ಧಾರವಾಡ : ಸಂಗೀತ ಲೋಕದ ದಿಗ್ಗಜ ಅಂತರಾಷ್ಟ್ರೀಯ ಖ್ಯಾತಿಯ ಸರೋದವಾದಕ ಪಂಡಿತ್ ರಾಜೀವ ತಾರಾನಾಥರ ನೆನಪಿನಲ್ಲಿ ಪಂಡಿತ್ ರಾಜೀವ ತಾರಾನಾಥ ಮೆಮೋರಿಯಲ್ ಟ್ರಸ್ಟ್ ಮೈಸೂರ್ ಹಾಗೂ ಧಾರವಾಡದ ಜಿ.ಬಿ. ಜೋಷಿ ಮೆಮೋರಿಯಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಧಾರವಾಡದಲ್ಲಿ ವಿಶೇಷ ಕಾರ್ಯಕ್ರಮವನ್ನು ದಿನಾಂಕ 11 ಏಪ್ರಿಲ್ 2025ರಂದು ಧಾರವಾಡದ ಸೃಜನ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 5-30 ಗಂಟೆಗೆ ಪಂಡಿತ್ ರಾಜೀವ ತಾರಾನಾಥರ ಬಗ್ಗೆ ನಗುವನ ಕ್ರಿಯೇಶನ್ಸ್ ಅಡಿಯಲ್ಲಿ ಎಚ್.ಆರ್. ಸುಜಾತ ಹಾಗೂ ಎನ್.ಆರ್. ವಿಶುಕುಮಾರ್ ಇವರು ನಿರ್ಮಿಸಿದ ಸಾಕ್ಷಿ ಚಿತ್ರವನ್ನು ಪ್ರದರ್ಶಿಸಲಾಗುವುದು. ನಂತರ ಪಂಡಿತ್ ರಾಜೀವ ತಾರಾನಾಥರ ಬಗ್ಗೆ ವಿವಿಧ ಲೇಖಕರು ಬರೆದ ಸಂಕಲನ ‘ತಾರಾನಾದ’ವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ್ ಕಂಬಾರ ಅವರು ಬಿಡುಗಡೆಗೊಳಿಸಲಿದ್ದಾರೆ. ಕೃತಿಯ ಕುರಿತು ಹಿರಿಯ ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಇವರು ಮಾತನಾಡಲಿದ್ದಾರೆ. ಪಂಡಿತ್ ರಾಜೀವ ತಾರಾನಾಥ ಅವರ ಸ್ನೇಹ ವ್ಯಕ್ತಿತ್ವದ ಕುರಿತು ಮನೋಹರ ಗ್ರಂಥ ಮಾಲಯ ಡಾ. ರಮಕಾಂತ್ ಜೋಶಿ ಹಾಗೂ ಪ್ರಸಿದ್ಧ ಗಾಯಕ ಪಂಡಿತ್ ಎಂ. ವೆಂಕಟೇಶ್ ಕುಮಾರ ಇವರು ತಮ್ಮ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ. ಅನಂತರ ಪ್ರಸಿದ್ಧ ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ ಇವರಿಂದ ಬಾನ್ಸೂರಿ ವಾದನ ನಡೆಯಲಿದೆ.