Subscribe to Updates

    Get the latest creative news from FooBar about art, design and business.

    What's Hot

    ಹಿಮಾಂಗಿ ಡಿ. ಉಳ್ಳಾಲ ಇವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

    January 10, 2026

    ಏಳು ಮಂದಿ ಸಾಧಕರಿಗೆ ಹಾಗೂ ಒಂದು ಸಂಸ್ಥೆಗೆ ‘ಸಂದೇಶ ಪ್ರಶಸ್ತಿ’ ಪ್ರಕಟ

    January 10, 2026

    ಕುಂಜತ್ತೂರಿನ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ಕಲಾಕುಂಚದ ವಾರ್ಷಿಕೋತ್ಸವ

    January 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಳಾಯಿಬೆಟ್ಟು ಇಲ್ಲಿನ ಫಲ್ಗುಣಿ ಸಭಾಭವನದಲ್ಲಿ ‘ರಂಗದಿನ’ ಸಮಾರಂಭ
    Book Release

    ಉಳಾಯಿಬೆಟ್ಟು ಇಲ್ಲಿನ ಫಲ್ಗುಣಿ ಸಭಾಭವನದಲ್ಲಿ ‘ರಂಗದಿನ’ ಸಮಾರಂಭ

    September 24, 2024Updated:September 23, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೈಕಂಬ : ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಳಾಯಿಬೆಟ್ಟು ಗುರುಪುರ, ‘ಕಲಾಭಿ ಥಿಯೇಟರ್’ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವುಗಳ ಸಹಯೋಗದಲ್ಲಿ ‘ರಂಗದಿನ’ ಸಮಾರಂಭ ಮತ್ತು ನಾಟಕ ಪ್ರದರ್ಶನವು ದಿನಾಂಕ 21 ಸೆಪ್ಟೆಂಬರ್ 2024ರ ಶನಿವಾರದಂದು ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ ಇದರ ಫಲ್ಗುಣಿ ಸಭಾಭವನದಲ್ಲಿ ನಡೆಯಿತು.

    ಇದೇ ಸಂದರ್ಭದಲ್ಲಿ ಹಿರಿಯ ಕವಿ, ಸಾಹಿತಿ ಹಾಗೂ ಜಾನಪದ ವಿದ್ವಾಂಸರಾದ ವಾಮನ ನಂದಾವರ ಇವರ ‘ಸಾವಿರದ ಕ್ಷಣಗಳು’ ಪುಸ್ತಕವನ್ನು ರಾಜಮಾರ್ಯದೆಯೊಂದಿಗೆ ಪಲ್ಲಕಿಯಲ್ಲಿ ಹೊತ್ತು ವಿಶೇಷ ರೀತಿಯಲ್ಲಿ ವೇದಿಕೆಗೆ ತಂದು ಲೋಕಾರ್ಪಣೆಗೊಳಿಸಲಾಯಿತು. ಪುಸ್ತಕ ಲೋಕಾರ್ಪಣೆಗೊಳಿಸಿದ ಸಾಹಿತಿ ಮುದ್ದು ಮೂಡುಬೆಳ್ಳೆ ಮಾತನಾಡಿ “ಗ್ರಾಮದ ಜನರಿಗೆ ಒಟ್ಟಾಗಿ ಖುಷಿಕೊಡುವ ಕಾರ್ಯಕ್ರಮ ಇದಾಗಿದೆ. ನಾಟಕ ಶಿಕ್ಷಣದ ಒಂದು ಭಾಗ. ಆ ಮೂಲಕ ವ್ಯಕ್ತಿತ್ವ ಬೆಳೆಯುತ್ತದೆ. ರಂಗ ಮಾಧ್ಯಮ ಒಳ್ಳೆಯ ಅವಕಾಶ. ಇದರತ್ತ ಆಡಳಿತ, ಶಾಲಾ ಶಿಕ್ಷಕರು ಗಮನ ಹರಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪ್ರೇರಣೆಯಾಗಲಿ.” ಎಂದರು.

    ನಿಟ್ಟೆ ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಿಕೆಯಾಗಿರುವ ಡಾ. ಸಾಯಿಗೀತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಕಲಾಭಿ ಮಂಗಳೂರು ಇದರ ಅಧ್ಯಕ್ಷೆಯಾದ ಡಾ. ಮೀನಾಕ್ಷಿ ರಾಮಚಂದ್ರ, ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ, ರಂಗಭೂಮಿ ಕಲಾವಿದ ರಾಜೀವ್ ಶೆಟ್ಟಿ ಸಲ್ಮಾಜೆ, ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌. ಡಿ. ಎಂ. ಸಿ. ಅಧ್ಯಕ್ಷ ಅಬ್ದುಲ್ ನಾಸಿರ್, ಶಾಲಾ ಮುಖ್ಯೋಪಾಧ್ಯಾಯನಿ ಜಾನೆಟ್ ರೋಜ್, ವಸತಿಶಾಲಾ ಶಿಕ್ಷಕ ಜಯಕರ ಶೆಟ್ಟಿ, ಮೌಲಾನ ಶಾಲಾ ಪ್ರಾಂಶುಪಾಲರಾದ ಗಂಗಾಧರ, ಉಳಾಯಿಲೆಟ್ಟು ಶ್ರೀ ಮಹಾಮಾಯೀ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ಹರೀಶ್ ಕಿನ್ನಿಬೆಟ್ಟು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್ ಸ್ವಾಗತಿಸಿ, ಚೇತನ್ ಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
    ಸಭಾ ಕಾರ್ಯಕ್ರಮದ ಬಳಿಕ ‘ಕಲಾಭಿ ಥಿಯೇಟರ್’ ತಂಡದ ಕಲಾವಿದರಿಂದ ‘ಹೋಳಿಗೆ ತುಪ್ಪ ಮತ್ತು ಪೋತರಾಜ’ ಆಧುನಿಕ ಶೈಲಿಯ ಜಾನಪದ ನಾಟಕ ಹಾಗೂ ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ‘ಮಳೆರಾಜನಿಗೊಂದು ಮನವಿ’ ನಾಟಕ ಪ್ರದರ್ಶನಗೊಂಡಿತು

    Share. Facebook Twitter Pinterest LinkedIn Tumblr WhatsApp Email
    Previous Articleಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ‘ಪ್ರತಿಭಾ ಕಾರಂಜಿ, ಚಿಣ್ಣರ ಉತ್ಸವ’ ಸಮಾರಂಭ
    Next Article ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ನಲ್ಲಿ ‘ಅಪರಾಧಿ ನಾನಲ್ಲ’ | ಅಕ್ಟೋಬರ್ 05
    roovari

    Comments are closed.

    Related Posts

    ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ’ ಕಥಾ ಸಂಕಲನ ಲೋಕಾರ್ಪಣೆ

    January 9, 2026

    ಮೈಸೂರಿನಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ -2026’ | ಜನವರಿ 11ರಿಂದ 18

    January 9, 2026

    ಮಂಗಳೂರಿನ ‘ಡಾ. ಟಿ.ಎಂ.ಎ. ಪೈ ಸೆಂಟರ್’ನಲ್ಲಿ ‘ಮಂಗಳೂರು ಲಿಟ್ ಫೆಸ್ಟ್’ | ಜನವರಿ 10 ಮತ್ತು 11

    January 8, 2026

    ಜಯಲಕ್ಷ್ಮೀ ಎಸ್. ಜೋಕಟ್ಟೆಯವರ ‘ಕವಿತೆಗಳು’ ಕವನ ಸಂಕಲನ ಬಿಡುಗಡೆ

    January 7, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.