ಸುಳ್ಯ : ಮೋಹನ ಸೋನ ಕಲಾ ಗ್ಯಾಲರಿ ಇದರ ವತಿಯಿಂದ ರಂಗಕರ್ಮಿ ಹಾಗೂ ವರ್ಣಚಿತ್ರ ಕಲಾವಿದ ಮೋಹನ ಸೋನ ಇವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ‘ಸೋನ ನೆನಪು’ ದಿನಾಂಕ 19 ಅಕ್ಟೋಬರ್ 2024ನೇ ಶನಿವಾರ ಸಂಜೆ 6-00 ಗಂಟೆಗೆ ಸುಳ್ಯದ ಸೋಣಂಗೇರಿ, ಸೋನ ಕಲಾ ಗ್ಯಾಲರಿಯಲ್ಲಿ ನಡೆಯಲಿದೆ.
ಕಲಾವಿದ ಜಿಲ್ಲಾ ಸ್ಕೌಟ್ ಆಯುಕ್ತ ಶ್ರೀಯುತ ಎಂ.ಜೆ. ಕಜೆ ಇವರು ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡುವುದರ ಮೂಲಕ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ. ಇನ್ನೋರ್ವ ಮುಖ್ಯ ಅತಿಥಿಯಾಗಿ ಖ್ಯಾತ ಹಿರಿಯ ರಂಗಕರ್ಮಿ ಮೂರ್ತಿ ದೇರಾಜೆ ಇವರು ಭಾಗವಹಿಸಲಿದ್ದು , ಕಲಾವಿದ ಮೋಹನ ಸೋನರ ಬಗೆಗಿನ ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ಕೆ. ವಿ. ರಮೇಶ್ ಇವರ ನೇತೃತ್ವದ ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಇವರಿಂದ ‘ನರಕಾಸುರ ವಧೆ ಗುರುಡ ಗರ್ವಭಂಗ’ ಬೆಂಬೆಯಾಟ ಪ್ರದರ್ಶನ ನಡೆಯಲಿದೆ.