Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಥಾಸಂಕಲನ ‘ಮೃದ್ಗಂಧ’

    May 13, 2025

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಸಂಗೀತ ಕಾರ್ಯಾಗಾರ | ಮೇ 24 ಮತ್ತು 25

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಸಾಹಿತಿ ಕೆ.ಎಸ್. ಧರಣೇಂದ್ರಯ್ಯ
    Article

    ವಿಶೇಷ ಲೇಖನ – ಸಾಹಿತಿ ಕೆ.ಎಸ್. ಧರಣೇಂದ್ರಯ್ಯ

    December 31, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತುಮಕೂರು ಜಿಲ್ಲೆಯ ಉರುಡುಗೆರೆ ಹೋಬಳಿಯ ತಾಳೇನಹಳ್ಳಿಯಲ್ಲಿ ಜನ್ಮ ತಾಳಿದ ಅಪರೂಪದ ಸಾಹಿತಿ ಕೆ. ಎಸ್. ಧರಾಣೇಂದ್ರಯ್ಯ. 1903 ನೇ ಇಸವಿ ಡಿಸೆಂಬರ್ 31ರಂದು ಇವರ ಜನನವಾಯಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದ ಇವರು ಪಂಪ, ರನ್ನ ಮತ್ತು ಜನ್ನರ ಕೃತಿಗಳ ಪದ್ಯಗಳನ್ನು ನಿರರ್ಗಳವಾಗಿ ಹಾಡುತ್ತಿದ್ದರು. ಇವರ ವೃತ್ತಿಜೀವನ ಆರಂಭವಾದದ್ದು ಶಿಕ್ಷಣ ಇಲಾಖೆಯಿಂದ. ಕರ್ನಾಟಕ ಸರಕಾರದ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದು. ಆಗಲೇ ಸಾಹಿತ್ಯ ಕೃಷಿಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಮೇಧಾವಿ ಇವರು.
    ಪಂಪ ಆದಿಪುರಾಣ, ಭಾರತ ವಸ್ತು ಪ್ರದರ್ಶನ, ಪದ್ಮಾವತಿ ಮಹಾತ್ಮೆ, ಆಡಳಿತ ಶಬ್ದಗಳ ಕನ್ನಡ ಕೋಶ, ಭಗವಾನ್ ಮಹಾವೀರ, ಭಕ್ತಿ ಕುಸುಮಾಂಜಲಿ, ಇತ್ಯಾದಿ ಅನರ್ಘ್ಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದವರು. ಕನ್ನಡ – ಕನ್ನಡ ಕೋಶ, ಕನ್ನಡ ವಿಶ್ವಕೋಶ, ಕುಮಾರವ್ಯಾಸ ಭಾರತ ಮುಂತಾದ ಸಾಹಿತ್ಯ ಯೋಜನೆಗಳನ್ನು ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ಮೂಲಕ ಕಾರ್ಯರೂಪಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿದವರು. “ಜೈನ ಶಾಸ್ತ್ರ ವಿಶಾರದ”, “ಸಾಹಿತ್ಯ ಸುಧಾರಕ”, “ಸಾಹಿತ್ಯ ವಿಭೂಷಣ” ಮತ್ತು “ಕರ್ನಾಟಕ ಸಾಹಿತ್ಯ ವಿಭೂಷಣ”ವೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರು ಮಾಡಿದ ಪ್ರಾಮಾಣಿಕ ಸಾಹಿತ್ಯ ಸೇವೆಗೆ ಇವರನ್ನು ಅಲಂಕರಿಸಿವೆ.
    ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ದುಡಿದ ಅನೇಕ ಸಾಹಿತಿಗಳಲ್ಲಿ ಇವರು ಒಬ್ಬರು. ಇಂತಹ ಒಬ್ಬ ಸಾಹಿತ್ಯ ಶ್ರೀಮಂತ 1971ರ ಆಗಸ್ಟ್ 13ರಂದು ತಮ್ಮ 68ನೇ ವಯಸ್ಸಿನಲ್ಲಿಯೇ ಸ್ವರ್ಗಸ್ಥರಾದರು.
    – ಅಕ್ಷರೀ

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ‘ಯಕ್ಷಬನದ ಚೈತ್ರ’ ಚೈತ್ರ ಶೆಟ್ಟಿ
    Next Article ಮಂಗಳೂರು ವಿ. ವಿ. ಯಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿ ಉದ್ಘಾಟನೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ಕಥಾಸಂಕಲನ ‘ಮೃದ್ಗಂಧ’

    May 13, 2025

    ಪಿಲಿಕುಳದಲ್ಲಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಸಮಾರಂಭ

    May 12, 2025

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ‘ಬಾಲ ಸಾಹಿತ್ಯ ಚಿಗುರು ಪುರಸ್ಕಾರ’ಕ್ಕಾಗಿ ‘ನಕ್ಷತ್ರ ಪಟಲ’ ಕೃತಿ ಆಯ್ಕೆ

    May 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications