನಾಟಕದ ಬಗ್ಗೆ :
    ರಾಮಚಂದ್ರ ದೇವ ಅವರ ರಚನೆಯ ‘ಕುದುರೆ ಬಂತು ಕುದುರೆ’ ನಾಟಕ ಬದುಕಿನ ಪ್ರಯಾಣದಲ್ಲಿ ಹೇಗೆ ಎಲ್ಲಾ ವ್ಯಕ್ತಿಗಳೂ ಒಂದಲ್ಲ ಒಂದು ತಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಲು ಕನಸಿನ ಕುದುರೆ ಏರುತ್ತಾರೆ ಮತ್ತು ಏರುವ ಕುದುರೆಯ ಮೇಲೆ ಕುಳಿತವರು ಗುರಿ ಮುಟ್ಟುತ್ತಾರೋ…. ಅಲ್ಲೇ ಜೋತಾಡುತ್ತಾರೋ… ಕೆಳಗುರುಳಿ ಬೀಳುತ್ತಾರೋ…. ಇದರ ಜೊತೆಯಲ್ಲಿಯೇ ವಿನಾಶದ ಬಗ್ಗೆ ಯಾವಾಗಲೂ ಎಚ್ಚರದ ಗಂಟೆಯೊಂದು ಹೊಡಯುತ್ತಲೇ ಇದ್ದರೂ ಕನಸಿನ ಕುದುರೆ ಏರುವುದು ಮಾತ್ರ ನಿರಂತರವಾಗಿ ನಡೆದೇ ಇರುತ್ತದೆ. ಕನಸುಗಳು ಇಲ್ಲದೇ ಬದುಕುವುದಾದರೂ ಹೇಗೆ ? ಆದರೂ ವಾಸ್ತವ ಯಾವತ್ತೂ ಹಾರುವ ಮನಸ್ಸುಗಳನ್ನು ಕೆಳಗೆ ಎಳೆಯುತ್ತಲೇ ಇರುತ್ತದೆ. ಈ ಎರಡರ ಹೊಯ್ದಾಟವೇ ‘ಕುದುರೆ ಬಂತು ಕುದುರೆ’. ಬನ್ನಿ ಹೊಸ ಗುಂಪನ್ನು ಪ್ರೋತ್ಸಾಹಿಸೋಣ. ಸಂಚಾರಿ ವಿಜಯ್ ನನ್ನು ಸಂಭ್ರಮಿಸೋಣ.

    Share. Facebook Twitter Pinterest LinkedIn Tumblr WhatsApp Email
    Previous Articleನಾಟಕ ವಿಮರ್ಶೆ | ‘ಉರಿಯ ಉಯ್ಯಾಲೆ’ ಏಕವ್ಯಕ್ತಿ ಪ್ರದರ್ಶನ
    Next Article ಮಂಗಳೂರಿನ ಪುರಭವನದಲ್ಲಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ | ಜುಲೈ 13
    roovari

    Add Comment Cancel Reply


    Related Posts

    ಬೆಂಗಳೂರಿನ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಆಗಸ್ಟ್ 03

    July 30, 2025

    ಮೈಸೂರಿನ ಕಲಾಮಂದಿರ ಆವರಣದಲ್ಲಿ ‘ನಟನಾಭ್ಯಾಸ ಶಿಬಿರ’ | ಆಗಸ್ಟ್ 04ರಿಂದ 15

    July 30, 2025

    ಬೆಂಗಳೂರಿನ ನಯನ ರಂಗಮಂದಿರದಲ್ಲಿ ‘ಜೆ.ಪಿ. ಅಭಿನಂದನೆ’ | ಜುಲೈ 31

    July 30, 2025

    ಮೇಲುಕೋಟೆಯಲ್ಲಿ ‘ಚಿಗುರು’ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ | ಜುಲೈ 31

    July 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.