ರಾಯಚೂರು: 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಸಾಹಿತಿ ಡಾ.ಜಯದೇವಿ ಗಾಯಕವಾಡ ಆಯ್ಕೆಯಾಗಿದ್ದಾರೆ. ರಾಯಚೂರಿನ ಪಂ. ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ 2025ರ ಜೂನ್ 28 ಹಾಗೂ 29ರಂದು ಸಮ್ಮೇಳನ ಜರುಗಲಿದೆ.
ಸಭಯನ್ನುದ್ದೇಶಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ “ಡಾ. ಜಯದೇವಿ ಗಾಯಕವಾಡ ಅವರು ಕಲ್ಯಾಣ ಕರ್ನಾಟಕ ಭಾಗದ ಹೆಸರಾಂತ ಸಾಹಿತಿ. ಕಾದಂಬರಿ, ಕವನ, ಗಜಲ್,ಜೀವನ ಚರಿತ್ರೆ, ವೈಚಾರಿಕ ಸಾಹಿತ್ಯ, ವಿಮರ್ಶೆ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹೀಗಾಗಿ ಸರ್ವಾನುಮತದಿಂದ ಅವರನ್ನು ಆಯ್ಕೆ ಮಾಡಲಾಗಿದೆ,” ಎಂದು ತಿಳಿಸಿದರು.
“ಸಮ್ಮೇಳನವನ್ನು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದು, ರಾಜ್ಯಸಭಾ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ ಸಮ್ಮೇಳನದ ಆಶಯ ನುಡಿ ಆಡುವರು. ದಲಿತ ಸಾಹಿತ್ಯ ಪರಿಷತ್ತು ಹೊರತಂದಿರುವ 25 ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರಾದ ಡಾ. ಮನು ಬಳಿಗಾರ ಲೋಕಾರ್ಪಣೆಗೊಳಿಸುವರು. ದಲಿತ ಸಾಹಿತ್ಯ ಪರಿಷತ್ತು ನೀಡುವ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಪ್ರಶಸ್ತಿ’ ಗಳನ್ನು ಸಾಹಿತಿ ಕುಂ.ವೀರಭದ್ರಪ್ಪ ಪ್ರದಾನ ಮಾಡುವರು. ಸಮಾರೋಪ ಸಮಾರಂಭದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲ ಹಳ್ಳಿ ಶಿವಪ್ರಕಾಶ ಮುಖ್ಯ ಭಾಷಣ ಮಾಡುವರು. ಸಮ್ಮೇಳನದಲ್ಲಿ ಎರಡು ಕವಿ ಗೋಷ್ಠಿಗಳಿದ್ದು, ‘ಸರ್ವರಿಗೂ ಸಂವಿಧಾನ, ಮೀಸಲಾತಿ ಒಳಗೆ-ಹೊರಗೆ’ ಎಂಬ ವಿಷಯದ ಕುರಿತು ಸಂವಾದ ಗೋಷ್ಠಿ ನಡೆಯಲಿದೆ. ‘ರಾಯಚೂರು ಜಿಲ್ಲೆಯ ದಲಿತ ಬಂಡಾಯ ಸಾಹಿತ್ಯ ಹಾಗೂ ದಲಿತ ಲೋಕದ ವರ್ತಮಾನ’ ವಿಷಯಗಳ ಕುರಿತು ಸಂಕೀರ್ಣ ಗೋಷ್ಠಿ ಜರುಗಲಿದೆ..
Subscribe to Updates
Get the latest creative news from FooBar about art, design and business.
Previous Articleಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-3’ ಕೊಂಕಣಿ ಕವಿಗೋಷ್ಟಿ
Next Article ಮೈಸೂರಿನ ಸ್ವರಕುಟೀರದಲ್ಲಿ ‘ಭಿನ್ನಧ್ವನಿ’ ಮಕ್ಕಳ ರಂಗಕೂಟ