ಬೆಂಗಳೂರು : ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ಣಾಟಕ ಸರ್ಕಾರ ಮತ್ತು ಕನ್ನಡ ಸಹೃದಯ ಪ್ರತಿಷ್ಠಾನ ಕುಮಾರ ವ್ಯಾಸ ಮಂಟಪ ಇವರ ಸಹಕಾರದಲ್ಲಿ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 07 ಜೂನ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಬೆಂಗಳೂರು ರಾಜಾಜಿ ನಗರದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಶ್ರೀ ವಾಗ್ದೇವಿ ಪ್ರಶಸ್ತಿ’ಯನ್ನು ವಿದುಷಿ ಎನ್. ಶ್ರೀಮತಿ ಜಯರಾಂ, “ಕೀರ್ತಿಶೇಷ ಗುರು ಪದ್ಮಶ್ರೀ ಹೆಚ್.ಆರ್. ಕೇಶವಮೂರ್ತಿ ಸ್ಮಾರಕ ಉತ್ತಮ ಗಮಕ ಶಿಕ್ಷಕ ಪ್ರಶಸ್ತಿ’ಯನ್ನು ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಹಾಗೂ ದಿ. ಕೆ.ವಿ. ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಯುವ ಗಮಕ ಪ್ರಶಸ್ತಿ’ಯನ್ನು ವಿದ್ವಾನ್ ವೇ. ಬ್ರಂ. ಅಚ್ಯುತ ಅವಧಾನೀ ಎಂ.ಎಲ್. ಇವರುಗಳಿಗೆ ಪ್ರದಾನ ಮಾಡಲಾಗುವುದು. ಸಾನ್ವಿ ಎಸ್. ಜೋಯಿಸ್, ಅನೀಶ್ ನಾಗೇಶ್, ರಿಧಿ ಭಾರದ್ವಾಜ್, ಸ್ಪಂದನಾ, ನೈನಿಕಾ ಕೊಡಂಚ ಕೆ., ಅಭಿರಾಮ ದೇಸಾಯಿ ಮುಂತಾದ ಕಲಾವಿದರಿಂದ ಕಾವ್ಯಾಂತ್ಯಾಕ್ಷರಿ ಹಾಗೂ ಪ್ರಶಸ್ತಿ ಪುರಸ್ಕೃತರಿಂದ ಗಮಕ ಗೋಷ್ಠಿ ಪ್ರಸ್ತುತಗೊಳ್ಳಲಿದೆ.