Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ’ ಉದ್ಘಾಟನಾ ಸಮಾರಂಭ | ಅಕ್ಟೋಬರ್ 10
    Yakshagana

    ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ’ ಉದ್ಘಾಟನಾ ಸಮಾರಂಭ | ಅಕ್ಟೋಬರ್ 10

    October 3, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧರ್ಮಸ್ಥಳ : ‘ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ’ ಇದರ ವತಿಯಿಂದ ಐವತ್ತರ ವರುಷ – ನವೋಲ್ಲಾಸದ ಹರುಷ ಪ್ರಯುಕ್ತ ದಿನಾಂಕ 10 ಅಕ್ಟೋಬರ್ 2024ರ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆಯವರ ಬೀಡಿನಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ‘ಸುವರ್ಣ ಪರ್ವ’ವನ್ನು ಉದ್ಘಾಟಿಸಲಿದ್ದಾರೆ. ಮಕ್ಕಳ ಮೇಳದ ಬಾಲ ಕಲಾವಿದರಿಂದ ‘ಹೂವಿನ ಕೋಲು’ ಪ್ರದರ್ಶನ ನಡೆಯಲಿದೆ.

    ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ಹಾಗೂ ಎಚ್. ಶ್ರೀಧರ ಹಂದೆಯವರ ಕನಸಿನ ಕೂಸು ‘ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ’. ಈ ಇಬ್ಬರೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು. 1975ರ ಅಕ್ಟೋಬರ್ 10ರಂದು ಸಾಂಕೇತಿಕ ಉದ್ಘಾಟನೆ ಕಂಡ ಮಕ್ಕಳ ಮೇಳವು ಮಂಗಳೂರಿನಲ್ಲಿ ಮೊದಲ ದಾಖಲೆಯ ಪ್ರದರ್ಶನ ನೀಡಿದ್ದು ಇದೀಗ ಇತಿಹಾಸ. 1978ರಲ್ಲಿ ಯಕ್ಷಗಾನವನ್ನು ಪ್ರಪ್ರಥಮ ಸೀಮೋಲ್ಲಂಘನಗೈದ ಜಾಗತಿಕ ದಾಖಲೆಯ ಮಕ್ಕಳ ಮೇಳವು ಮತ್ತೆ ಎರಡು ಬಾರಿ ವಿದೇಶದ ಮಣ್ಣಿನಲ್ಲಿ ಕಾಲಿಟ್ಟಿತು. ಇದುವರೆಗೂ ದೇಶದ ನಾನಾ ರಾಜ್ಯಗಳಲ್ಲಿ, ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನ ನೀಡಿದ ಸಂತೃಪ್ತಿ.

    ಎಷ್ಟು ವರ್ಷ ಮಕ್ಕಳ ಮೇಳ ಮುಂದುವರಿಸಲು ಸಾಧ್ಯ ? ಗುಣ ಮಟ್ಟ ಉಳಿಸಲು ಸಾಧ್ಯವೇ ? ಕಷ್ಟದ ದಾರಿ, ಮುಂದುವರಿಯಿರಿ ಎಂದು ಕೋಟ ಶಿವರಾಮ ಕಾರಂತರು ಅಂದೇ ಹೊಣೆಗಾರಿಕೆಯ ಎಚ್ಚರಿಕೆ ನೀಡಿದ್ದರು. ಅಚ್ಚರಿಯೆಂದರೆ ಅದೇ ಗುಣಮಟ್ಟದ ನಿಮ್ಮ ಮಕ್ಕಳ ಮೇಳಕ್ಕೆ ಇದೀಗ 50ರ ಸುವರ್ಣ ಸಂಭ್ರಮ. ‘ಸುವರ್ಣ ಪರ್ವ’ ಎಂಬ ಶೀರ್ಷಿಕೆಯಡಿಯಲ್ಲಿ ದಿನಾಂಕ 10 ಅಕ್ಟೋಬರ್ 2024ರಿಂದ ಮುಂದಿನ 10 ಅಕ್ಟೋಬರ್ 2025ರವರೆಗೆ ವಿವಿಧ ಕಾರ್ಯಕ್ರಮ ಮಾಡಬೇಕೆಂಬ ಕನಸು ನಮ್ಮದು.

