Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಪ್ರಸಿದ್ಧ ಬರಹಗಾರ್ತಿ ಹಾಗೂ ಸಂಗೀತ ತಜ್ಞೆ ದೇವಕಿ ಮೂರ್ತಿ

    May 22, 2025

    “ಭಜನೆಯಿಂದ ಮನಶಾಂತಿ” – ಪ್ರಭಾಕರ್ ಜೀ

    May 22, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುಬ್ರಹ್ಮಣ್ಯ ಸದನದಲ್ಲಿ ಯುಗಾದಿ ಸಾಹಿತ್ಯೋತ್ಸವ
    Literature

    ಸುಬ್ರಹ್ಮಣ್ಯ ಸದನದಲ್ಲಿ ಯುಗಾದಿ ಸಾಹಿತ್ಯೋತ್ಸವ

    March 23, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    23 ಮಾರ್ಚ್ 2023, ಮಂಗಳೂರು: “ಸಾಹಿತ್ಯ-ಸಂಸ್ಕೃತಿ ಆಧಾರಿತವಾದ ಚಿಂತನಶೀಲ ಬದುಕು ಹಿನ್ನೆಲೆಗೆ ಸರಿದು ಕೊಳ್ಳುಬಾಕತನದ ಅರ್ಥ ಸಂಸ್ಕೃತಿ ಜೀವನದಲ್ಲಿ ಮುನ್ನೆಲೆಗೆ ಬಂದಿರುವುದೇ ಸಾಮಾಜಿಕವಾದ ಹಲವು ರೋಗಗಳಿಗೆ ಕಾರಣ. ನಮ್ಮ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜ್ಞಾನ ಮತ್ತು ಬುದ್ಧಿಬಲ ಜೀವನದ ಮುನ್ನೆಲೆಯಲ್ಲಿ ಇರಬೇಕಲ್ಲದೆ ಅರ್ಥ ಸಂಸ್ಕೃತಿ ಮತ್ತು ಅದರ ಅನುಯಾಯಿಯಾದ ರಟ್ಟೆಬಲ ಸಮಾಜದಲ್ಲಿ ಮೆರೆಯುವಂತೆ ಆಗಬಾರದು.” ಎಂದು ಕವಿ-ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.

    ಮಂಗಳೂರಿನ ಕನ್ನಡ ಬಳಗವು ಮಾರ್ಪಳ್ಳಿ ಪ್ರಕಾಶನ ಹಾಗೂ ಸುಬ್ರಹ್ಮಣ್ಯ ಸಭಾ ಇವುಗಳ ಆಶ್ರಯದಲ್ಲಿ ನಗರದ ಸುಬ್ರಹ್ಮಣ್ಯ ಸದನದಲ್ಲಿ ಏರ್ಪಡಿಸಿದ ಯುಗಾದಿ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಬಳಗದ ಅಧ್ಯಕ್ಷ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಆರ್.ವಾಸುದೇವ ಅವರು ವಹಿಸಿದ್ದರು. “ಹಬ್ಬ ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸುವ ವ್ಯವಸ್ಥೆ ನಮ್ಮಲ್ಲಿ ಬರಬೇಕು. ಸಾಹಿತ್ಯ ಸಂಸ್ಕೃತಿಗಳಿಗೆ ನಮ್ಮ ಪರ್ವ ದಿನಗಳೊಂದಿಗೆ ಉತ್ತಮ ಸಾಂಗತ್ಯವಿದೆ. ಯುಗಾದಿ ಅಂತಹ ಹಬ್ಬಗಳಲ್ಲಿ ಒಂದು.” ಎಂದು ಹೇಳಿದರು.

    ಮುಖ್ಯ ಅತಿಥಿಗಳಾಗಿ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಸಭಾದ ಅಧ್ಯಕ್ಷ ಹರ್ಷಕುಮಾರ್ ಕೇದಿಗೆ ಭಾಗವಹಿಸಿದ್ದರು.

