Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ‘ಫೂಲನ್ ದೇವಿ’ ನಾಟಕ ಪ್ರದರ್ಶನ | ಜುಲೈ 31

    July 28, 2025

    ‘ಪತ್ತುಮುಡಿ’ ಸಭಾಭವನದಲ್ಲಿ ತುಳುಕೂಟದಿಂದ ಪುಸ್ತಕ ಬಿಡುಗಡೆ ಮತ್ತು ಸನ್ಮಾನ

    July 28, 2025

    ಅಭಿನಯ ತರಂಗ ನಾಟಕ ಶಾಲೆಯಿಂದ ಮಾಸದ ನೆನಪು ಸರಣಿ ನಾಟಕೋತ್ಸವ | ಜುಲೈ 30

    July 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ವತಿಯಿಂದ ಕುಂಬ್ಳೆ ಶ್ರೀಧರ ರಾವ್ ಇವರಿಗೆ ನುಡಿನಮನ ಕಾರ್ಯಕ್ರಮ
    Yakshagana

    ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಉಪ್ಪಿನಂಗಡಿ ಘಟಕದ ವತಿಯಿಂದ ಕುಂಬ್ಳೆ ಶ್ರೀಧರ ರಾವ್ ಇವರಿಗೆ ನುಡಿನಮನ ಕಾರ್ಯಕ್ರಮ

    July 18, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಪ್ಪಿನಂಗಡಿ : ಉಪ್ಪಿನಂಗಡಿ ಪರಿಸರದ ನೆಕ್ಕಿಲಾಡಿ ನಿವಾಸಿ ತೆಂಕುತಿಟ್ಟಿನ ಅಗ್ರಮಾನ್ಯ ಹಿರಿಯ ಕಲಾವಿದರಾದ ಶ್ರೀಮಾನ್ ಕುಂಬ್ಳೆ ಶ್ರೀಧರ ರಾವ್ ಇವರ ಆಕಸ್ಮಿಕ ನಿಧನಕ್ಕೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮವು ಉಪ್ಪಿನಂಗಡಿಯ ಶ್ರೀಗುರು ಸುಧೀಂದ್ರ ಕಲಾ ಮಂದಿರದಲ್ಲಿ ದಿನಾಂಕ 14-07-2024ರಂದು ಜರಗಿತು.

    ಶ್ರೀರಾಮ ಶಾಲೆಯ ಸಂಚಾಲಕರಾದ ಶ್ರೀ ಯು.ಜಿ. ರಾಧ ಇವರು ನುಡಿನಮನ ಸಲ್ಲಿಸುತ್ತಾ “ಶ್ರೀಧರಣ್ಣ ಇವರು ಕಲಾವಿದರಾಗಿ ಹೆಸರು ಗಳಿಸುವುದಕ್ಕಿಂತಲೂ ಹೆಚ್ಚು ಅವರು ಮಾಡಿದ ಪಾತ್ರಗಳು ಧ್ವನಿಯಾಗಿ ಹೆಸರುವಾಸಿಯಾಗಿ ಜೀವಕಳೆ ತಂದ ಅದ್ಭುತ ಕಲೆಗಾರ. ಶ್ರೀಧರ ರಾವ್ ಎಂಬ ಯಕ್ಷರಂಗದ ಅಮೂಲ್ಯ ರತ್ನವೊಂದು ಕಳಚಿಕೊಂಡದ್ದು ಯಕ್ಷಗಾನಕ್ಕೆ ಬಲು ದೊಡ್ಡ ನಷ್ಟ. ಅವರ ಸಹೃದಯತೆ, ಹೃದಯ ವೈಶಾಲ್ಯತೆ, ಕಲೆಯ ಪ್ರೀತಿ ವಿಶ್ವಾಸವು ಮುಂದಿನ ಯುವ ಯಕ್ಷಗಾನ ಕಲಾವಿದರಿಗೆ ಸ್ಪೂರ್ತಿದಾಯಕವಾಗಿರಲಿ” ಎಂದು ಆಶಿಸಿದರು.

