Subscribe to Updates

    Get the latest creative news from FooBar about art, design and business.

    What's Hot

    ತೆಕ್ಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನಕಂಡ “ಸೂರ್ಯ ಚಂದ್ರ” ಮಕ್ಕಳ ನಾಟಕ

    June 6, 2025

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಗಾಯನ ಸಂಗೀತ ಕಾರ್ಯಾಗಾರ | ಜೂನ್ 14 ಮತ್ತು 15

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ‘ಹಾಸನ ದಸರಾ ಕವಿಗೋಷ್ಠಿ’
    Literature

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ‘ಹಾಸನ ದಸರಾ ಕವಿಗೋಷ್ಠಿ’

    October 22, 2024Updated:January 7, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ತಾಲೂಕು ಘಟಕ ಹಾಸನ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಸಂಯುಕ್ತಾಶ್ರಯದಲ್ಲಿ ನಗರದ ಸ್ಕೌಟ್ಸ್ ಗೈಡ್ಸ್ ಸಮುದಾಯ ಭವನದಲ್ಲಿ ದಿನಾಂಕ 20 ಅಕ್ಟೋಬರ್ 2024ರಂದು ‘ಹಾಸನ ದಸರಾ ಕವಿಗೋಷ್ಠಿ’ ನಡೆಯಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಬಾನು ಮುಸ್ತಾಕ್ ಇವರು ಮಾತನಾಡಿ “ಲೇಖನಿ ಧರ್ಮಾಂಧತೆಯ ಮೇರೆ ಮೀರಿದ ತಲ್ಲಣಗಳ ಒಳವಾಗಬೇಕು, ಲೇಖಕರಿಗೆ ಲೇಖನಿ ಅಡವಿಡುವ ಪರಿಸ್ಥಿತಿ ಬರಬಾರದು, ಬಂದರೆ ಸಮಾಜ ನಿಂತ ನೀರಾಗಿಬಿಡುತ್ತದೆ. ಇತ್ತೀಚೆಗೆ ದಸರಾ ನಾಡಹಬ್ಬದ ವೈಶಿಷ್ಟ್ಯವನ್ನು ಕಳೆದುಕೊಳ್ಳುತ್ತಿದೆ. ಇದು ಕೇವಲ ಸರಕಾರದ ಉತ್ಸವವಾಗದೇ ಜನರ ಹಬ್ಬವಾಗಬೇಕು. ಸಮಷ್ಟಿ ಸ್ವರೂಪ ಪಡೆಯಬೇಕು. ಸಹಜ, ಪ್ರಾಕೃತಿಕ ನಿಯಮಗಳನ್ನು ಮೀರುವುದೇ ನಿಜವಾದ ಜೀವನಶೈಲಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಿಜವಾದ ಸಾಹಿತ್ಯ ಕೈಂಕರ್ಯ ಮಾಡುತ್ತಿದೆ. ಹೊಸ ಆಲೋಚನೆಗಳೊಂದಿಗೆ ಉದಿಸಿದ ಈ ಸಂಸ್ಥೆ ಜಿಲ್ಲೆಯಲ್ಲದೇ ಈಗಾಗಲೇ ರಾಜ್ಯದಾದ್ಯಂತ ವ್ಯಾಪಿಸಿ ಕಾರ್ಯೋನ್ಮುಖವಾಗಿರುವುದು ಅಭಿನಂಧನೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.

    ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ “ಕಾವ್ಯ ಎಂದರೆ ಹೀಗೇ ಇರಬೇಕೆಂದು ಪಂಪ ಪೂರ್ವಯುಗದಿಂದ ಇಲ್ಲಿವರೆಗೂ ನಿಖರ ವ್ಯಾಖ್ಯಾನ ಸಿಕ್ಕಿಲ್ಲ. ಆದರೆ ಕನ್ನಡ ಕಾವ್ಯ ಪರಂಪರೆ ಅಗಾಧವಾಗಿದೆ. ಕವಿಗಳಿಗೆ ಕಾವ್ಯೇತಿಹಾಸದ ಪರಿಕಲ್ಪನೆ, ಜ್ಞಾನ ಅತ್ಯಗತ್ಯ. ಹಿರಿಯರ ಕವಿತೆಗಳನ್ನು ಓದಿದಾಗ ಕಾವ್ಯದ ಜಾಡು ಅರಿವಾಗುತ್ತದೆ. ಸಿದ್ಧಯ್ಯ ಪುರಾಣಿಕರು ಒಂದು ಕಡೆ ‘ಫಲಹೊತ್ತ ರೆಂಬೆ ಬಾಗುತ್ತದೆ, ಗೊನೆಹೊತ್ತ ಬಾಳೆ ಬಾಗುತ್ತದೆ, ತೆನೆಹೊತ್ತ ದಂಟು ಬಾಗುತ್ತದೆ ಏನೇನೂ ಇಲ್ಲದುದು ಬೀಗುತ್ತದೆ ನೋಡಾ ಸ್ವತಂತ್ರಧೀರ ಸಿದ್ಧೇಶ್ವರಾ’ ಅಂದರೆ ಜ್ಞಾನದ ಫಲ ಹೊತ್ತು ಬಾಗಬೇಕಾಗುತ್ತದೆ. ಜ್ಞಾನದ ಫಲ ನಮ್ಮದಾಗಬೇಕಾದರೆ ನಿರಂತರ ಅಧ್ಯಯನ ಹಾಗೂ ಅಧ್ಯಾಪನಗಳು ಅತ್ಯಗತ್ಯ. ರೆಂಬೆ, ದಂಟು, ಬಾಳೆಯಂತೆ ಸಮೃದ್ಧವಾಗಿ ಬಾಗಬೇಕಾದರೆ ನಮ್ಮೊಳಗಿನ ಜ್ಞಾನದ ಫಲ ಮಾಗಬೇಕಾಗುತ್ತದೆ. ಅಂದಾಗ ಮಾತ್ರ ವ್ಯಕ್ತಿ ಸುಕಾಸುಮ್ಮನೇ ಬೀಗುವುದು ನಿಲ್ಲುತ್ತದೆ” ಎಂದರು.

    ಕವಿ ಚಿನ್ನೇನಹಳ್ಳಿ ಸ್ವಾಮಿ ಆಶಯ ನುಡಿಗಳನ್ನಾಡಿ “ಧರ್ಮಾಂಧತೆ, ಕೋಮುದಳ್ಳುರಿಯ ಪ್ರಸಕ್ತ ಉಸಿರುಗಟ್ಟುವ ವಾತಾವರಣದಲ್ಲಿ ನಾವಿದ್ದೇವೆ. ನಿಜವಾದ ಬರಹಗಾರನನ್ನು ಯಾರೂ ಗುರುತಿಸುವುದಿಲ್ಲ. ಮೈಸೂರು ದಸರಾ ಕವಿಗೋಷ್ಠಿ, ಅಖಿಲ ಭಾರತ ಸಮ್ಮೇಳನಗಳಂತಹ ಕವಿಗೋಷ್ಠಿಗಳಲ್ಲಿ ರಾಜಕೀಯ, ಧಾರ್ಮಿಕ ಹಿನ್ನೆಲೆಯಲ್ಲಿ ಇಂದು ಕವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಆದ್ದರಿಂದಲೇ ಕವಿಗೋಷ್ಠಿಗಳಿಂದು ತನ್ನ ಮೌಲ್ಯಗಳನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೊಳಗಾಗುತ್ತಿವೆ. ನಾನು ಮೂರು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕವನ ಸಂಕಲನ, ಕಥೆ, ಕಾದಂಬರಿ, ಲೇಖನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಕೃತಿಗಳನ್ನು ಹೊರತಂದಿದ್ದೇನೆ. ಆದರೆ ಇದುವರೆಗೂ ಯಾವುದೇ ರಾಜಕಾರಣ ಮಾಡದಿರುವುದರಿಂದ ಇದುವರೆಗೂ ನನಗೆ ಅಂತಹ ಅವಕಾಶಗಳು ಬಂದಿಲ್ಲ. ಆದರೆ ಕವಿಗಳಾದ ನಮಗೆ ಯಾವುದೇ ಅವಕಾಶಗಳು ಸಿಗದೇ ಹೋದರೂ ಆರಕ್ಕೇರದೇ ಮೂರಕ್ಕಿಳಿಯದೇ ನಮ್ಮ ಬರವಣಿಗೆ ಸಮಾಜಮುಖಿಯಾಗಿ ಸಾಗಬೇಕು” ಎಂದರು.