    ವಿಷಾದವೆಂದರೆ ಉಡುಪರು ಈಗ ನಮ್ಮೊಂದಿಗಿಲ್ಲ. ಹಂದೆಯವರು 88ರ ಇಳಿವಯಸ್ಸಿನ ವೃದ್ಧಾಪ್ಯದ ವಿಶ್ರಾಂತಿಯಲ್ಲಿದ್ದಾರೆ. ಮಕ್ಕಳ ಮೇಳದ ಆರಂಭದಿಂದ ಇಲ್ಲಿಯವರೆಗೆ ಉಡುಪ ಮತ್ತು ಹಂದೆಯವರಿಗೆ ಹಲವರು ನಿಮ್ಮದೇ ರೀತಿಯಲ್ಲಿ ಕೈ ಜೋಡಿಸಿದವರು. ಕೈ ಹಿಡಿದು ನಡೆಸಿದವರು ಹಲವರು. ಕಲ್ಲು ಮುಳ್ಳುಗಳ ಹಾದಿಯಲ್ಲಿ ರತ್ನ ಗಂಬಳಿ ಹಾಸಿದವರು ಕೆಲವರು. ಬಿಸಿಲಿನಾಯಾಸಕ್ಕೆ, ಮಳೆಯ ಬಿರುಸಿಗೆ ಕೊಡೆಹಿಡಿದವರು ಇನ್ನೂ ಅನೇಕರು. ಬಾಯಾರಿದಾಗ ಹಾಲುಣಿಸಿದವರು ಹಲವರು. ಸುಮಾರು 50 ವರ್ಷಗಳ ನಮ್ಮ ಏಳು ಬೀಳುಗಳ ಹಾದಿಯಲ್ಲಿ ನೈತಿಕವಾಗಿ, ಆರ್ಥಿಕವಾಗಿ, ನಮ್ಮಲ್ಲಿ ದೃಢತೆ ತುಂಬಿದ ಮಹನೀಯರು ಹತ್ತಾರು ಮಂದಿ. ಅವರೆಲ್ಲರೂ ಸದಾ ಪ್ರಾತಃ ಸ್ಮರಣೀಯರು. ಟ್ರಸ್ಟ್ ಕಟ್ಟುವ ಮೂಲಕ ವಿಶ್ವಾಸ ಮೂಡಿಸಿದವರು ಕೆ.ಎಂ. ಉಡುಪ, ಏರ್ಯ ಆಳ್ವರು, ಸುಬ್ಬಣ್ಣ ಭಟ್ಟರು, ಕಲ್ಕೂರರು, ಕುಂದರ್ ಸಹೋದರು, ಪಿ.ಪಿ. ಮಯ್ಯ, ಶ್ರೀನಿವಾಸ ಉಡುಪ ಕುಟುಂಬದವರು ಇನ್ನೂ ಅನೇಕರು. ಮಕ್ಕಳ ಮೇಳದ ಮುಖ್ಯ ಆಸ್ತಿ ಇಲ್ಲಿನ ಹಿರಿಯ ಕಿರಿಯ ಕಲಾವಿದರನೇಕರು. 60 ದಾಟಿದವರೂ ಇದ್ದಾರೆ, 6ರ ಹರೆಯದವರೂ ಇದ್ದಾರೆ. ನಿಮ್ಮೆಲ್ಲರನ್ನು ಕೃತಜ್ಞತಾ ಭಾವದಿಂದ ನೆನೆಯುತ್ತೇವೆ. ಮುಂದೆಯೂ ನಮ್ಮ ಹಾದಿಯಲ್ಲಿ ಹಸಿರಾಗಬೇಕಾದವರು ನೀವು ಎಂದು ಮಕ್ಕಳ ಮೇಳದ ನಿರ್ದೇಶಕ ಎಚ್. ಸುಜಯೀಂದ್ರ ಹಂದೆ ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ 9845414622.

    Share. Facebook Twitter Pinterest LinkedIn Tumblr WhatsApp Email
    Previous Article‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ-2024’ಕ್ಕೆ ಮೂವರು ಹಿರಿಯ ಸಾಹಿತಿಗಳ ಆಯ್ಕೆ
    Next Article ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಹಿಂದಿ ದಿವಸ್ ಸಮಾರೋಹ್ ಹಾಗೂ ಕೃತಿಯ ಲೋಕಾರ್ಪಣೆ
    roovari

    Comments are closed.

    Related Posts

    ಸಿರಿಬಾಗಿಲಿನಲ್ಲಿ ಯಕ್ಷಗಾನ ಪ್ರಸಂಗ ರಚನಾ ಕಮ್ಮಟ | ಜುಲೈ 06

    June 7, 2025

    ಯಕ್ಷಗಾನ ವೃತ್ತಿ ಮೇಳದ ಕಲಾವಿದರಿಗೆ ಮಾರ್ಗದರ್ಶಿ ಶಿಬಿರ | ಜುಲೈ 01

    June 7, 2025

    ವಿಶೇಷ ಲೇಖನ – ಕರಾವಳಿಯ ಗಾನಕೋಗಿಲೆ ಗುಂಡ್ಮಿ ಕಾಳಿಂಗ ನಾವಡ

    June 6, 2025

    ಬೆಂಗಳೂರಿನಲ್ಲಿ ಯಕ್ಷಗಾನ ಹಿಮ್ಮೇಳ ಹಾಗೂ ಮುಮ್ಮೇಳ ತರಗತಿಗಳು

    June 6, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.