ಬೆಳ್ತಂಗಡಿ : ಕರ್ನಾಟಕ ಗಮಕಕಲಾ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ ‘ಮನೆಮನೆ ಗಮಕ’ ಸರಣಿ ಕಾರ್ಯಕ್ರಮದ 20ನೇ ಕಾರ್ಯಕ್ರಮ ದಿನಾಂಕ 14 ಜೂನ್ 2025ರಂದು ಜಿಲ್ಲಾಧ್ಯಕ್ಷರಾದ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯರ ಬೆಳ್ತಂಗಡಿ ಗೇರು ಕಟ್ಟೆಯ ಮಧೂರು ಮನೆಯಲ್ಲಿ ನಡೆಯಿತು.
ಸಂಗೀತ ವಿದ್ವಾನ್ ಶ್ರೀ ಎ. ಡಿ. ಸುರೇಶ್ ಇವರು ಕೌಶಿಕ ರಾಮಾಯಣದ ಸೀತಾ ಕಲ್ಯಾಣ ಭಾಗವನ್ನು ವಾಚನ ಮಾಡಿದರೆ, ಡಾಕ್ಟರ್ ಶ್ರೀಧರ ಭಟ್ ವ್ಯಾಖ್ಯಾನ ಮಾಡಿದರು. ಶ್ರೀ ಭುಜಬಲಿ ಧರ್ಮಸ್ಥಳ, ಡಾಕ್ಟರ್ ದಿವಾ ಕೊಕ್ಕಡ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ದಿವಾಕರ್ ಆಚಾರ್ಯ ಗೇರುಕಟ್ಟೆ, ಕುಂಟಿನಿ ರಾಘವೇಂದ್ರ ಭಾಂಗಿನ್ನಾಯ, ನಾರಾವಿ ಜಯರಾಮ್ ಭಟ್, ತಾಲೂಕು ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಭಟ್ ಬಳಂಜ , ಉಪನ್ಯಾಸಕಿ ಶ್ರೀಮತಿ ಭಾರತಿ ಮತ್ತು ಹಲವು ಗಮಕದ ವಿದ್ಯಾರ್ಥಿಗಳು, ಆಸಕ್ತರು ಹಾಜರಿದ್ದರು. ಶ್ರೀಮತಿ ಕೆ. ಆರ್. ಸುವರ್ಣ ಕುಮಾರಿ ಕಲಾವಿದರನ್ನು ಗೌರವಿಸಿದರು.