    ಕಾರ್ಯಕ್ರಮದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಪ್ರಾಸ್ತಾವಿಕವಾಗಿ ವೇದಿಕೆ ನಡೆದು ಬಂದ ಹಾದಿ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ತಾಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಗೈಡ್ ಆಯುಕ್ತೆ ಜಯಾ ರಮೇಶ್, ಅರಸೀಕೆರೆ ತಾಲೂಕು ಅಧ್ಯಕ್ಷ ಕೆ.ಎಸ್. ಮಂಜುನಾಥ್ ಪಂಡಿತ್ ಸೇರಿದಂತೆ ಹಲವರು ಮಾತನಾಡಿದರು.

    ಸಭಾ ಕಾರ್ಯಕ್ರಮದ ನಂತರ ನಡೆದ ‘ಹಾಸನ ದಸರಾ ಕವಗೋಷ್ಠಿ’ಯಲ್ಲಿ ಸಕಲೇಶಪುರದ ನಾಗರಾಜ್ ದೊಡ್ಡಮನಿಯವರ ‘ಕೊಳ್ಳಿ ಇಡುವವರು ಕಾಣೆಯಾಗಿದ್ದಾರೆ’ ಸಾಮಾಜಿಕ ಸಂಬಂಧಗಳ ಕುರಿತಾಗಿ, ಚಿನ್ನೇನಹಳ್ಳಿ ಸ್ವಾಮಯವರ ‘ಕವಿತೆಗಳು ಎದೆಯೊಳಗೆ ಅವಲಕ್ಕಿ ಕುಟ್ಟುತ್ತಿವೆ’ ಕೋಮುದಳ್ಳುರಿಯ ಕುರಿತಾಗಿ, ರಾಜೇಶ್ವರಿ ಹುಲ್ಲೇನಹಳ್ಳಿಯವರ ‘ದೀಪಾವಳಿ’, ‘ವರಮಾನ’ ಸಾಮಾಜಿಕ ವಿಡಂಬನಾ ಚುಟುಕುಗಳು, ಲಲಿತ ಎಸ್. ಅವರ ‘ಇದ್ದು ಇಲ್ಲದ ಹಾಗೆ’ ಪ್ರಕೃತಿಯ ಕೈಂಕರ್ಯಗಳ ಕುರಿತಾಗಿ, ರೇಖಾಪ್ರಕಾಶ್ ಅವರ ‘ನಿರ್ಭಾಗ್ಯ ಹಕ್ಕಿ’ ವಾಸ್ತವ ರಾಜಕೀಯ ತಲ್ಲಣಗಳ ಕುರಿತಾಗಿ, ಚಂದ್ರಕಲಾ ಆಲೂರು ಅವರ ‘ನೀವೇ ಹೇಳಿ ತಪ್ಪು ಯಾರದೆಂದು’ ಹಿಂದೆ ಬಾಲ್ಯದಲ್ಲಿರುತ್ತಿದ್ದ ಮೌಲ್ಯಗಳ ಅನಾವರಣ ಕುರಿತಾಗಿ, ಹೇಮರಾಗ ಅವರ ‘ಆ ದೊಡ್ಡವರು’ ಸಾಮಾಜಿಕ ದೊಂಬರಾಟದ ಕುರಿತಾಗಿ, ಎಚ್.ಬಿ. ಚೂಡಾಮಣಿಯವರ ‘ಬಂದವ ಮನದಲ್ಲಿ ನಿಂತವ’ ಯೌವ್ವನ ಮೀರಿಸುವಂತಹ ಪ್ರೇಮಕವಿತೆ, ಅಮೃತ್ ಅರಸೀಕೆರೆಯವರ ‘ಕವಿ’ ಕವಿಕಾವ್ಯ ಕುರಿತು, ಸಿ.