Subscribe to Updates

    Get the latest creative news from FooBar about art, design and business.

    What's Hot

    ʻಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ-2025ʼ- 2ನೇ ದಿನದ ವಿಚಾರಗೋಷ್ಠಿ

    August 12, 2025

    ಡಾ.ಎಸ್.ರಾಮಲಿಂಗೇಶ್ವರ ಇವರು ಬಿ. ಎಂ. ಶ್ರೀ. ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ

    August 12, 2025

    ಬುಕ್‌ ಬ್ರಹ್ಮ ಕಥಾ ಸ್ಪರ್ಧೆ 2025 – ʻಪೆರೇಡ್ ಪೊಡಿಮೋನುʼ ವಿಜೇತ ಕಥೆ

    August 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೇಘರಂಜನಾ ತಂಡದಿಂದ ‘ಭಾವ ಶಿಬಿರ’ 
    Camp

    ಮೇಘರಂಜನಾ ತಂಡದಿಂದ ‘ಭಾವ ಶಿಬಿರ’ 

    July 18, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕಾಸರಗೋಡು : ಚಂದ್ರಗಿರಿಯ ‘ಮೇಘರಂಜನಾ’ ತಂಡವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮತ್ತು ‘ರಂಗ ಚಿನ್ನಾರಿ’ ಕಾಸರಗೋಡು ಇದರ ಸಹಕಾರದೊಂದಿಗೆ ಆಯೋಜಿಸಿದ ‘ಭಾವ ಶಿಬಿರ’ವು ದಿನಾಂಕ 13-07-2024 ರಂದು ಕಾಸರಗೋಡಿನ ಕೂಡ್ಲು ಗೋಪಾಲಕೃಷ್ಣ ಪ್ರೌಢ ಶಾಲೆಯ ಸಭಾಂಗಣದಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವ್ಯವಸ್ಥಾಪಕ ಹಾಗೂ ಗಾಯಕರಾದ ಕೆ. ಜಿ. ಶ್ಯಾನುಭೋಗ್ ಮಾತನಾಡಿ “ಸಂಗೀತವನ್ನು ಅಭ್ಯಾಸ ಮಾಡುವ ಮೂಲಕ ಸಂಸ್ಕಾರಯುತ ಜೀವನ ಸಾಗಿಸಲು ಸಾಧ್ಯ. ಶ್ರುತಿ, ತಾಳ, ಲಯಬದ್ಧವಾಗಿ ಸಂಗೀತವನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅದನ್ನೇ ನಮ್ಮ ಜೀವನದಲ್ಲಿ ಅಳವಡಿಸಿದಾಗ ನಾವು ಸಭ್ಯರಾಗಿ ಬದುಕಬಹುದು. ಭಾವಗೀತೆಯ ಮೂಲಕ ಭಾವನೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಅದರಿಂದ ಮಾನವೀಯತೆ ಮೌಲ್ಯಗಳನ್ನು ಹೆಚ್ಚಿಸಬಹುದು.” ಎಂದು ಹೇಳಿದರು.
    ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ “ಕಲಾ ಗ್ರಾಮವಾದ ಕೂಡ್ಲಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಮತ್ತು ಉದಯೋನ್ಮಖ ಕಲಾವಿದರ ಸೃಷ್ಟಿ ಆಗಬೇಕು.” ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಮೇಘರಂಜನದ ನಿರ್ದೇಶಕರಾದ ಪುರುಷೋತ್ತಮ ಕೊಪ್ಪಲ್ ಮಾತನಾಡಿ “ಇಂತಹ ಶಿಬಿರಗಳ ಮೂಲಕ ಮಕ್ಕಳಿಗೆ ವೇದಿಕೆ ಸೃಷ್ಟಿಸುವಲ್ಲಿ ‘ಮೇಘರಂಜನ’ ಪ್ರಯತ್ನಿಸಲಿದೆ.” ಎಂದು ಹೇಳೀದರು. ಖ್ಯಾತ ಹಾಡುಗಾರ ಕಿಶೋರ್ ಕುಮಾರ್‌ ಪೆರ್ಲ, ಪ್ರಭಾಕರ್, ಸವಿತಾ ಟೀಚ‌ರ್ ಕೂಡ್ಲು ಸಮಾರಂಭಕ್ಕೆ ಶುಭಹಾರೈಸಿದರು.
    ಕಿರಣ್ ಪ್ರಸಾದ್ ಕೂಡ್ಲು ಸ್ವಾಗತಿಸಿ, ವಂದಿಸಿದರು. ಬಳಿಕ ಕೂಡ್ಲು ಪ್ರೌಢಶಾಲೆಯ ಮಕ್ಕಳಿಗೆ ನಾಡಗೀತೆ ಹಾಗೂ ಭಾವಗೀತೆಗಳನ್ನು ಹಾಡುಗಾರ ಕಿಶೋರ್ ಕುಮಾರ್ ಪೆರ್ಲ ಕಲಿಸಿಕೊಟ್ಟರು. ಪ್ರಭಾಕರ್, ಸವಿತಾ ಟೀಚರ್, ಉಷಾ ಟೀಚ‌ರ್ ಸಹಕರಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಮರ್ಶೆ | ಡಾ. ಶ್ರೀಪಾದ ಶೆಟ್ಟರ ಆಲೋಚನಾ ವೇದಿಕೆಯ ‘ಸುಮನಶ್ರೀ ಪ್ರಶಸ್ತಿ’
    Next Article ತೆಕ್ಕಟ್ಟೆ ಹಯಗ್ರೀವದಲ್ಲಿ ‘ಆಷಾಡದಲ್ಲೊಂದು ಚಿಂತನ – ಮಂಥನ’ ಸಂವಾದ ಕಾರ್ಯಕ್ರಮ
    roovari

    Add Comment Cancel Reply


    Related Posts

    ಮೈಸೂರಿನ ರಾಮ ಗೋವಿಂದ ಸಭಾಂಗಣದಲ್ಲಿ ‘ಅರ್ಪಣಂ’ ನೃತ್ಯ ಕಾರ್ಯಕ್ರಮ | ಆಗಸ್ಟ್ 16 ಮತ್ತು 17

    August 12, 2025

    ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ | ಆಗಸ್ಟ್ 31

    August 12, 2025

    ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಕಮಲಾಂಜಲಿ’ ನೃತ್ಯಾರ್ಚನೆ | ಆಗಸ್ಟ್ 13

    August 12, 2025

    ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 25

    August 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.