    ಪುತ್ತೂರಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರ ಅಧ್ಯಕ್ಷತೆಯಲ್ಲಿ ವಿಚಾರ ಸಂಕಿರಣ ನಡೆಯಿತು. “ಡಿಜಿಟಲ್ ಯುಗ ಮತ್ತು ಸಾಹಿತ್ಯ” ಎಂಬ ವಿಷಯದ ಬಗ್ಗೆ ಉಡುಪಿಯ ಪ್ರಾಂಶುಪಾಲೆ ಅಭಿಲಾಷಾ ಎಸ್. ಹಾಗೂ “ರಾಷ್ಟ್ರೀಯ ಚಿಂತನೆಯ ಸಾಹಿತ್ಯ” ಎಂಬ ವಿಷಯದ ಬಗ್ಗೆ ಉಡುಪಿಯ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಮಾತಾಡಿದರು.

    ಬಳಿಕ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕವಿಗೋಷ್ಠಿಯಲ್ಲಿ ಕವಿಗಳಾದ ರಾಮ್ ಎಲ್ಲಂಗಳ, ಎನ್.ಸುಬ್ರಾಯ ಭಟ್, ಬೆಳ್ಳಾಲ ಗೋಪಿನಾಥ ರಾವ್, ಶಾಂತಾ ಪುತ್ತೂರು, ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಡಾ. ವೀಣಾ ಎನ್. ಸುಳ್ಯ, ಶ್ಯಾಮಲಾ ರವಿರಾಜ್ ಕುಂಬಳೆ, ಕೊಳಚಪ್ಪೆ ಗೋವಿಂದ ಭಟ್, ಗೀತಾ ಪುತ್ತೂರು, ಜಯಾನಂದ ಪೆರಾಜೆ ಮತ್ತು ಜೀತ್ ಕುಮಾರ್ ರಾವ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಆಶಾ ಆರ್.ರಾವ್ ಯುಗಾದಿ ಗೀತೆಗಳನ್ನು ರಾಗಬದ್ಧವಾಗಿ ಹಾಡಿ ಜನರನ್ನು ರಂಜಿಸಿದರು. ಸೌಜನ್ಯಾ ನಂದಳಿಕೆ ಸ್ವಾಗತಿಸಿದರು. ಸುಮನಾಕೃಷ್ಣ ಪ್ರಾರ್ಥನೆ ಹಾಡಿದರು. ಉಡುಪಿಯ ಉದಯಪ್ರಸಾದ್ ಎನ್.ಜೆ. ಕಾರ್ಯಕ್ರಮ ನಿರೂಪಿಸಿ, ಡಾ. ಎ.ಪಿ. ಕೃಷ್ಣ ವಂದನಾರ್ಪಣೆ ಮಾಡಿದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಯಕ್ಸೋತ್ಸವ’ದಲ್ಲಿ ಬಹುಮಾನ ಪಡೆದ “ತರಣಿ ಸೇನ ಕಾಳಗ”
    Next Article ಮರೆಯಲಾರದ ಕನ್ನಡ ಸಾಹಿತ್ಯದ ಕಣ್ಮಣಿ ಮಂಜೇಶ್ವರ ಗೋವಿಂದ ಪೈ
    roovari

    Add Comment Cancel Reply


    Related Posts

    ವಿಶೇಷ ಲೇಖನ | ಪ್ರಸಿದ್ಧ ಬರಹಗಾರ್ತಿ ಹಾಗೂ ಸಂಗೀತ ತಜ್ಞೆ ದೇವಕಿ ಮೂರ್ತಿ

    May 22, 2025

    ಬ್ಯಾರಿ ಜಾನಪದ ಕಥೆಗಳ ಇಂಗ್ಲೀಷ್ ಅನುವಾದಿತ ಕೃತಿ ಬಿಡುಗಡೆ

    May 22, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಮೇ 31

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.