ಎನ್. ನೀಲಾವತಿಯವರ ‘ಹೇಗಿದ್ದರೆ ಏನು ಪ್ರಯೋಜನವಿಲ್ಲ’ ಸಾಮಾಜಿಕ ಸ್ಥಿತ್ಯಂತರಗಳ ಕುರಿತು, ಚೇತನ್ ಕೊಟ್ಟೂರು ಅವರ ‘ಹಾಸನ-ಸಿಂಹಾಸನ’ ಹಾಸನ ವೈಶಿಷ್ಟ್ಯತೆ ಕುರಿತು, ಪಲ್ಲವಿ ಬೇಲೂರುರವರ ‘ಸರಿದಷ್ಟು ಕಾಲ’ ಸಾಮಾಜಿಕ ಟೀಕೆಟಿಪ್ಪಣಿಗಳನ್ನು ಮೆಟ್ಟಿನಿಂತು ಮಾನಸಿಕ ಸ್ವಾಸ್ಥ್ಯ ಪಾಕಿಟ್ಟುಕೊಳ್ಳುಕೆ ಕುರಿತು, ಡಾ. ಕೆ.ಟಿ. ರಕ್ಷಾರವರ ‘ಚಿತ್ತಚಿಂತನೆ’ ಬದುಕಿನ ಸ್ಥಿತ್ಯಂರಗಳ ಕುರಿತು, ಮಲ್ಲೇಶ್ ಜಿ. ಹಾಸನರವರ ‘ಚಿಗುರು ಕಮರದಿರಲಿ’ ಬಾಲ್ಯಾವಸ್ಥೆಯ ಅವಘಡಗಳ ಕುರಿತು, ಸೈಫುಲ್ಲಾ ಡಿ.ಎಂ.ರವರ ‘ಪ್ರಕೃತಿ ಮಡಿಲಾಗ ರೈತ’ ಜನಪದೀಯ ಶೈಲಿಯ ಪ್ರಾಕೃತಿಕ ವರ್ಣನೆ, ಜಯಶಂಕರ್ ಬೆಳಗುಂಬರವರ ‘ಮೌನ’ ಜೀವನ್ಮರಣಗಳ ತಲ್ಲಣಗಳ ಕುರಿತು, ಧರ್ಮಕೆರಲೂರುರವರ ‘ಬಹುದಿನಗಳಿಂದ ಅದೇ’ ಸಾಮಾಜಿಕ ದೊಂಬರಾಟದ ಭ್ರಮಾಲೋಕ ಕುರಿತು, ಜಯಾರಮೇಶ್ ಅವರ ‘ನಗೆಯ ಮೋಡಿ’ ದಾಂಪತ್ಯದೊಳಗಿನ ನಗುವಿನ ಮಹತ್ವದ ಕುರಿತು, ಪದ್ಮಾವತಿ ವೆಂಕಟೇಶ್ ಅವರ ‘ಮೈಸೂರು ದಸರಾ’ ನಾಡಹಬ್ಬ ಕುರಿತು, ಭಾರತಿ ಎಚ್.ಎನ್. ಅವರ ‘ಕನ್ನಡ ಸಾಹಿತ್ಯ ವೇದಿಕೆ’ ಕುರಿತು, ರುಮಾನಾ ಜಬೀರ್ ಅವರ ‘ಗಳಿಸಬೇಕು ಹೆಸರು ನೀ’ ಬದುಕಿನ ದರ್ದಿನ ಕುರಿತು, ಎ.ಎಚ್. ಬೋರೇಗೌಡರ ‘ಮತ್ತೊಮ್ಮೆ ಅವತರಿಸಿ ಬಾ’ ಭ್ರಷ್ಟಾಚಾರದ ಕುರಿತು, ಬಿ.ವಿ. ವೇದಶ್ರೀ ನಿಶಿತ್ ಅವರ ‘ವಿಸ್ತಾರ’ ಜ್ಞಾನದಾಹದ ಕುರಿತು, ಕೆ.ಸಿ. ಗೀತಾರವರ ‘ಪ್ರೀತಿ’ ಬದುಕಿ ಒಲವಿನ ಕುರಿತು, ರಾಣಿ ಚರಾಶ್ರೀಯವರ ‘ದಾಸ ಶ್ರೇಷ್ಠ’ ಕನಕದಾಸರ ಕುರಿತು, ಸಾವಿತ್ರಿ ಬಿ. ಗೌಡರವರ ‘ಸಾಂಸ್ಕೃತಿಕ ಪರಂಪರೆ’ ಕುರಿತು, ಗಿರೀಶ್ ಚನ್ನರಾಯಪಟ್ಟಣರವರ ‘ರಣಮಳೆ’ ಅತಿವೃಷ್ಠಿ ಕುರಿತು, ಕುಮಾರಿ ಸಂಧ್ಯ ಆಲೂರುರವರ ‘ಹೃದಯದನಿ’ ಬದುಕಿನ ಮೌಲ್ಯ ಕುರಿತು, ಕುಮಾರಿ ಪಾರ್ವತಿ ಆಲೂರುರವರ ‘ಹೆಣ್ಣು ಹೆಣ್ಣಿಗೊಂದು ಸಾಲು’ ಸಾಮಾಜಿಕ ಅನಿಷ್ಟಗಳ ಕುರಿತು ಬೆಳಕು ಚೆಲ್ಲಿದವು.

    ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶೈಲಜಾ ಹಾಸನ, ಬಿ.ಎಂ. ಭಾರತಿ ಹಾದಿಗೆ, ನಾಗರಾಜ್ ಹೆತ್ತೂರು, ಹರೀಶ್ ಸುವರ್ಣ ನ್ಯೂಸ್, ವಾಣಿಮಹೇಶ್, ಮಾರುತಿ ಕೆ.ಬಿ. ದೊಡ್ಡಕೋಡಿಹಳ್ಳಿ, ವಾಸು ಸಮುದ್ರವಳ್ಳಿ, ಎಚ್.ಎಸ್. ಬಸವರಾಜ್, ನಾಗರಾಜ್ ದೊಡ್ಡಮನಿ, ಆರ್.ಜಿ. ಗಿರೀಶ್, ಸುರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಗೆ ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಸಂಸ್ಥೆ ಆಯ್ಕೆ
    Next Article ವಿಮರ್ಶೆ | ಕೆನಡಾದಲ್ಲಿರುವ ಅಚ್ಚ ಕನ್ನಡಿಗ ಲೇಖಕ ಡಾ. ರಾಮ ಭಟ್ ಬಾಳಿಕೆ
    roovari

    Add Comment Cancel Reply


    Related Posts

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಗಾಯನ ಸಂಗೀತ ಕಾರ್ಯಾಗಾರ | ಜೂನ್ 14 ಮತ್ತು 15

    June 6, 2025

    ಕುಷ್ಟಗಿಯಲ್ಲಿ ಮೌನೇಶ ನವಲಹಳ್ಳಿ ಇವರ ‘ನೀಲಿ ಹೊತ್ತಿಗೆ’ ಕಾದಂಬರಿ ಅವಲೋಕನ ಕಾರ್ಯಕ್ರಮ | ಜೂನ್ 08

    June 6, 2025

    ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನೋತ್ಸವ ಹಾಗೂ ‘ವಿಜಯ ವಿಷ್ಣು ಭಟ್ ದತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭ

    June 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.