ದೆಹಲಿ : ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ “ಭಾರತ್ ಪರ್ವ” ಉತ್ಸವದಲ್ಲಿ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನವು ದಿನಾಂಕ 31 ಜನವರಿ 2025 ರಂದು ನಡೆಯಿತು.
ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ನಡೆದ ಈ ಪ್ರದರ್ಶನದಲ್ಲಿ ಕೋಟ ಸುದರ್ಶನ ಉರಾಳ್, ಪ್ರಿಯಾಂಕ ಕೆ. ಮೋಹನ್, ಶ್ರೀರಾಮ್ ಹೆಬ್ಬಾರ್, ಶ್ರೀವತ್ಸ ಅಡಿಗ, ಶಿಲ್ಪಾ ಅರುಣ್, ಶಿಲ್ಪಾ ಆನಂದ್ ಮತ್ತು ಉಷಾ ಅಮೈರಾ ಭಾಗವಹಿಸಿದರು.

