ಮೈಸೂರು : ರಂಗಾಯಣ ಮೈಸೂರು ಇದರ ವತಿಯಿಂದ ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಪ್ರಯುಕ್ತ ರೆಪರ್ಟರಿ ಹಿರಿಯ ಕಲಾವಿದರು ಅಭಿನಯಿಸುವ ಡಿವೈಸ್ಡ್ ನಾಟಕ ‘ಕಾಣೆ ಆದವರು’ ಇದರ ಪ್ರದರ್ಶನವನ್ನು ದಿನಾಂಕ 09 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ಸೌರವ್ ಪೋದ್ದಾರ್ ಇವರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ನಂದಿನಿ ಕೆ.ಆರ್., ಶಶಿಕಲಾ ಬಿ.ಎನ್. ಮತ್ತು ಗೀತಾ ಮೋಂಟಡ್ಕ ಇವರು ಅಭಿನಯಿಸಲಿದ್ದಾರೆ.