Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಆಯ್ಕೆ

    June 13, 2025

    ಲೋಕಾರ್ಪಣೆಗೊಂಡ ‘ಬ್ಯಾರಿ ಬಾಸೆ ಪಡಿಕೋರು’ ಕೃತಿ

    June 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿವೇಕ ಸಭಾಂಗಣದಲ್ಲಿ ವಿಚಾರ ಸಂಕಿರಣ ಮತ್ತು ಯಕ್ಷಗಾನ ತಾಳಮದ್ದಳೆ
    Drawing

    ವಿವೇಕ ಸಭಾಂಗಣದಲ್ಲಿ ವಿಚಾರ ಸಂಕಿರಣ ಮತ್ತು ಯಕ್ಷಗಾನ ತಾಳಮದ್ದಳೆ

    December 3, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕಾವಿ ಆರ್ಟ್ ಫೌಂಡೇಶನ್ ಹಾಗೂ ಆರ್ಟ್ ಮ್ಯಾಟರ್ಸ್ ಇದರ ವತಿಯಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಕಾರದಲ್ಲಿ ಸಂಯೋಜಿಸಿದ ‘ಕರಾವಳಿಯ ಕಾವಿ ಕಲೆ ಮತ್ತು ಯಕ್ಷಗಾನ’ ವಿಚಾರ ಸಂಕಿರಣವು ಜಯನಗರದ ಯುವಕ ಸಂಘದ ವಿವೇಕ ಸಭಾಂಗಣದಲ್ಲಿ ನಡೆಯಿತು.

    ಈ ಕಾರ್ಯಕ್ರಮವನ್ನು ಅಕಾಡೆಮಿಯ ರಿಜಿಸ್ಟ್ರಾರ್ ನಮೃತ ಎನ್. ಇವರು ಉದ್ಘಾಟನೆಗೊಳಿಸಿ ಮಾತನಾಡಿ “ಕರ್ನಾಟಕ ಕರಾವಳಿಯ ರಂಗಕಲೆಯಾದ ಯಕ್ಷಗಾನವು ವಿಶ್ವದೆಲ್ಲೆಡೆ ಮಾನ್ಯತೆಯನ್ನು ಪಡೆಯುತ್ತಿದೆ. ಈ ಭಾಗದ ಅಳಿವಿನಂಚಿನಲ್ಲಿರುವ ಕಾವಿ ಕಲೆ ಹಾಗೂ ಯಕ್ಷಗಾನದ ಅಂತರ್‌ ಶಿಸ್ತನ್ನು ಮರುದಾಖಲಿಸುವ ಈ ವಿಚಾರ ಸಂಕಿರಣವು ಒಂದು ಮೈಲಿಗಲ್ಲೆನಿಸಲಿದೆ. ಯುವ ಪೀಳಿಗೆ ಈ ಕಲೆಯಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು” ಎಂಬುದಾಗಿ ಆಶಿಸಿದರು.

    ಮುಖ್ಯ ಅತಿಥಿಗಳಾಗಿ ಯುವಕ ಸಂಘದ ಮಾರ್ಗದರ್ಶಕರಾದ ಜಿ.ಆರ್. ಜಗದೀಶ್, ಆಡಳಿತ ಮಂಡಳಿ ಸದಸ್ಯರಾದ ಡಾ. ಗೌರೀಶ್‌ ಜೋಷಿ ಬೆಂಗಳೂರು, ಆರ್ಟ್ ಗ್ಯಾಲರಿಯ ಸಂಯೋಜಕರಾದ ಶಿವಪ್ರಸಾದ್, ಕಾವಿ ಆರ್ಟ್ ಫೌಂಡೇಶನ್‌ನ ಅಧ್ಯಕ್ಷರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.

