Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಚಿಂತನಶೀಲ ಬರಹಗಾರ ಎಂ. ಎಸ್. ಕೆ. ಪ್ರಭು

    July 15, 2025

    ಪುಸ್ತಕ ವಿಮರ್ಶೆ – ಪೀಳಿಗೆಯ ಯೋಚನೆಗಳನ್ನು ಬದಲು ಮಾಡಬಲ್ಲ ಕೃತಿ – ‘ಮಾತು ಎಂಬ ವಿಸ್ಮಯ’

    July 15, 2025

    ನಟನದಲ್ಲಿ ‘ಸುಬ್ಬಣ್ಣ ಸ್ಮರಣೆ 2025’ | ಜುಲೈ 16

    July 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ ಕುಮಾರ ಇವರ ಗಾಯನ ಕಛೇರಿ
    Music

    ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಎಸ್. ಮೋಹನ ಕುಮಾರ ಇವರ ಗಾಯನ ಕಛೇರಿ

    August 5, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಕರ್ನಾಟಕ ಹಾಗೂ ಶ್ರೀ ರಾಮ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಈಸ್ಟ್ ಎಂಡ್ ರಾಮ ಮಂದಿರದಲ್ಲಿ 3 ಆಗಸ್ಟ್ 2024ರಂದು ಒಕ್ಕೂಟದ ಗೌರವಾಧ್ಯಕ್ಷರಾದ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀ ಕೆ.ಎಸ್. ಮೋಹನ ಕುಮಾರ ಇವರ ಗಾಯನ ಕಛೇರಿ ನಡೆಯಿತು. ಶ್ರೀಯುತರು ಅಟತಾಳದ ಕಾನಡ ರಾಗದ ವರ್ಣದೊಂದಿಗೆ ಪ್ರಾರಂಭಿಸಿದ ಕಛೇರಿ ಹಂಸಧ್ವನಿ ರಾಗದ ಮುತ್ತಯ್ಯ ಭಾಗವತರ ಗಂಗಣಪತೆ, ಮಾಯಮಾಳವಗೌಳ ರಾಗದ ತುಳಸೀದಳ ಮತ್ತು ದೇವಮನೋಹರಿ ರಾಗದ ಪಲುಕವದೇಮಿರಾ ಕೃತಿಯ ಮೂಲಕ ಸಭಿಕರ ಮನ ಗೆದ್ದರು.

    ಅಂದಿನ ಮುಖ್ಯ ರಾಗ ಶುಭಪಂತುವರಾಳಿ ರಾಗಾಲಾಪನೆ, ಮುತ್ತಯ್ಯ ಭಾಗವತರ ರಚನೆ ಮನೋನ್ಮಣಿ ಕೃತಿಯ ತನುಧನ ಮನವ ತವಕದಿ ನೀಡಿ ಚರಣ ಭಾಗದ ನೆರವಲ್ ಹಾಗೂ ವಿಸ್ತಾರವಾದ ಸ್ವರ ಕಲ್ಪನೆ ಸಭಿಕರ ಕರತಾಡನಕ್ಕೆ ಸಾಕ್ಷಿಯಾಯಿತು. ಲೋಕ ಪ್ರಿಯ ಮೃದಂಗ ಹಿರಿಯ ವಿದ್ವಾಂಸರಾದ ಸುಬ್ರಹ್ಮಣ್ಯ ಮೋಹಿತೆಯವರು, ಖಂಜೀರ ರಾಹುಲ್ ಮತ್ತು ಬೆಟ್ಟ ವೆಂಕಟೇಶ್ ಮೋರ್ಚಿಂಗ್ ಇವರ ತನಿ ಆವರ್ತನ ತುಂಬಾ ಸೊಗಸಾಗಿ ಮೂಡಿ ಬಂತು. ಪಿಟೀಲಿನಲ್ಲಿ ಹಿರಿಯ ವಿದ್ವಾಂಸರಾದ ಬಿ.ಎಸ್. ನಾಗರಾಜ್ ಉತ್ತಮವಾಗಿ ಸಹಕರಿಸಿದರು. ಶ್ರೀ ರಾಮ ಮಂಡಳಿಯ ಅಧ್ಯಕ್ಷರಾದ ಯೋಗ ನರಸಿಂಹಸ್ವಾಮಿ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಿ ಅನಂತ ನಾರಾಯಣ ಸರ್ವ ಸದಸ್ಯರು ದಕ್ಷಿಣ ವಲಯ ಒಕ್ಕೂಟದ ಸಂಚಾಲಕರಾದ ವಿದುಷಿ ಶ್ರೀಮತಿ ಪ್ರಿಯಾ ಗಣೇಶ್, ವಿದ್ವಾನ್ ಡಾ. ಶ್ರೀನಿವಾಸ ಮೂರ್ತಿ, ವಿದ್ವಾನ್ ಬೆಟ್ಟ ವೆಂಕಟೇಶ್, ಶ್ರೀಮತಿ ಸರಸ್ವತಿ ಹಾಗೂ ಶ್ರೀಮತಿ ಲಕ್ಷ್ಮಿದೇವಿ ಮೋಹನ ಕುಮಾರ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ಪ್ರಕಟಣೆಗೆ ಆಹ್ವಾನ
    Next Article ಎಚ್.ಎಲ್. ಸೀತಾದೇವಿಗೆ ‘ನಾಗಮಣಿ ಎಸ್. ರಾವ್ ಪ್ರಶಸ್ತಿ’
    roovari

    Comments are closed.

    Related Posts

    ವಿಶ್ವದಾಖಲೆ ಮೂಡಿಸಿರುವ ಗಾಯಕನಿಗೆ ‘ಯಶೋಭಿನಂದನೆ’ ಸನ್ಮಾನ ಸಮಾರಂಭ

    July 15, 2025

    ಹಯಗ್ರೀವದಲ್ಲಿ ಉದ್ಘಾಟನೆಗೊಂಡ ಕರೋಕೆ ಗಾಯನ ಕಾರ್ಯಕ್ರಮ

    July 15, 2025

    ಭರತಾಂಜಲಿಯ ಕಿಂಕಿಣಿ ತ್ರಿಂಶತ್ ಸಂಭ್ರಮದಲ್ಲಿ ‘ನೃತ್ಯಾಮೃತಂ 2025’

    July 15, 2025

    ತೆಕ್ಕಟ್ಟೆಯ ಹಯಗ್ರೀವದಲ್ಲಿ ಸಂಗೀತ ಗುರು ಶಾರದ ವಿ. ಹೊಳ್ಳ ಇವರಿಗೆ ಗುರುವಂದನಾ ಕಾರ್ಯಕ್ರಮ

    July 15, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications