ಬಂಟ್ವಾಳ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಯುವ ವಾಹಿನಿ (ರಿ.)’ ಬಂಟ್ವಾಳ ಘಟಕವು ಕವಿ, ಸಾಹಿತಿ, ಸಂಘಟಕ ಬಿ. ತಮ್ಮಯ್ಯ ನೆನಪಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ 2024-25ರ ಅತೀ ಸಣ್ಣಕಥೆ ಸ್ಪರ್ಧೆ ಹಾಗೂ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿದ್ದು, ಅತೀ ಸಣ್ಣಕಥಾ ಸ್ಪರ್ಧೆಯಲ್ಲಿ ಸುಲ್ತಾನ್ ಮನ್ಸೂರು ಮಂಚಿ ಇವರ ‘ಜಾಥಾ’ ಕಥೆ ಪ್ರಥಮ ಹಾಗೂ ಸ್ಮಿತಾ ಅಮೃತರಾಜ್ ಸಂಪಾಜೆ ಇವರ ‘ಸ್ಫೋಟ’ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.
ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಬರೆದ ‘ಬೂಬು ಎಂಬ ಮರಿಮೊಮ್ಮಗಳು’ ಪ್ರಥಮ ಹಾಗೂ ನಳಿನಿ ಭೀಮಪ್ಪ ಧಾರವಾಡ ಬರೆದ ‘ಮುಡಿಯಿಂದ ಜಾರುತಿಹವೋ’ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ವಿಜೇತರಿಗೆ ಪ್ರಶಸ್ತಿಯನ್ನು ದಿನಾಂಕ 22 ಜೂನ್ 2025ರಂದು ಬಿ. ಸಿ.ರೋಡು ಗಾಣದ ಪಾಡ್ಪುವಿನಲ್ಲಿರುವ ಬ್ರಹ್ಮ ಶ್ರೀ ನಾರಾಯಣಗುರು ಸಭಾ ಭವನದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು.