Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ವಿ. ವಿ. ಯಕ್ಷಗಾನ ಕೇಂದ್ರದ ‘ಯಕ್ಷಾಯಣ’ ಸರಣಿಯ 7ನೇ ಕಾರ್ಯಕ್ರಯಮ  
    Yakshagana

    ಮಂಗಳೂರು ವಿ. ವಿ. ಯಕ್ಷಗಾನ ಕೇಂದ್ರದ ‘ಯಕ್ಷಾಯಣ’ ಸರಣಿಯ 7ನೇ ಕಾರ್ಯಕ್ರಯಮ  

    November 10, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ ಯಕ್ಷಾಯಣದ ಸರಣಿಯ 7ನೇ ಕಾರ್ಯಕ್ರಮ ದಿನಾಂಕ 06 ನವಂಬರ್ 2024ರಂದು ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಇವರ ಕಾಸರಗೋಡಿನ ಕೋಟೂರಿನ ಅಡ್ಕ ಮನೆಯಲ್ಲಿ  ನಡೆಯಿತು.
    ಕಾರ್ಯಕ್ರಮದಲ್ಲಿ 92 ವರ್ಷದ ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಮಾತನಾಡಿ “ತಾಳಮದ್ದಲೆ ವಾಕ್ ಪ್ರಧಾನವಾದರೆ ಬಯಲಾಟ ದೃಶ್ಯ ಪ್ರಧಾನ ಕಲೆ. ವಾಕ್ಪಟುಗಳು ಬಂದ ಮೇಲೆ ತಾಳಮದ್ದಳೆ ಮತ್ತು ಆಟ ಒಂದೇ ಎಂಬಂತಾಯಿತು. ಇದು ಸರಿಯಲ್ಲ. ಆಟ ದೃಶ್ಯವೈಭವದ ಕಲೆ. ಮಾತು ಮಿತಿಯನ್ನು ಮೀರಿದರೆ ಅದು ಕಲೆಗೆ ಭಾರವಾಗುತ್ತದೆ. ಹಿಂದೆ ಯಕ್ಷಗಾನಕ್ಕೆ ಇಷ್ಟು ವೈಭವವಿರಲಿಲ್ಲ. ಗುಡ್ಡದ ಮುಳಿಹುಲ್ಲು ಸವರಿ ತೆಗೆದು ಗುಡ್ಡದಲ್ಲಿ ನಾಲ್ಕು ಕಂಬ ನೆಟ್ಟು ರಂಗಸ್ಥಳ ನಿರ್ಮಿಸುತ್ತಿದ್ದರು. ದೀವಟಿಗೆ ಹಿಡಿದವರು ವೇಷಗಳ ಹಿಂದೆ ಮುಂದೆ ಸಾಗಬೇಕಿತ್ತು. ‘ಹೆಂಡತಿಯಲ್ಲಿ ಕೋಪವಿದ್ದರೆ ದೀವಟಿಗೆಯವನಿಗೆ ಪೆಟ್ಟು’ ಎಂಬ ಗಾದೆ ಮಾತು ಹೀಗೆ ಹುಟ್ಟಿಕೊಂಡದ್ದು. ಕರ್ನಾಟಕ ಮೇಳದ ಕೊರಗ ಶೆಟ್ರು ಯಕ್ಷಗಾನದ ರಂಗಕ್ಕೆ ವೈಭವವನ್ನು ತಂದವರು. ಅವರು ತಿರುಗುವ ರಂಗಸ್ಥಳದ ಪ್ರಯೋಗವನ್ನೂ ಮಾಡಿದ್ದರು. ಕೊಳಂಬೆ, ಕಂಡೆತ್ತೋಡಿ, ಕೀರಿಕ್ಕಾಡು, ಶೇಣಿ, ಸಾಮಗರಂತಹ ದಿಗ್ಗಜರೊಂದಿಗೆ ಕಲಿತು ಕಲಾವಿದನಾಗಿ ಬೆಳೆದೆ. ಸೌಮ್ಯ, ಕರುಣ‌ ನನಗೆ ಇಷ್ಟವಾದರೂ ರಂಗದಲ್ಲಿ ದೊರಕಿದ್ದು ಎದುರು ವೇಷವೇ. ಅಶ್ವಮೇಧದ ವೀರವರ್ಮ, ದೇವಿಮಹಾತ್ಮೆಯ ಮಹಿಷಾಸುರ ಮೊದಲಾದ ಪಾತ್ರಗಳು ನನಗೆ ಪ್ರಸಿದ್ಧಿತಂದು  ತಂದುಕೊಟ್ಟಿತು. ಯಕ್ಷಗಾನವನ್ನು ಮಲಯಾಳದಲ್ಲಿ ಪ್ರದರ್ಶಿಸಿ ಕೇರಳದಲ್ಲಿ ಜನಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಯಿತು. ಶಬರಿಮಲೆ ಅಯ್ಯಪ್ಪ, ದೇವಿ ಮಹಾತ್ಮೆ, ಕಂಸವಧೆ ಮೊದಲಾದ ಪ್ರಸಂಗಗಳು ಮಲಯಾಳ ನಾಡಿನಲ್ಲಿ ಪ್ರಸಿದ್ಧವಾಯಿತು. ಕಲಾವಿದ ದುಡ್ಡಿನ ಹಿಂದೆ ಬೀಳಬಾರದು. ಉತ್ತಮ ಕಲಾವಿದನಿಗೆ ಗೌರವ ಮತ್ತು ದುಡ್ಡು ಎರಡೂ ಸಹಜವಾಗಿಯೇ ಒದಗುತ್ತದೆ.” ಎಂದರು.
