Subscribe to Updates

    Get the latest creative news from FooBar about art, design and business.

    What's Hot

    ಭಜನೆಯಿಂದ ಮನಶಾಂತಿ

    May 22, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಇವರಿಗೆ ಗೃಹ ಸನ್ಮಾನ, ಯಕ್ಷ ಸಹಾಯನಿಧಿ ಮತ್ತು ಪ್ರಶಸ್ತಿ ಪ್ರದಾನ

    May 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಂಬಳೆ ಶ್ರೀನಿಧಿಯಲ್ಲಿ ವಿಂಶತ್ಯುತ್ಸವ, ಮುಕ್ತಕಗಳ ಎರಡು ಕೃತಿಗಳ ಬಿಡುಗಡೆ
    Literature

    ಕುಂಬಳೆ ಶ್ರೀನಿಧಿಯಲ್ಲಿ ವಿಂಶತ್ಯುತ್ಸವ, ಮುಕ್ತಕಗಳ ಎರಡು ಕೃತಿಗಳ ಬಿಡುಗಡೆ

    March 22, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    22 ಮಾರ್ಚ್ 2023, ಕುಂಬಳೆ: ‘ಭಾಷೆ ಬೆಳೆಯಬೇಕಾದರೆ ಅದರ ಬಳಕೆಯಾಗಬೇಕು. ಬಹುಭಾಷೆಗಳು ರಾಷ್ಟ್ರದ ಶಕ್ತಿಯಾಗಿದ್ದು, ಪ್ರತಿಯೊಂದು ಭಾಷೆಯ ರಕ್ಷಣೆ ಇತರ ಭಾಷೆಗಳ ಜವಾಬ್ದಾರಿ’ ಎಂದು ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ಹೇಳಿದರು.
    ಕುಂಬಳೆ ಸಮೀಪದ ನಾರಾಯಣಮಂಗಲದ ‘ಶ್ರೀನಿಧಿ’ಯಲ್ಲಿ ಸಿರಿಗನ್ನಡ ಕಾಸರಗೋಡು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿನಾಂಕ 19-03-2023 ಭಾನುವಾರದಂದು ನಡೆದ ಬೆಂಗಳೂರಿನ ಸಿರಿಗನ್ನಡ ಕೇಂದ್ರ ಸಮಿತಿಯ ವಿಂಶತ್ಯುತ್ಸವ, ಎರಡು ಮುಕ್ತಕ ಕೃತಿಗಳ ಬಿಡುಗಡೆ, ಗಮಕ ವಾಚನ ಹಾಗೂ ವಸಂತ ಕಾವ್ಯೋತ್ಸವದಲ್ಲಿ ಅವರು ಮಾತನಾಡಿದರು. ಟಿ.ಕೆ.ವಿ. ಭಟ್ ಅವರ ‘ಮುಕ್ತಕ ಸುಮ’ ಕೃತಿ ಬಿಡುಗಡೆ ಮಾಡಿದ ಅವರು ‘ಮುಕ್ತಕಗಳು ಮುತ್ತಿನ ಹಾಗೆ. ಸ್ವತಂತ್ರವಾಗಿರುವ ಅವುಗಳನ್ನು ಕೃತಿಯೆಂಬ ದಾರದಿಂದ ಪೋಣಿಸಿದಾಗ ಇನ್ನಷ್ಟೂ ಸುಂದರವಾಗಿ ಕಾಣುತ್ತವೆ’ ಎಂದರು.

    ಮಂಜೇಶ್ವರದ ಲಕ್ಷ್ಮಿ ವಿ.ಭಟ್ ಅವರ ‘ಜನಮಾನ್ಯ ಮುಕ್ತಕಗಳು’ ಕೃತಿಯನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಬಿಡುಗಡೆ ಮಾಡಿದರು. ಲಲಿತಾಲಕ್ಷ್ಮಿ ಕುಳಮರ್ವ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ತೆಕ್ಕಕೆರೆ ಶಂಕರನಾರಾಯಣ ಭಟ್, ಕೆ.ವಾಮನ್ ರಾವ್ ಬೇಕಲ್, ರಾಧಾಕೃಷ್ಣ ಕೆ. ಉಳಿಯತ್ತಡ್ಕ ಶುಭ ಹಾರೈಸಿದರು. ವಿ.ಬಿ. ಕುಳಮರ್ವ ರಚಿಸಿದ ಕಾಸರಗೋಡಿನ ಸಿರಿಗನ್ನಡ ನಾಡಗೀತೆಯನ್ನು ಶ್ರದ್ಧಾ ನಾಯರ್ಪಳ್ಳ ಹಾಡಿದರು. ಜೈಮಿನಿ ಭಾರತದಿಂದ ಆಯ್ದ ಕಾವ್ಯಭಾಗದ ಗಮಕ ವಾಚನ ಹಾಗೂ ವ್ಯಾಖ್ಯಾನ ನಡೆಯಿತು. ಶ್ರದ್ಧಾ ನಾಯರ್ಪಳ್ಳ ಅವರು ವಾಚನ ಹಾಗೂ ಪೆಲ್ತಾಜೆ ಶ್ರೀಹರಿ ಭಟ್ ವ್ಯಾಖ್ಯಾನ ನೀಡಿದರು.

    ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಕಾಸರಗೋಡು ಜಿಲ್ಲೆಯ ಹಿರಿಯ ಮತ್ತು ಕಿರಿಯರಾದ ಸುಮಾರು 25 ಮಂದಿ ಕವಿಗಳು ಕವನ ವಾಚನ ಮಾಡಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೂ ಪುಸ್ತಕ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಅನೂಷಾ ಎಸ್. ಪ್ರಾರ್ಥಿಸಿದರು. ವೆಂಕಟ್ ಭಟ್ ಎಡನೀರು ಸ್ವಾಗತಿಸಿ, ವಿ.ಬಿ. ಕುಳಮರ್ವ ವಂದಿಸಿದರು. ಪತ್ರಕರ್ತ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿ, ದಿನೇಶ್ ಜಾದೂಗಾರ್ ಪೆರ್ಲ ಸಹಕರಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Article“ಸಮರ್ಪಣಂ” – ವಿಶ್ವಕರ್ಮ ಕಲೋತ್ಸವ
    Next Article ಡಾ.ಶ್ರೀಪಾದ ಭಟ್ ಇವರ ರಂಗಪಯಣದ ಕಥನವಾದ ‘ದಡವ ನೆಕ್ಕಿದ ಹೊಳೆ’ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ಬ್ಯಾರಿ ಜಾನಪದ ಕಥೆಗಳ ಇಂಗ್ಲೀಷ್ ಅನುವಾದಿತ ಕೃತಿ ಬಿಡುಗಡೆ

    May 22, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಿರಿಯ ಚೇತನ ಪ್ರೊ. ಹೇರಂಜೆ ಕೃಷ್ಣ ಭಟ್ಟರ ನುಡಿ ನಮನ

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.