    ಯಕ್ಷ ಸಂಗಮ ಉಪ್ಪಿನಂಗಡಿಯ ಕೃಷ್ಣ ಮಲ್ಲಿಗೆ ಮಾತನಾಡುತ್ತಾ ತನ್ನ ಮತ್ತು ಶ್ರೀಧರಣ್ಣನ ಜೊತೆ ಸುಮಾರು 25 ವರ್ಷಗಳ ಒಡನಾಟ ಸ್ಮರಿಸಿಕೊಂಡರು. ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧಾಕರ ಶೆಟ್ಟಿಯವರು “ಯಕ್ಷಗಾನ ಕ್ಷೇತ್ರದಲ್ಲಿ ಅನೇಕ ಕುಂದು ಕೊರತೆಗಳಿದ್ದರೂ ಅದಕ್ಕೆ ಅಪವಾದವೆಂಬಂತೆ ತನ್ನ ಜೀವನ ಮತ್ತು ವೃತ್ತಿಯಲ್ಲಿ ಎಂದೂ ಕಪ್ಪುಚುಕ್ಕೆ ಬಾರದಂತೆ ಜಾಗ್ರತೆ ವಹಿಸಿದ ಅಗ್ರಮಾನ್ಯ ಕಲಾವಿದರಲ್ಲಿ ಅಗ್ರಗಣ್ಯ ಕಲಾವಿದರು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಕೆ. ಜಗದೀಶ ಶೆಟ್ಟಿಯವರು ಮಾತನಾಡಿ ತನಗೆ ಯಕ್ಷಗಾನದ ಕಡೆಗೆ ಆಸಕ್ತಿ ಮೂಡಿದ ನಂತರದಲ್ಲಿ ಪರಿಚಯವಾದ ಕುಂಬ್ಳೆ ಶ್ರೀಧರ ರಾವ್ ಇವರ ಪ್ರೀತಿ ವಿಶ್ವಾಸದ ಮಾತು ಹಾಗೂ ಘಟಕದ ಕಾರ್ಯಕ್ರಮಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ಪ್ರೋತ್ಸಾಹವನ್ನು ನೆನಪಿಸಿಕೊಂಡರು. ನಮ್ಮೂರ ಅತ್ಯುನ್ನತ ಕಲಾವಿದರನ್ನು ಕಳೆದುಕೊಂಡ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಯಕ್ಷ ರಂಗ ಮತ್ತು ಅವರ ಸಂಸಾರಕ್ಕೆ ನೀಡಲೆಂದು ಶ್ರೀ ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಹಲವಾರು ಯಕ್ಷಗಾನಾಭಿಮಾನಿಗಳು, ಘಟಕದ ಸದಸ್ಯರು ಭಾಗವಹಿಸಿ ಸಂತಾಪ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ರವೀಶ ಎಚ್.ಟಿ. ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಆಗುಂಬೆ ಎಸ್. ನಟರಾಜ್ ಮತ್ತು ಶ್ರೀಧರ ಬನವಾಸಿ ಇವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಘೋಷಣೆ
    Next Article ವಿಮರ್ಶೆ | ಡಾ. ಶ್ರೀಪಾದ ಶೆಟ್ಟರ ಆಲೋಚನಾ ವೇದಿಕೆಯ ‘ಸುಮನಶ್ರೀ ಪ್ರಶಸ್ತಿ’
    roovari

    Add Comment Cancel Reply


    Related Posts

    ಬ್ರಹ್ಮಾವರದ ನಿರ್ಮಲ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿ

    July 28, 2025

    ರಾಮಕೃಷ್ಣ ಕಾಲೇಜಿನಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನದ ಪ್ರದರ್ಶನ

    July 26, 2025

    ಪರ್ಕಳ ಯಕ್ಷಗಾನ ಕೇಂದ್ರದಲ್ಲಿ ‘ಬಡಗುತಿಟ್ಟು – ನಾಟ್ಯ ತರಬೇತಿ’ | ಜುಲೈ 27

    July 26, 2025

    ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಉದ್ಘಾಟನೆಗೊಂಡ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’

    July 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.