Subscribe to Updates

    Get the latest creative news from FooBar about art, design and business.

    What's Hot

    ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರಿಗೆ ಗೌರವ ಸಮರ್ಪಣೆ

    June 12, 2025

    ಮೈಸೂರು ರಂಗಾಯಣದಲ್ಲಿ ಒಂದು ವರ್ಷದ ರಂಗ ಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ | ಜೂನ್ 30 ಕೊನೆಯ ದಿನ

    June 12, 2025

    ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ವತಿಯಿಂದ ಉಚಿತ ಯಕ್ಷಗಾನ ತರಬೇತಿ | ಜೂನ್ 14

    June 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಗರದ ಪವಿತ್ರಾ ಸಭಾಂಗಣದಲ್ಲಿ ಪರಸ್ಪರ ಸಾಹಿತ್ಯ ವೇದಿಕೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ.
    Awards

    ಸಾಗರದ ಪವಿತ್ರಾ ಸಭಾಂಗಣದಲ್ಲಿ ಪರಸ್ಪರ ಸಾಹಿತ್ಯ ವೇದಿಕೆಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ.

    January 28, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಗರ : ಸಾಗರದ ಪರಸ್ಪರ ಸಾಹಿತ್ಯ ವೇದಿಕೆ ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಜನವರಿ 2025ರ ಭಾನುವಾರದಂದು ಸಾಗರದ ಬಿ. ಹೆಚ್. ರಸ್ತೆಯಲ್ಲಿರುವ ಪವಿತ್ರಾ ಸಭಾಂಗಣದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ರೆವರೆಂಡ್ ಎಫ್. ಕಿಟೆಲ್ ಪ್ರಶಸ್ತಿ ಸ್ವೀಕರಿಸಿದ ಚಿಂತಕ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಮಾತನಾಡಿ “ಕಿಟೆಲ್ ಅವರನ್ನು ಕ್ರೈಸ್ತ ಧರ್ಮಿಯನ್ನಾಗಿ ನೋಡದಿರಿ, ಅವರೊಬ್ಬ ಮಾನವತಾವಾದಿ. ಕನ್ನಡಕ್ಕೆ ಅವರು ನೀಡಿದ ನಿಘಂಟು ಸಾರ್ವಕಾಲಿಕ ಬಹುದೊಡ್ಡ ಕೊಡುಗೆ. ಕಿಟೆಲ್ ಅವರು ನಡೆದಾಡುವ ವಿಶ್ವಕೋಶದಂತಿದ್ದರು. ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲಿ 70 ಸಾವಿರ ಕನ್ನಡ ಪದಗಳಿಗೆ ನಿಘಂಟಿನ ಮೂಲಕ ಅರ್ಥ ನೀಡುವ ಮಹಾನ್ ಕೆಲಸ ಮಾಡಿದ್ದಾರೆ. ಕನ್ನಡದ ಮೇಲೆ ಕಿಟೆಲ್ ಅವರಿಗಿದ್ದ ಶ್ರದ್ದೆ ಹಾಗೂ ಅವರು ಪ್ರಕಟಿಸಿದ ಸಂಶೋಧನಾ ಗ್ರಂಥಗಳು ಅಪರೂಪದವು. 1875ರಲ್ಲಿ ಲಿಂಗಾಯತ ಧರ್ಮದ ಮೇಲೂ ಕೂಡ ಕರಾರುವಕ್ಕಾದ ಲೇಖನಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ಕಿಟೆಲ್ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರ” ಎಂದರು.

    ಸಂತ ಶಿಶುನಾಳ ಶರೀಫ ಪ್ರಶಸ್ತಿ ಸ್ವೀಕರಿಸಿದ ತುಮಕೂರಿನ ಡಾ. ಮಿರ್ಜಾ ಬಷೀರ್ ಮಾತನಾಡಿ “ನಾನು ಬರೆದ ಕಥೆಗಳಲ್ಲಿ ಬಹುತೇಕ ವಿಷಯಗಳು ಕೋಮು ಸೌಹಾರ್ದದ ಮೆಲೆ ಕಟ್ಟಿಕೊಡಲಾಗಿದೆ” ಎಂದು ತಿಳಿಸಿದರು. ಹಿರಿಯ ಸಾಹಿತಿ ಡಾ. ಜಿ. ಎಸ್. ಭಟ್ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಸರ್ಕಾರ ನೀಡುವ ಪ್ರಶಸ್ತಿಗಳ ಬಗ್ಗೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ” ಎಂದರು.

    ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಡಾ. ಸರ್ಫರಾಜ್ ಚಂದ್ರಗುತ್ತಿ ಮಾತನಾಡಿ “ವೇದಿಕೆ 21 ವರ್ಷಗಳಿಂದ ಕನ್ನಡ ಸಾಹಿತ್ಯ ಕಟ್ಟುವ ಮತ್ತು ಹೊಸ ತಲೆಮಾರಿಗೆ ಸಾಹಿತ್ಯ ಓದುವ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. 2019ರಿಂದ ಪ್ರತಿ ವರ್ಷ ಸಂತ ಶಿಶುನಾಳ ಶರೀಫ, ಅಕ್ಕಮಹಾದೇವಿ ಮತ್ತು ರೆವರೆಂಡ್ ಎಫ್. ಕಿಟೆಲ್ ಪ್ರಶಸ್ತಿ ನೀಡುತ್ತಿದ್ದೇವೆ. ಈ ಪ್ರಶಸ್ತಿಯು ರೂಪಾಯಿ 10,000 ನಗದು ಒಳಗೊಂಡಿದೆ” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕನ್ನಡ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಹರೀಶ್ ಕೊಡಸೆ, ವೀರಪ್ಪ ಭದ್ರಾಪುರ, ಪಿ.ಶಿವರಾಮ್, ಆರ್. ಜಯಾನಾಯಕ, ಡಾ. ಕೆ. ಎಸ್. ದೇವೆಂದ್ರಪ್ಪ, ವಿಶ್ವನಾಥ ಬರೂರ್, ರಿಯಾ ಆಯಿಶಾ ಉಪಸ್ಥಿತರಿದ್ದರು.

    award kannada Literature
    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ ಗೋವಿಂದದಾಸ ಕಾಲೇಜ್‌ನಲ್ಲಿ ‘ಯಕ್ಷ ದ್ಯುತಿ’ ಅಭಿನಂದನಾ ಸಮಾರಂಭ.
    Next Article ಕೆಮ್ತೂರು ತುಳು ನಾಟಕ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭ
    roovari

    Add Comment Cancel Reply


    Related Posts

    ಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರಿಗೆ ಗೌರವ ಸಮರ್ಪಣೆ

    June 12, 2025

    ಕವನ | ಮುಂಗಾರು ಮಳೆ

    June 12, 2025

    ವಿಶೇಷ ಲೇಖನ – ಮಹಾನ್ ವಿದ್ವಾಂಸ ಹೀ. ಚ. ಶಾಂತವೀರಯ್ಯ

    June 11, 2025

    ನಾಟಕ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.