Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೀಲಾವತಿ ಬೈಪಡಿತ್ತಾಯ ಸಂಸ್ಮರಣೆ
    Yakshagana

    ಲೀಲಾವತಿ ಬೈಪಡಿತ್ತಾಯ ಸಂಸ್ಮರಣೆ

    December 16, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ ಸಹಯೋಗದೊಂದಿಗೆ ಡಾ. ಜಗದೀಶ್ ಶೆಟ್ಟಿ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ-84’ ಹಾಗೂ ದಿನಾಂಕ 15 ಡಿಸೆಂಬರ್ 2024ರ ಭಾನುವಾರದಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಲೀಲಾವತಿ ಬೈಪಡಿತ್ತಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಹಿರಿಯ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಮಾತನಾಡಿ “ವಿವಾಹ ನಂತರ ಪತಿಯೇ ಗುರುವಾಗಿ ಸಂಗೀತಗಾರರಾಗಿದ್ದ ಲೀಲಾವತಿಯಮ್ಮನನ್ನು ತೆಂಕು ತಿಟ್ಟಿನ ಯಶಸ್ವೀ ಭಾಗವತರನ್ನಾಗಿ ಮಾಡಿದ ಖ್ಯಾತಿ ಅವರ ಪತಿ ಹರಿ ನಾರಾಯಣ ಬೈಪಡಿತ್ತಾಯರಿಗೆ ಸಲ್ಲುತ್ತದೆ. ಗುರುವಾಗಿ ಅನೇಕ ಶಿಷ್ಯರನ್ನು ಭಾಗವತಿಕೆ ಕ್ಷೇತ್ರಕ್ಕೆ ನೀಡಿದ ಹಿರಿಮೆ ಲೀಲಾವತಿ ಬೈಪಡಿತ್ತಾಯರದು.  ಕಷ್ಟದ ಬದುಕಿನ ನಿವಾರಣೆಗಾಗಿ ಮೇಳದ ತಿರುಗಾಟ ನಡೆಸಿದ ಏಕೈಕ ಮಹಿಳಾ ಪ್ರಥಮ ಭಾಗವತರಾಗಿ ನಿಂತವರು ಲೀಲಾವತಿ ಬೈಪಡಿತ್ತಾಯರು. ಯಕ್ಷಲೋಕಕ್ಕೆ, ಯಕ್ಷಗಾನ ಕಲಾವಿದರಿಗೆ ಎಂದೆಂದಿಗೂ ಮಾತೆಯಾಗಿ ಉಳಿದು ಅಜರಾಮರರಾದರು.” ಎಂದರು.

    ಶಿರಸಿ ಮೇಳವನ್ನು ಮೆರೆಸಿ ಯಕ್ಷಗಾನವನ್ನು ಶ್ರೀಮಂತಗೊಳಿಸಿದ್ದ ಯಜಮಾನರಾದ ಶ್ರೀ ಕೃಷ್ಣ ನಾಯ್ಕ್, ಡಾ. ಗಣೇಶ್ ಯು., ಉದ್ಯಮಿ ಗೋಪಾಲ ಪೂಜಾರಿ, ಭಾಗವತ ದರ್ಶನ್ ಗೌಡ, ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ ಉಪಸ್ಥಿತರಿದ್ದರು. ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಕರ್ಣ ಭೇದನ’ ಪ್ರಸಂಗದ ತಾಳಮದ್ದಳೆ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ
    Next Article ಬನ್ನೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ’ಗೆ ಪ್ರೊ. ಬಿ. ಎ. ವಿವೇಕ ರೈ ಆಯ್ಕೆ
    roovari

    Add Comment Cancel Reply


    Related Posts

    ಇಂದ್ರಾಳಿ ಯಕ್ಷಗಾನ ಕೇಂದ್ರದವರಿಂದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ

    June 17, 2025

    ಉದ್ಘಾಟನೆಗೊಂಡ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ

    June 17, 2025

    ಕಾಪು, ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಯಕ್ಷಶಿಕ್ಷಣ ಶಾಲೆಗಳ ಮುಖ್ಯಶಿಕ್ಷಕರ ಸಭೆ

    June 17, 2025

    ಡಾ.ತಲ್ಲೂರು ಶಿವರಾಮ ಶೆಟ್ಟರಿಗೆ ‘ಕರುನಾಡ ಸೇವಾ ಕಣ್ಮಣಿ’ ರಾಜ್ಯ ಪ್ರಶಸ್ತಿ

    June 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.