ಉಡುಪಿ : ಪೆರ್ಡೂರು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಹಾಗೂ ಮಲ್ಪೆಯ ಮತ್ಸ್ಯರಾಜ್ ಗ್ರೂಪ್ ಜಂಟಿ ಆಶ್ರಯದಲ್ಲಿ ಶಿವರಾತ್ರಿ ಪ್ರಯುಕ್ತ ದಿನಾಂಕ 02 ಮಾರ್ಚ್ 2025 ರವಿವಾರದಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಆಯ್ದ ತಂಡಗಳ ಭಜನೆ ಜುಗಲ್ ಬಂದಿ ಸ್ಪರ್ಧೆಯನ್ನು ಮಲ್ಪೆ ಪಡುಕೆರೆಯ ಶ್ರೀ ದೇವಿ ಭಜನಾ ಮಂದಿರದ ಆವರಣದ ಕಡಲ ತಡಿಯಲ್ಲಿ ಆಯೋಜಿಸಲು ಉದ್ದೇಶಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಆಸಕ್ತ ತಂಡಗಳು ದಿನಾಂಕ 12 ಫೆಬ್ರವರಿ 2025ನೇ ತಾರೀಖಿನೊಳಗೆ ತಮ್ಮ ತಂಡ ಹಾಡಿರುವ ಭಜನೆಯ ವಿಡಿಯೋವನ್ನು 9900408243, 9743579059, 9743493177 ಮೊಬೈಲ್ಗೆ ವಾಟ್ಸಾಪ್ ಮಾಡಬೇಕಾಗಿ ವಿನಂತಿಸಲಾಗಿದೆ. ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು ಬಹುಮಾನ ಪ್ರಥಮ ರೂ.25,000/-, ದ್ವಿತೀಯ ರೂ.20,000/-, ತೃತೀಯ ರೂ.15,000/- ಹಾಗೂ ಉತ್ತಮ ಹಾಡುಗಾರ, ತಬಲಾ, ಹಾರ್ಮೋನಿಯಂ ವಾದಕರಿಗೆ ಪ್ರತ್ಯೇಕ ಬಹುಮಾನವಿದೆ.