ಮಂಗಳೂರು : ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ಮಂಗಳೂರು ‘ನಿರ್ದಿಗಂತ ಉತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 28 ಫೆಬ್ರವರಿ 2025ರಿಂದ 03 ಮಾರ್ಚ್ 2025ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ದಿನಾಂಕ 28 ಫೆಬ್ರವರಿ 2025ರಂದು 9-30 ಗಂಟೆಗೆ ಈ ಕಾರ್ಯಕ್ರಮವು ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮತ್ತು ಪ್ರಕಾಶ್ ರಾಜ್ ಇವರಿಂದ ಉದ್ಘಾಟನೆಗೊಳ್ಳಲಿದೆ. 10-30 ಗಂಟೆಗೆ ಪುರುಷೋತ್ತಮ ಬಿಳಿಮಲೆ ಇವರಿಂದ ಆಶಯ ಭಾಷಣ, 12-00 ಗಂಟೆಗೆ ಶಕೀಲ್ ಅಹ್ಮದ್ ಇವರ ನಿರ್ದೇಶನದಲ್ಲಿ ಬಿಜಾಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ತಂಡದವರಿಂದ ‘ಫಾರ್ ಎ ಬ್ರೈಟ್ ಆಫ್ ಫುಡ್’ ನಾಟಕ ಪ್ರದರ್ಶನ, 3-00 ಗಂಟೆಗೆ ಮಂಗಳೂರಿನ ಯಕ್ಷಮಿತ್ರರು ತಂಡದವರಿಂದ ‘ಕೋಟಿ ಚೆನ್ನಯ್ಯ’ ಯಕ್ಷಗಾನ, 4-00 ಗಂಟೆಗೆ ಡಾ. ಗಣನಾಥ ಎಕ್ಕಾರು ಇವರಿಂದ ‘ಬದಲಾಗುತ್ತಿರುವ ಯಕ್ಷಗಾನದ ಸ್ವರೂಪ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 5-30 ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ‘ಕಾಲೇಜ್ ಬ್ಯಾಂಡ್ ಜ್ಯಾಮಿಂಗ್’ ಮತ್ತು 7-00 ಗಂಟೆಗೆ ಧಾರವಾಡ ಆಟಮಾಟ ತಂಡದವರಿಂದ ‘ಗುಡಿಯ ನೋಡಿರಣ್ಣ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 01 ಮಾರ್ಚ್ 2025ರಂದು 9-30 ಗಂಟೆಗೆ ಹಿಂದಿನ ದಿನದ ನಾಟಕಗಳ ಚರ್ಚೆ, 10-30 ಗಂಟೆಗೆ ‘ಕರಾವಳಿಯ ಭಾಷಾ ಸಂಬಂಧದ ಕೊಡುಕೊಳ್ವೆಯ ಸ್ವರೂಪ’ ಎಂಬ ವಿಷಯ ಬಗ್ಗೆ ಡಾ. ಮೋಹನ್ ಕುಂಟಾರ್ ಇವರಿಂದ ಉಪನ್ಯಾಸ, 12-00 ಗಂಟೆಗೆ ಕ್ಲೆನ್ವಿನ್ ನಿರ್ದೇಶನದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದವರಿಂದ ‘ಹ್ಯಾಂಗಾನ್’ ಕೊಂಕಣಿ ನಾಟಕ, 3-00 ಗಂಟೆಗೆ ಬಂಟ್ವಾಳದ ಶಾರದಾ ಜಿ. ಬಂಗೇರ ಇವರಿಂದ ಪಾಡ್ದಾನ, ಐರಿನ್ ರೆಬೆಲ್ಲೊ ಮತ್ತು ತಂಡದವರಿಂದ ‘ವೊವಿಯೊ’, ಪೂಜ್ಯ ಸೇಸು ಗೌಡ ಕಲಾ ಟ್ರಸ್ಟ್ ಇವರಿಂದ ಕುಡುಬಿ ಹಾಡುಗಳು, 4-00 ಗಂಟೆಗೆ ‘ಸ್ಥಳೀಯ ಚರಿತ್ರೆಗಳು ಮತ್ತು ಕುಸಿಯುತ್ತಿರುವ ಬಹುತ್ವದ ನೆಲೆ’ ಎಂಬ ವಿಷಯದ ಬಗ್ಗೆ ವೆಂಕಟರಮಣ ಐತಾಳ್ ಇವರಿಂದ ಉಪನ್ಯಾಸ, 5-30ಕ್ಕೆ ನಿರ್ದಿಗಂತ ತಂಡದವರಿಂದ ‘ಸಮತೆಯ ಹಾಡುಗಳು’, ಸಂಜೆ 7-00 ಗಂಟೆಗೆ ಅರುಣ್ ಲಾಲ್ ಇವರ ನಿರ್ದೇಶನದಲ್ಲಿ ಕೇರಳದ ಲಿಟಲ್ ಅರ್ತ್ ಸ್ಕೂಲ್ ಆಫ್ ಥಿಯೇಟರ್ ಇವರಿಂದ ‘ಕೂಹೂ ; ಆಂತಾಲಜಿ ಆನ್ ದ ರೈಲ್ಸ್’ ಮಲಯಾಳಂ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 02 ಮಾರ್ಚ್ 2025ರಂದು 9-30 ಗಂಟೆಗೆ ಹಿಂದಿನ ದಿನದ ನಾಟಕಗಳ ಚರ್ಚೆ, 10-30 ಗಂಟೆಗೆ ನರೇಂದ್ರ ರೈ ದೇರ್ಲ ಇವರಿಂದ ‘ಜೀವ ಸಂರಕ್ಷಣೆ ಮತ್ತು ಆಚರಣಾ ಲೋಕ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 12-00 ಗಂಟೆಗೆ ನಿರ್ದಿಗಂತ ತಂಡದಿಂದ ಸವಿತಾ ರಾಣಿ ಇವರ ನಿರ್ದೇಶನದಲ್ಲಿ ‘ರಸೀದಿ ಟಿಕೇಟ್’ ನಾಟಕ, 3-00 ಗಂಟೆಗೆ ಫಾತಿಮಾ ರಲಿಯ, ವಿಲ್ಸನ್ ಕಟೀಲ್, ಸಚಿನ್ ಅಂಕೋಲ ಇವರಿಂದ ‘ಕಥಾ ಕಾವ್ಯ ಕಾರಣ’, 4-00 ಗಂಟೆಗೆ ‘ಕರಾವಳಿಯ ಸೃಜನಶೀಲತೆಯ ಸ್ವರೂಪ’ ಎಂಬ ವಿಷಯದ ಬಗ್ಗೆ ಶ್ರೀನಿವಾಸ ಗಿಳಿಯಾರು ಇವರಿಂದ ಉಪನ್ಯಾಸ, 5-30 ಗಂಟೆಗೆ ಉಡುಪಿಯ ಸಾವಿತ್ರಿ ಬಾಯಿ ಫುಲೆ ಸಾಂಸ್ಕೃತಿಕ ಕಲಾತಂಡದವರಿಂದ ಕೊರಗರ ಡೋಲು ಮತ್ತು ಕುಡುಬಿ ನೃತ್ಯ, 7-00 ಗಂಟೆಗೆ ನಿರ್ದಿಗಂತ ತಂಡದವರಿಂದ ಶಕೀಲ್ ಅಹ್ಮದ್ ಇವರ ನಿರ್ದೇಶನದಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನ.
ದಿನಾಂಕ 03 ಮಾರ್ಚ್ 2025ರಂದು 2025ರಂದು 9-30 ಗಂಟೆಗೆ ಹಿಂದಿನ ದಿನದ ನಾಟಕಗಳ ಚರ್ಚೆ, 10-30 ಗಂಟೆಗೆ ‘ಕರಾವಳಿ ಸಂಸ್ಕೃತಿಯಲ್ಲಿ ಸ್ತ್ರೀ ಲೋಕದೃಷ್ಠಿ’ ಎಂಬ ವಿಷಯದ ಬಗ್ಗೆ ಡಾ. ಇಂದಿರಾ ಹೆಗ್ಡೆ ಇವರಿಂದ ಉಪನ್ಯಾಸ, 12-00 ಗಂಟೆಗೆ ಸುಮನಸ ಕೊಡವೂರು ಇವರಿಂದ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ‘ಈದಿ’ ತುಳು ನಾಟಕ, 3-00 ಗಂಟೆಗೆ ಸಂಸಾರ ಪುತ್ತೂರು ತಂಡದವರಿಂದ ‘ನಾವು ಯಾವಾಗ ಬದಲಾಗುತ್ತೇವೆ’ ಮತ್ತು ಸಂಸಾರ ಜೋಡುಮಾರ್ಗ ತಂಡದವರಿಂದ ‘ಈಗ ಹೇಳಿ .. ನಾವೇನ್ಮಾದೋಣ..?’ ಬೀದಿ ನಾಟಕ ಪ್ರದರ್ಶನ, 4-00 ಗಂಟೆಗೆ ವಿದ್ದು ಉಚ್ಚಿಲ್ ಇವರಿಂದ ‘ವರ್ತಮಾನದ ಕರಾವಳಿ ರಂಗಭೂಮಿ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 5-30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪಾರ್ವತಿ ತಿರುವೊತ್ತು ಮತ್ತು ಪ್ರಕಾಶ್ ರಾಜ್ ಇವರಿಂದ ‘ನಾರ್ತ್ ಈಸ್ಟ್ ಬ್ರಾಸ್ ಬ್ಯಾಂಡ್ ವೇಷ ಕುಣಿತ’, 7-00 ಗಂಟೆಗೆ ನಿರ್ದಿಗಂತ ತಂಡದವರಿಂದ ಅಮಿತ್ ರೆಡ್ಡಿ ಇವರ ನಿರ್ದೇಶನದಲ್ಲಿ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನ ನಡೆಯಲಿದೆ.