    ಸಮಾರಂಭದಲ್ಲಿ ಅಡ್ಕಾಭಿನಂದನೆ ಮಾಡಿದ ಯಕ್ಷಗಾನ ಅರ್ಥದಾರಿ ಗಣರಾಜ ಕುಂಬ್ಳೆ ಮಾತನಾಡಿ “ಕಲಾವಿದನಿಗೆ ಆತನ ಶರೀರ ಸೌಂದರ್ಯ ಮತ್ತು ಕಂಠ ಶಕ್ತಿ ಮುಖ್ಯವಾದುದು. ಅಡ್ಕದವರಲ್ಲಿವೆ ಅದೆರಡೂ ಶ್ರೀಮಂತವಾಗಿತ್ತು.” ಎಂದರು. ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ “ಅಡ್ಕದವರಿಗೆ ಪ್ರೇಕ್ಷಕರಿಗೆ ಸ್ಪಂದಿಸುವ ಗುಣವಿತ್ತು ಹಾಗೂ  ಅವರೊಬ್ಬ ಉತ್ತಮ ಪ್ರಸಂಗಕರ್ತರು.” ಎಂದರು. ಕೇಂದ್ರದ ವತಿಯಿಂದ ಇದೇ ಸಂದರ್ಭದಲ್ಲಿ ಅಡ್ಕ ಗೋಪಾಲಕೃಷ್ಣ ಭಟ್ಟರನ್ನು ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಸನ್ಮಾನಿಸಿದರು.
    ಸಭೆಯಲ್ಲಿ ಕಲಾವಿದ ನಾ. ಕಾರಂತ ಪೆರಾಜೆ, ರಾಜೇಂದ್ರ ಕಲ್ಲೂರಾಯ, ಭಾಗವತ ತಲ್ಪಣಾಜೆ ವೆಂಕಟರಮಣ ಭಟ್, ಮುರಳೀಧರ ಕಲ್ಲೂರಾಯ, ವಿ. ವಿ. ಕನ್ನಡ ವಿಭಾಗದ ಚಂದ್ರಶೇಖರ ಎಂ. ಬಿ., ರತ್ನಾಕರವರ್ಣಿ ಪೀಠದ ಪ್ರಸಾದ್, ಯಕ್ಷಗಾನ ಕೇಂದ್ರದ ಸ್ವಾತಿರಾವ್, ಅಡ್ಕ ಮನೆಯ ಬಂಧುಗಳು ಭಾಗವಹಿಸಿದ್ದರು. ಬಳಿಕ  ‘ಸುಭದ್ರಾ ಕಲ್ಯಾಣ’ ತಾಳಮದ್ದಲೆ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಬ್ರಹ್ಮಾವರದಲ್ಲಿ ‘ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ನುಡಿಚಿತ್ತಾರ 2024’ | ನವೆಂಬರ್ 10
    Next Article ಮಾನಸಗಂಗೋತ್ರಿಯ ಲಲಿತ ಕಲಾ ಕಾಲೇಜಿನಲ್ಲಿ ‘ರಂಗಬೆಳಕು’ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮ
    roovari

    Add Comment Cancel Reply


    Related Posts

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025

    ಭಾಗವತ ಶ್ರೇಷ್ಠ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ 2025’ ಪ್ರದಾನ

    May 29, 2025

    ಸರಯೂ ಸಪ್ತಾಹದಲ್ಲಿ ರೊ. ಜೆ. ವಿ. ಶೆಟ್ಟರಿಗೆ ಸನ್ಮಾನ.

    May 29, 2025

    ಕೊಂಚಾಡಿಯ ನಾಗಕನ್ನಿಕಾದಲ್ಲಿ ‘ಯಕ್ಷ ಪಕ್ಷ’ ಸರಯೂ ರಜತ ಸಂಭ್ರಮದ ಸಮಾರೋಪ ಸಮಾರಂಭ

    May 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.