Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನಲ್ಲಿ ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಆರಂಭ

    June 9, 2025

    ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಇದರ 3 ಮತ್ತು 4ನೇ ಸಂಚಿಕೆ

    June 9, 2025

    ಬಡಿಯಡ್ಕದಲ್ಲಿ ಪ್ರಾರಂಭಗೊಂಡ ಯಕ್ಷಗಾನ ತರಬೇತಿ

    June 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಂತಾವರದಲ್ಲಿ ಕಾಸರಗೋಡಿನ ಸಾಹಿತಿಗಳ ಕೃತಿಗಳ ಲೋಕಾರ್ಪಣೆ | ನವೆಂಬರ್ 1
    Book Release

    ಕಾಂತಾವರದಲ್ಲಿ ಕಾಸರಗೋಡಿನ ಸಾಹಿತಿಗಳ ಕೃತಿಗಳ ಲೋಕಾರ್ಪಣೆ | ನವೆಂಬರ್ 1

    October 21, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಡಾ. ನಾ. ಮೊಗಸಾಲೆ ನೇತೃತ್ವದ ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ದಿನಾಂಕ 1 ನವೆಂಬರ್ 2024ರಂದು ಕನ್ನಡ ಸಂಘದ ಬಯಲು ರಂಗ ಮಂದಿರದಲ್ಲಿ ನಡೆಯುವ ಕಾಂತಾವರ ಉತ್ಸವ – 2024 ಸಮಾರಂಭದಲ್ಲಿ ಕಾಸರಗೋಡಿನ ಮೂವರು ಸಾಹಿತಿಗಳ ನಾಲ್ಕು ಕೃತಿಗಳು ಲೋಕಾರ್ಪಣೆಯಾಗಲಿದೆ. ಕಾಂತಾವರದ ಕನ್ನಡ ಸಂಘವು ಪ್ರತೀ ವರ್ಷವೂ ಪ್ರಕಟಿಸುವ ‘ನಾಡಿಗೆ ನಮಸ್ಕಾರ’ ಗ್ರಂಥ ಮಾಲಿಕೆಯಲ್ಲಿ ಈ ನೂತನ ಕೃತಿಗಳು ಬಿಡುಗಡೆಯಾಗಲಿದೆ.

    ಕಾಸರಗೋಡಿನ ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರು ರಚಿಸಿದ ‘ಕಾಸರಗೋಡಿನ ಕನ್ನಡ ಹೋರಾಟಗಾರ ಅಡೂರು ಉಮೇಶ ನಾಯಕ್’ ಮತ್ತು ‘ಹಾಸ್ಯ ಸಾಹಿತ್ಯದ (ನಿ)ರೂಪಕ ವೈ. ಸತ್ಯನಾರಾಯಣ ಕಾಸರಗೋಡು’ ಎಂಬ ಕೃತಿಗಳು, ಪತ್ರಕರ್ತ ಸಾಹಿತಿ ವಿರಾಜ್ ಅಡೂರು ಬರೆದ ‘ಮಕ್ಕಳ ಸಾಹಿತ್ಯ ಸಂಗಮದ ಜಂಗಮ ಶ್ರೀನಿವಾಸ ರಾವ್’ ಎಂಬ ಕೃತಿ ಹಾಗೂ ಶಿಕ್ಷಕಿ ಆಶಾ ದಿಲೀಪ್ ರೈ ಸುಳ್ಯಮೆ ಇವರು ಬರೆದ ‘ಸಾಹಿತ್ಯ ಶಿಕ್ಷಣ ಸಂಪನ್ನೆ ಸಾವಿತ್ರಿ ಎಸ್. ರಾವ್’ ಎಂಬ ಕೃತಿಗಳು ಬಿಡುಗಡೆಯಾಗಲಿವೆ. ಈ ಕೃತಿಗಳನ್ನು ಕಾಸರಗೋಡಿನ ಹಿರಿಯ ಸಾಹಿತಿ, ಸಂಘಟಕ ಪ್ರೊ. ಪಿ.ಎನ್. ಮೂಡಿತ್ತಾಯ ಲೋಕಾರ್ಪಣೆ ಮಾಡಲಿದ್ದು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸುವರು. ಕೃತಿಗಳ ಸಂಪಾದಕರಾದ ಖ್ಯಾತ ವಿಮರ್ಶಕ ಡಾ. ಬಿ. ಜನಾರ್ದನ ಭಟ್ ಬೆಳ್ಮಣ್ ಮತ್ತು ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಭಾಗವಹಿಸಲಿದ್ದು, ಕಾಸರಗೋಡಿನ ಲೇಖಕರ ನಾಲ್ಕು ಕೃತಿಗಳೂ ಸೇರಿದಂತೆ ಒಟ್ಟು ಹತ್ತು ಕೃತಿಗಳು ಕಾಂತಾವರ ಉತ್ಸವದಲ್ಲಿ ಲೋಕಾರ್ಪಣೆಯಾಗಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪುರಸ್ಕಾರ’ ಪ್ರಕಟ
    Next Article ಪುಸ್ತಕ ವಿಮರ್ಶೆ | ಉರೂಬ್ ಅವರ ಸುಂದರಿಯರು ಸುಂದರರು
    roovari

    Add Comment Cancel Reply


    Related Posts

    ಲೋಕರ್ಪಣೆಗೊಂಡ ‘ಕನ್ನಡಿಯಲ್ಲಿ ಕನ್ನಡಿಗ’ ಇದರ 3 ಮತ್ತು 4ನೇ ಸಂಚಿಕೆ

    June 9, 2025

    ಕಾಸರಗೋಡಿನ ಕನ್ನಡ ಭವನದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ

    June 9, 2025

    ದಲಿತ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆಯಾಗಿ ಡಾ. ಜಯದೇವಿ ಗಾಯಕವಾಡ ಆಯ್ಕೆ

    June 9, 2025

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-3’ ಕೊಂಕಣಿ ಕವಿಗೋಷ್ಟಿ

    June 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.