Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಪುರಭವನದಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರದಿಂದ ‘ತ್ರಿವರ್ಣ ದೀಪ’ | ನವೆಂಬರ್ 03
    Bharathanatya

    ಮಂಗಳೂರಿನ ಪುರಭವನದಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರದಿಂದ ‘ತ್ರಿವರ್ಣ ದೀಪ’ | ನವೆಂಬರ್ 03

    October 31, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರದ ಮೂವತ್ತನೆಯ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ನಡೆಯುತ್ತಿರುವ “ನೃತ್ಯಾಮೃತ – 11” ಸರಣಿ ನೃತ್ಯ ಕಾರ್ಯಕ್ರಮವಾಗಿ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ರಚಿಸಿರುವ ಮೂರು ಬೇರೆ ಬೇರೆ ಭಾವಗಳ ಕನ್ನಡ ಭಾಷೆಯ ಪದವರ್ಣಗಳ ಪ್ರಸ್ತುತಿ ‘ತ್ರಿವರ್ಣ ದೀಪ’ವನ್ನು ಆಯೋಜಿಸಲಾಗಿದೆ.

    ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ, ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ದಿನಾಂಕ 03 ನವಂಬರ್ 2024ರ ಭಾನುವಾರದಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5-00 ಗಂಟೆಗೆ ನಡೆಯಲಿರುವ ಈ ಸಮಾರಂಭವನ್ನು ಶ್ರೀಶಾ ಸೌಹಾರ್ದ ಕೊ-ಓಪರೇಟಿವ್ ಸೊಸೈಟಿ (ಲಿ.) ಇದರ ಅಧ್ಯಕ್ಷರಾದ ಶ್ರೀ ಎಂ.ಎಸ್. ಗುರುರಾಜ್ ಇವರು ಉದ್ಘಾಟಿಸಲಿದ್ದಾರೆ.

    ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾರಾಪುರದ ಬಾಬಾ ಅಟೋಮಿಕ್ ಸೆಂಟರ್ ಇದರ ನಿವೃತ್ತ ಎ.ಜಿ.ಎಂ. ವಿಶ್ವರಾಜ್ ಐ., ಸಾಹಿತಿ ಮತ್ತು ಬೆಸೆಂಟ್ ಕಾಲೇಜಿನ‌ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ, ಅಸೈಗೋಳಿಯ ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಶಿಕ್ಷಕರಾದ ಶ್ರೀ ಮಂಜುನಾಥ ಭಟ್, ಉಡುಪಿಯ ನೃತ್ಯ ನಿಕೇತನ (ರಿ.) ಇದರ ನಿರ್ದೇಶಕಿ ಗುರು ವಿದುಷಿ ಲಕ್ಷ್ಮೀ ಗುರುರಾಜ್, ಮಂಗಳೂರಿನ ಸೌರಭ ಕಲಾ ಪರಿಷತ್ (ರಿ.) ಗುರು ವಿದುಷಿ ಡಾ. ಶ್ರೀವಿದ್ಯಾ ಮುರಳೀಧರ್, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಾದ ವಿದುಷಿ ಡಾ. ಚೈತ್ರಶ್ರೀ ಗುರುರಾಜ್ ಹಾಗೂ ವಿದುಷಿ ನೇಹಾ ವೈ. ದೇವಾಡಿಗ ಇವರುಗಳು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

    ಉದ್ಘಾಟನೆಯ ಬಳಿಕ ನಡೆಯುವ ‘ತ್ರಿ-ವರ್ಣ’ ನೃತ್ಯ ಪ್ರಸ್ತುತಿಯಲ್ಲಿ ಮಂಗಳೂರಿನ ಗಾನ ನೃತ್ಯ ಅಕಾಡೆಮಿ (ರಿ.) ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ (ಶೃಂಗಾರ ಭಾವ), ಪುತ್ತೂರಿನ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡೆಮಿ (ರಿ.) ನೃತ್ಯಕಲಾ ದಂಪತಿ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದೀಪಕ್ (ಭಕ್ತಿ ಭಾವ) ಮತ್ತು ನಾಟ್ಯಾರಾಧನಾ ಕಲಾ ಕೇಂದ್ರದ ವಿದ್ಯಾರ್ಥಿಗಳಾದ ವೃಂದ ರಾವ್, ಸಾಧ್ವಿ ರಾವ್, ಧರಿತ್ರಿ ಭಿಡೆ, ಹಂಸಿನಿ ಭಿಡೆ ಹಾಗೂ ತನ್ವಿ ಪಿ. ಬೋಳೂರು (ದೇಶಭಕ್ತಿ ಭಾವ) ಪದವರ್ಣ ಪ್ರಸ್ತುತ ಪಡಿಸಲಿದ್ದಾರೆ ಎಂದು ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿಯ ಡಾ. ಗಣೇಶ್ ಅಮೀನ್ ಸಂಕಮಾರ್, ಶ್ರೀ ಬಿ. ರತ್ನಾಕರ್ ರಾವ್, ಶ್ರೀ ಶಶಿರಾಜ್ ರಾವ್ ಕಾವೂರು ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Article‘ಅರಿವು ತಿಳಿವು’ ಸರಣಿಯಲ್ಲಿ ‘ಛಾಂದೋಗ್ಯ ಉಪನಿಷತ್ತು’ ಬಗ್ಗೆ ಉಪನ್ಯಾಸ
    Next Article ಪುಸ್ತಕ ವಿಮರ್ಶೆ | ‘ಹೂ ಮಳೆಗೆ ಮಿನುಗುವ ಮೇಘಗಳು’ ಎಂಬ ಕಥಾ ಸಂಕಲನ
    roovari

    Add Comment Cancel Reply


    Related Posts

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಗಾಯನ ಸಂಗೀತ ಕಾರ್ಯಾಗಾರ | ಜೂನ್ 14 ಮತ್ತು 15

    June 6, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಕೃಷ್ಣಗೀತೆ’ | ಜೂನ್ 08

    June 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.