Subscribe to Updates

    Get the latest creative news from FooBar about art, design and business.

    What's Hot

    ವಿಶ್ವ ದಾಖಲೆಗೆ ಪೂರ್ಣ ವಿಶ್ವಾಸದಿಂದ ಮುಂದಡಿಯಿಟ್ಟ ವಿದುಷಿ ದೀಕ್ಷಾ ವಿ.

    August 22, 2025

    ಉಡುಪಿಯಲ್ಲಿ ‘ಸಂಗಮ’ ಸಮೂಹ ಚಿತ್ರಕಲೆ ಪ್ರದರ್ಶನ ಹಾಗೂ ಗುರುವಂದನೆ | ಆಗಸ್ಟ್ 23ರಿಂದ 31

    August 22, 2025

    ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 05

    August 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆ ಹಯಗ್ರೀವದಲ್ಲಿ ಗುರುವಂದನಾ ಕಾರ್ಯಕ್ರಮ 
    Yakshagana

    ತೆಕ್ಕಟ್ಟೆ ಹಯಗ್ರೀವದಲ್ಲಿ ಗುರುವಂದನಾ ಕಾರ್ಯಕ್ರಮ 

    July 23, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ತೆಕ್ಕಟ್ಟೆ: ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದಲ್ಲಿ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ‘ಗುರುವಂದನಾ ಕಾರ್ಯಕ್ರಮ’ವು ತೆಕ್ಕಟ್ಟೆ ಹಯಗ್ರೀವದಲ್ಲಿ 22 ಜುಲೈ 2024ರಂದು ನಡೆಯಿತು.
    ಕಾರ್ಯಕ್ರಮದಲ್ಲಿ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಕೃಷ್ಣಯ್ಯ ಆಚಾರ್ ಬಿದ್ಕಲ್ ಕಟ್ಟೆ, ಲಂಬೋದರ ಹೆಗಡೆ ನಿಟ್ಟೂರು, ಶ್ರೀಮತಿ ಶಾರದಾ ಹೊಳ್ಳ, ಗಿರೀಶ್ ಆಚಾರ್ ವಕ್ವಾಡಿ, ಅಮೃತಾ ಉಪಾಧ್ಯ, ವಿ. ಸುಂದರಂ, ಸುಧೀರ್ ತಲ್ಲೂರು ಈ ಎಲ್ಲಾ ಗುರುವನ್ನು ಶಿಷ್ಯರನ್ನೊಡಗೂಡಿಕೊಂಡು ಅಭಿನಂದಿಸಿದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ “ಮನುಷ್ಯರಾಗಿ ಹುಟ್ಟಿದ್ದೇವೆ. ನಮ್ಮ ಜೀವನ ಸುಗಮವಾಗಿ ನಡೆಯಬೇಕಾದರೆ ಮಾನಸಿಕವಾದ ನೆಮ್ಮದಿಗಾಗಿ ಯಾವುದಾದರೂ ಒಂದು ಕಲೆ ಬೇಕೇ ಬೇಕು. ಆದರೆ ಈಗಿನ ಸಮಾಜದಲ್ಲಿ ಕಲೆಯಿಂದಲೇ ಬದುಕುತ್ತೇವೆ ಎಂದು ಹೊರಡಬೇಡಿ. ಅದು ಪ್ರಸ್ತುತ  ಕಾಲಘಟ್ಟದಲ್ಲಿ ಕಷ್ಟ. ನಮಗೆ ಗುರು ಒಬ್ಬನೇ ಅಲ್ಲ. ವೇದಿಕೆಯನ್ನು ಹಂಚಿಕೊಡುವವನೂ ಗುರುವೇ. ವೇದಿಕೆಯ ಬಗೆಗೂ ಹೆದರಿಕೆ ಬೇಕು. ಹೆದರಿಕೆ ಇದ್ದರೆ ಮಾತ್ರ ಬೆಳೆಯುವುದಕ್ಕೆ ಸಾಧ್ಯ. ಗುರುವಿನಿಂದಲೇ ವೇದಿಕೆ ಪಡೆಯುತ್ತೀರಿ, ಗುರುವಿನಿಂದಲೇ ಕಲಿಯುತ್ತೀರಿ, ಗುರುವಿನಿಂದಲೇ ಬೆಳೆಯುತ್ತೀರಿ. ಗುರುವಿನಲ್ಲಿನ ಕಲೆಯನ್ನು ಮಾತ್ರ ಗುರುತಿಸಬೇಕು. ಆ ಗುರುವಿನ ಬಗೆಗೆ ಭಕ್ತಿ ಬೇಕು. ಜೀವನ ಎನ್ನುವುದು ಬರುವುದು, ಹೋಗುವುದು ಅಲ್ಲ. ಇರುವುದನ್ನು ಸ್ವೀಕರಿಸಬೇಕು. ಸಂಸ್ಥೆಗೆ ಬೆನ್ನೆಲುಬಾಗಿ ನಿಂತು ಸಂಸ್ಥೆಯ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಹಾರಿಸಿ.” ಎಂದು ಗುರು ಸಂಜೀವ ಸುವರ್ಣ ಬನ್ನಂಜೆ ಶುಭನುಡಿಯನ್ನಾಡಿದರು.
    ಸಂಗೀತ ಗುರು ಶ್ರೀಮತಿ ಶಾರದಾ ಹೊಳ್ಳ ಮಾತನಾಡಿ “ಮಕ್ಕಳ ಆಸಕ್ತಿಯನ್ನು ಗುರುತಿಸಿ, ಪೋಷಕರು ಕಲೆಯಲ್ಲಿ ತೊಡಗಿಸಿಕೊಳ್ಳಲು ಸಹಕರಿಸಬೇಕು. ಸಂಸ್ಥೆಯ ಸಾಂಸ್ಕೃತಿಕ ರಾಯಭಾರಿಯಾಗಿ ಕಲೆಯನ್ನು ಬೆಳೆಸುವಲ್ಲಿ ಸಮಾಜಕ್ಕೆ ಆಸ್ತಿಯಾಗಬೇಕು. ಇಂತಹ ಸಂಸ್ಥೆಗೆ ಪೋಷಕರು ಬೆಂಬಲವಾಗಿ ನಿಂತು ಮುನ್ನಡೆಸಲು ಸಹಕಾರಿಯಾಗಬೇಕು. ಮಕ್ಕಳ ಮನೋವಿಕಾಸವನ್ನು ವೃದ್ಧಿಸುವ ಕೆಲಸ ಕಲೆಯಿಂದಾಗುತ್ತದೆ.” ಎಂದರು.
    ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಕೇಂದ್ರದ ಶಿಷ್ಯರಿಂದ ಕೊರ್ಗಿ ಶಂಕರನಾರಾಯಣ ಉಪಾಧ್ಯರ ಗುರುವಂದನಾ ಗೀತೆಗೆ ನೃತ್ಯರೂಪಕ ರಂಗದಲ್ಲಿ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯಾಮೃತ’ ಅಂಗವಾಗಿ ಸಂವಾದ ಹಾಗೂ ಪ್ರಾತ್ಯಕ್ಷಿಕೆ
    Next Article ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನುಡಿನಮನ, ಉಪನ್ಯಾಸ ಹಾಗೂ ಸಂವಾದ | ಜುಲೈ 25
    roovari

    Add Comment Cancel Reply


    Related Posts

    ಶ್ರೀ ಭಗವತೀ ಯಕ್ಷಕಲಾ ಬಳಗದಿಂದ ಯಕ್ಷಗಾನಾರ್ಪಣೆ

    August 22, 2025

    ಕೋಟೇಶ್ವರದಲ್ಲಿ ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ

    August 22, 2025

    ಶ್ರೀ ಎಡನೀರು ಮಠದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಪ್ರದರ್ಶನ | ಆಗಸ್ಟ್ 22       

    August 21, 2025

    ಎಡನೀರಿನಲ್ಲಿ ಗಿರಿಜಾಕಲ್ಯಾಣ ಯಕ್ಷಗಾನ ಪ್ರದರ್ಶನ

    August 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.