ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ವತಿಯಿಂದ ದಿನಾಂಕ 22 ಮೇ 2025ರಂದು ಮಂಗಳೂರು ಆಕಾಶವಾಣಿ ಕಚೇರಿಯಲ್ಲಿ ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಸೂರ್ಯನಾರಾಯಣ ಭಟ್ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೂರ್ಯ ನಾರಾಯಣ ಭಟ್ ಪಿ.ಎಸ್. “ಆಕಾಶವಾಣಿಯಲ್ಲಿ ಸುದೀರ್ಘ 36 ವರ್ಷ ಅತ್ಯಂತ ನಿಷ್ಠೆ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಿ ಇದೀಗ ಸಂತೃಪ್ತಿಯಿಂದ ಸೇವೆಯಿಂದ ನಿವೃತ್ತನಾಗಲಿದ್ದೇನೆ. ಮುಂದೆಯೂ ಸಾಹಿತ್ಯ ಸೇವೆ ಮಾಡುವ ಹಂಬಲವಿದೆ” ಎಂದು ಹೇಳಿದರು.
ಕ.ಸಾ.ಪ. ಮಂಗಳೂರು ಅಧ್ಯಕ್ಷ ಡಾ. ಮಂಜುನಾಥ ರೇವಣ್ಕರ್, ಕೇಂದ್ರ ಸಮಿತಿಯ ಮಾರ್ಗದರ್ಶಿ ಸಮಿತಿಯ ಸದಸ್ಯ ಡಾ. ಮುರಲಿ ಮೋಹನ ಚೂಂತಾರು, ಕಾರ್ಯದರ್ಶಿ ಗಣೇಶ್ ಪ್ರಸಾದ್ಜೀ, ರಘು ಶೆಟ್ಟಿ, ಸನತ್ ಕುಮಾರ್ ಜೈನ್, ಸುಖಲಾಕ್ಷಿ ಆರ್. ಸುವರ್ಣ, ರತ್ನಾವತಿ ಜೆ. ಬೈಕಾಡಿ ಸಮ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕ.ಸಾ.ಪ.ದ ಸದಸ್ಯರಾದ ಕೃಷ್ಣಪ್ಪ ನಾಯ್ಕ, ನಿಜಗುಣ ದೊಡ್ಡಮನಿ, ಪ್ರತಾಪ್ ಕುಮಾರ್, ಮಂಗಳೂರು ಆಕಾಶವಾಣಿಯ ಚಂದ್ರಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.