ಧಾರವಾಡ : ಸಾಹಿತ್ಯ ಗಂಗಾ ಧಾರವಾಡ ಸಂಸ್ಥೆಯು 45 ವರ್ಷದೊಳಗಿನ ಉದಯೋನ್ಮುಖ ಲೇಖಕ/ ಲೇಖಕಿಯರನ್ನು ಪ್ರೋತ್ಸಾಹಿಸಲು ಕಥೆ ಮತ್ತು ಪ್ರಬಂಧಗಳ ಸಂಪುಟವೊಂದನ್ನು ಯುವ ವಿಮರ್ಶಕರಾದ ವಿಕಾಸ ಹೊಸಮನಿ ಮತ್ತು ಸುಭಾಷ್ ಪಟ್ಟಾಜೆಯವರ ಸಂಪಾದಕತ್ವದಲ್ಲಿ ಪ್ರಕಟಿಸಲಿದೆ. ಈ ಸಂಪುಟದಲ್ಲಿ 20 ಕಥೆಗಳು ಮತ್ತು 20 ಪ್ರಬಂಧಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಆಸಕ್ತರು ನಿಯಮಾನುಸಾರವಾಗಿ ಬರಹಗಳನ್ನು ಕಳುಹಿಸಬೇಕು.
ನಿಯಮಗಳು :
# ಈ ಸಂಪುಟಕ್ಕೆ ಸ್ವತಂತ್ರ ಮತ್ತು ಅಪ್ರಕಟಿತ ಕಥೆ-ಪ್ರಬಂಧಗಳನ್ನು ಮಾತ್ರ ಕಳುಹಿಸಬೇಕು.
# ಅನುವಾದ, ಅನುಸೃಷ್ಟಿ, ರೂಪಾಂತರ ಮಾಡಿದ ಕಥೆ-ಪ್ರಬಂಧಗಳಿಗೆ ಅವಕಾಶವಿಲ್ಲ.
# ಒಬ್ಬರು ಒಂದು ಕಥೆ ಅಥವಾ ಪ್ರಬಂಧವನ್ನು ಮಾತ್ರ ಕಳುಹಿಸಬೇಕು.
# ಕಥೆ-ಪ್ರಬಂಧಗಳು ಕನಿಷ್ಠ 700 ಪದಗಳ ಮೇಲೆ ಮತ್ತು ಗರಿಷ್ಠ 1500 ಪದಗಳೊಳಗಿರಬೇಕು.
# ಕಥೆ-ಪ್ರಬಂಧಗಳನ್ನು ಕಡ್ಡಾಯವಾಗಿ docx & pdf ಎರಡೂ ರೂಪದಲ್ಲಿ ಕಳಿಸಬೇಕು. ಬರಹಗಾರರ ಸಂಕ್ಷಿಪ್ತ ಪರಿಚಯ, ವಯೋಮಿತಿ ದೃಢೀಕರಣದ ದಾಖಲೆ, ಪೂರ್ಣ ವಿಳಾಸ ಮತ್ತು ಒಂದು ಫೋಟೋ ಪ್ರತ್ಯೇಕವಾಗಿ ಕಳುಹಿಸಬೇಕು.
# ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ, ಕಥೆ-ಪ್ರಬಂಧಗಳ ಆಯ್ಕೆಯಲ್ಲಿ ಸಂಪಾದಕರ ತೀರ್ಮಾನವೇ ಅಂತಿಮ.
# ಕಥೆ-ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ 10 ಮೇ 2025.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ವಿಕಾಸ ಹೊಸಮನಿ – 9110687473 ಮತ್ತು ಸುಭಾಷ್ ಪಟ್ಟಾಜೆ – 9645081966