    ವಿಚಾರ ಸಂಕಿರಣದಲ್ಲಿ ಉಡುಪಿಯ ಪಿ.ಪಿ.ಸಿ. ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ಶಿವಕುಮಾರ್ ಅಳಗೋಡು “ಯಕ್ಷಗಾನ ಸಂಪ್ರದಾಯ ಹಾಗೂ ಹಿನ್ನೆಲೆ”, ಲೇಖಕರು ಮತ್ತು ವಿನ್ಯಾಸಗಾರರಾಗಿರುವ ಡಾ. ವಿಶ್ವನಾಥ ಎ.ಎಸ್.ರವರು “ಯಕ್ಷಗಾನ ವೇಷಭೂಷಣ ಮತ್ತು ಮುಖವರ್ಣಿಕೆ” ಹಾಗೂ ಕಾವಿ ಕಲಾವಿದರಾಗಿರುವ ಡಾ. ಜನಾರ್ದನರಾವ್ ಹಾವಂಜೆಯವರು “ಕಾವಿ ಕಲೆ ಮತ್ತು ಯಕ್ಷಗಾನ ವಿನ್ಯಾಸದಲ್ಲಿನ ಸಾಮ್ಯತೆಗಳು” ಕುರಿತಾಗಿ ವಿಚಾರ ಮಂಡಿಸಿದರು.

    ನಂತರ ಅತಿಥಿ ಕಲಾವಿದರಿಂದ ಕವಿ ದೇವದಾಸ ವಿರಚಿತ “ಶ್ರೀ ಕೃಷ್ಣ ಸಂಧಾನ” ಯಕ್ಷಗಾನ ತಾಳಮದ್ದಳೆ ನೆರವೇರಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸನ್ನ ಹೆಗಡೆ ಮಾಗೋಡು, ಮದ್ದಳೆಯಲ್ಲಿ ವೆಂಕಟೇಶ್ ಹೆಗಡೆ, ಚಂಡೆಯಲ್ಲಿ ಕಾರ್ತಿಕ್‌ ಧಾರೇಶ್ವರ ಹಾಗೂ ಮುಮ್ಮೇಳದಲ್ಲಿ ಕೃಷ್ಣನಾಗಿ ಡಾ. ಶಿವಕುಮಾರ್ ಅಳಗೋಡು, ಕೌರವನಾಗಿ ಹಾವಂಜೆ ಮಂಜುನಾಥ ರಾವ್ ಹಾಗೂ ವಿದುರನಾಗಿ ಆದಿತ್ಯ ಹಲ್ಕೋಡು ಭಾಗವಹಿಸಿದ್ದರು.

    ಈ ಕಾರ್ಯಕ್ರಮಗಳು ‘ಕಾವ್ಯರೇಖಾ’ ಕಾವಿ ಕಲೆಯ ಕಲಾ ಪ್ರದರ್ಶನದ ಭಾಗವಾಗಿ ಸಂಯೋಜಿಸಲ್ಪಟ್ಟಿದ್ದು, ಕಾವಿ ಕಲೆಯ ಕಲಾ ಪ್ರದರ್ಶನವು ದಿನಾಂಕ 8 ಡಿಸೆಂಬರ್‌ 2024ರ ತನಕ ಯುವ ಪಥದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಕಲಾಸಕ್ತರಿಗೆ ವೀಕ್ಷಣೆಗೆ ತೆರೆದಿರಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಲೋಕಾರ್ಪಣೆಗೊಂಡ ಮೇರಿ ಖಾಮೋಶಿ ಮೇರಿ ಅವಾಜ್’ ಕಾದಂಬರಿ
    Next Article ಯಶಸ್ವಿಯಾಗಿ ಸಂಪನ್ನಗೊಂಡ ತಾಲೂಕು ಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಸಪ್ರಶ್ನೆಯ ಕಾರ್ಯಕ್ರಮ
    roovari

    Add Comment Cancel Reply


    Related Posts

    ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಆಯ್ಕೆ

    June 13, 2025

    ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ವಿವೇಕ ವಾಣಿ -46 ಕಾರ್ಯಕ್ರಮ

    June 13, 2025

    ಲಕ್ಷ್ಮೀನಾರಾಯಣ ಕಾರಂತರಿಗೆ ತುಳುಕೂಟದ ವತಿಯಿಂದ ಅಭಿನಂದನೆ

    June 13, 2025

    ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ನಿಧನ

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.