Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾರ್ಕಳ ಸಾಹಿತ್ಯ ಸಂಘದಲ್ಲಿ ಕೆ. ಬಾಲಕೃಷ್ಣ ರಾವ್ ಇವರ ‘ಪಥ’ ಕಾದಂಬರಿ ಬಿಡುಗಡೆ
    Book Release

    ಕಾರ್ಕಳ ಸಾಹಿತ್ಯ ಸಂಘದಲ್ಲಿ ಕೆ. ಬಾಲಕೃಷ್ಣ ರಾವ್ ಇವರ ‘ಪಥ’ ಕಾದಂಬರಿ ಬಿಡುಗಡೆ

    May 26, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾರ್ಕಳ : ಕೆ. ಬಾಲಕೃಷ್ಣ ರಾವ್ ಇವರು ಬರೆದಿರುವ ‘ಪಥ’ ಕಾದಂಬರಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 22 ಮೇ 2025ರಂದು ಕಾರ್ಕಳ ಸಾಹಿತ್ಯ ಸಂಘದಲ್ಲಿ ನಡೆಯಿತು.

    ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿಲಯ ನಿರ್ದೇಶಕ ಡಾ. ವಸಂತ್ ಕುಮಾರ್ ಪೆರ್ಲ “ಕಾದಂಬರಿಯು ನಮ್ಮ ಜೀವನದ ಕನ್ನಡಿ, ಇದು ಸಮಾಜವನ್ನು ಒಂದುಗೂಡಿಸುವ ಸರಪಳಿಯ ಕೊಂಡಿ. ಇಂದು ನಾವು ಸಂಬಂಧಗಳ ಕೊಂಡಿಯನ್ನು ಕಳೆದುಕೊಂಡಿದ್ದೇವೆ. ಒಂದೇ ಮನೆಯಲ್ಲಿದ್ದರೂ ಅಪರಿಚಿತರಾಗಿ ಬದುಕುತ್ತಿದ್ದೇವೆ. ಮಕ್ಕಳು ಒಂದು ಕಡೆ, ತಂದೆ ತಾಯಿ ಇನ್ನೊಂದು ಕಡೆ. ಹೀಗೆ ಬೇರೆ ಬೇರೆ ಕಡೆ ಚದುರಿ ಹೋಗಿರುವುದರಿಂದ ಭಾವನೆಗಳಿಗೆ ಬೆಲೆ ಇಲ್ಲದಾಗಿದೆ. ಮನೆಯೊಳಗೂ ಸದಸ್ಯರು ಮಾತನಾಡಬೇಕಿದ್ರೆ ಮೊಬೈಲ್ ನಲ್ಲಿಯೇ ಮಾತನಾಡುವ ಸಮಯ ಇದಾಗಿದೆ. ಕೆ. ಬಾಲಕೃಷ್ಣ ರಾವ್ ಬರೆದ ಕಾದಂಬರಿಯು ಇಂದಿನ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆ ಆಗಿದೆ. ಇವರು ಬರೆದ ‘ಪಥ’ ಕಾದಂಬರಿ ತನ್ನದೇ ಆದ ಶೈಲಿಯನ್ನು ಹೊಂದಿದ್ದು, ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನಮ್ಮ ಸುತ್ತ ನಡೆಯುವ ಘಟನೆಗಳನ್ನು ಪ್ರತಿಬಿಂಬಿಸುತ್ತವೆ. ಈ ಕಾದಂಬರಿ ಓದುಗರನ್ನು ವಿಶಿಷ್ಟ ಶೈಲಿಯ ಕಡೆಗೆ ಕೊಂಡೊಯ್ಯುತ್ತದೆ” ಎಂದು ಅಭಿಪ್ರಾಯಪಟ್ಟರು.

    ಡಾ. ಜನಾರ್ದನ ಭಟ್ ರವರು ಮಾತನಾಡಿ ‘ಪಥ’ ಕಾದಂಬರಿಯ ಸಮಗ್ರ ವಿಮರ್ಶೆ ಮಾಡಿದರು. “ಈ ಕಾದಂಬರಿಯು ಒಟ್ಟಿಗೆ ಐದು ಆಯಾಮಗಳನ್ನು ಹೊಂದಿದ್ದು, ಪ್ರತಿಯೊಂದು ಆಯಾಮಕ್ಕೂ ಸರಪಣಿಗಳ ಕೊಂಡಿಯಂತೆ ಹೆಣಿದುಕೊಂಡಿದೆ. ಪ್ರತಿಯೊಂದು ಆಯಾಮವೂ ಓದುಗರನ್ನು ಓದಿಸಿಕೊಂಡು ಹೋಗುವುದರಲ್ಲಿ ಯಶಸ್ವಿಯಾಗಿದೆ. ನಡು ನಡುವೆ ಇರುವ ತಿರುವುಗಳು ವೈಜ್ಞಾನಿಕವಾಗಿದೆ. ಕೆಲವು ತಮಾಷೆಯ ಸಂಭಾಷಣೆಗಳು ಓದುಗರನ್ನು ಸಂತೋಷಪಡಿಸುತ್ತದೆ. ಕಾದಂಬರಿಯ ಕಥೆಯ ನಾಯಕ ಸದಾನಂದನ ಬದುಕಿನ ಏರಿತಗಳು, ಮಗಳು ಶಾರದೆಯ ಜೀವನ ಈಗಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಸದಾನಂದ ವಿದ್ಯೆಯ ಪಥದೊಂದಿಗೆ ಐ.ಎ.ಎಸ್. ಆಫೀಸರ್ ಆಗಿ ಜೀವನದಲ್ಲಿ ಗೌರವದ ಸ್ಥಾನ ಗಳಿಸುವ ಗುರಿಯನ್ನು ಹೊಂದಿ, ಕೊನೆಗೂ ಅದನ್ನು ಪಡೆದು, ಹಲವಾರು ಸವಾಲುಗಳನ್ನು ಎದುರಿಸಿ ಗೆಲ್ಲುತ್ತಾನೆ. ಒಂದು ಕಡೆ ಆಡಳಿತ ವ್ಯವಸ್ಥೆಯಲ್ಲಿ ಎದುರಾಗುವ ಬೆದರಿಕೆ, ಇನ್ನೊಂದು ಕಡೆ ಕುಟುಂಬದಲ್ಲಿ ಉಂಟಾಗುವ ಸೋಲು, ಇವುಗಳನ್ನು ನಿಭಾಯಿಸುವ ರೀತಿ ಕಾದಂಬರಿಯನ್ನು ಕೂತುಹಲದಿಂದ ಓದುಗನನ್ನು ಓದುವಂತೆ ಮಾಡುತ್ತದೆ. ಈ ಕಾದಂಬರಿಯ ಕಥೆ ಟಿ.ವಿ. ಸೀರಿಯಲ್ ಅಥವಾ ಚಲನಚಿತ್ರಗಳಿಗೆ ಸರಿಹೊಂದುತ್ತದೆ. ಕಥೆಯ ಕೊನೆಯಲ್ಲಿ ಕಥಾನಾಯಕ, ಅನುಭವಿಸುವ ಏಕಾಂಗಿತನ ಎಲ್ಲರ ಮನೆಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ” ಎಂದು ಹೇಳಿದರು.

    ಕಾರ್ಕಳ ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಪ್ರೊಫೆಸರ್ ಬಿ. ಪದ್ಮನಾಭ ಗೌಡ ಮಾತನಾಡಿ “ಗಣಿತ ಮತ್ತು ಸಾಹಿತ್ಯ ಎರಡನ್ನೂ ಒಗ್ಗೂಡಿಸಿರುವ ಕೆ. ಬಾಲಕೃಷ್ಣ ರಾವ್ ಅವರದ್ದು ವಿಶೇಷ ವ್ಯಕ್ತಿತ್ವ. ವಿದ್ಯಾರ್ಥಿ ದೆಸೆಯಿಂದಲೂ ಇವರು ಕಥೆ, ಕವನ, ಲೀಖನಗಳನ್ನು ಬರೆಯುತಿದ್ದು, ಮಂಗಳೂರು ಆಕಾಶವಾಣಿಯಲ್ಲಿಯೂ ಇವರ ಕಥೆ, ಕವನ, ಚಿಂತನ ಕಾರ್ಯಕ್ರಮಗಳ ಪ್ರಸಾರವಾಗಿದೆ” ಎಂದು ಹೇಳಿದರು. ಇತ್ತೀಚಿಗೆ ನಿಧನರಾದ ಸಾಹಿತಿ ಪ್ರೊ. ಹೇರಿಂಜೆ ಕೃಷ್ಣ ಭಟ್ ಮತ್ತು ನಂದಳಿಕೆ ಬಾಲಚಂದ್ರ ರಾವ್ ಇವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು. ಪ್ರಾರ್ಥನೆಯನ್ನು ವೈ. ಅನಂತ ಪದ್ಮನಾಭ ಭಟ್ ನೆರವೇರಿಸಿದರು. ವೇದಿಕೆಯಲ್ಲಿ ಕಾರ್ಕಳ ಸಾಹಿತ್ಯ ಸಂಘದ ಕೋಶಾಧಿಕಾರಿ ನಿತ್ಯಾನಂದ ಪೈ, ಕಾರ್ಕಳ ಸಾಹಿತ್ಯ ಸಂಘದ ಗೌರವಾಧ್ಯಕ್ಷರಾದ ತುಕಾರಾಮ ನಾಯಕ್, ಕೃತಿಕಾರರಾದ ಕೆ. ಬಾಲಕೃಷ್ಣ ರಾವ್ ಉಪಸ್ಥಿತರಿದ್ದರು. ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿ, ಬೇಬಿ. ಕೆ. ಈಶ್ವರ ಮಂಗಳ ಸಹಕರಿಸಿದರು.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಪ್ರೊ. ಮೋಹನ ಕುಂಟಾರ್ ದತ್ತಿನಿಧಿ ಉದ್ಘಾಟನೆ, ಪುಸ್ತಕ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ | ಮೇ 30
    Next Article ಬಾಳ್ತಿಲ ಗ್ರಾಮದ ಚೆಂಡೆಯಲ್ಲಿ ‘ಪುಳಿಂಚ ಪ್ರಶಸ್ತಿ’ ಪ್ರದಾನ ಮತ್ತು ಕೃತಿ ಬಿಡುಗಡೆ
    roovari

    Add Comment Cancel Reply


    Related Posts

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.