ಮಡಿಕೇರಿ : ಕೊಡಗಿನ ಕವಿ, ಬರಹಗಾರ, ಕೊಡಗು ಜಿಲ್ಲಾ ದಸಾಪ ಅಧ್ಯಕ್ಷ ಅರ್ಜುನ್ ಮೌರ್ಯ ಇವರಿಗೆ 2025ರ ರಾಷ್ಟ್ರಮಟ್ಟದ “ಇಂಡಿಯನ್ ಐಕಾನಿಕ್ ಆಧರ್ -2025” ಅವಾರ್ಡ್ ಲಭಿಸಿದೆ. ಅರ್ಜುನ್ ಮೌರ್ಯ ಅವರ ಸಾಹಿತ್ಯ ಸೇವೆ ಗುರುತಿಸಿ “ವೈಡ್ ಇಂಡಿಯಾ ಅವಾರ್ಡ್” ನಂಸ್ಥೆಯ ವತಿಯಿಂದ ಹೈದರಾಬಾದ್ ನ ‘ದಿ ಪಾರ್ಕ್ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾವ್ಯ ತಾಪರ್ ಹಾಗೂ ವೈಡ್ ಇಂಡಿಯಾ ಅವಾರ್ಡ್ ಸಂಸ್ಥೆಯ ಸಿ. ಇ. ಓ. ವಿನಯ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಅರ್ಜುನ್ ಮೌರ್ಯ ಅವರ “ಬೆಂದೊಡಲ ಕುಣಿತ” ಕಾವ್ಯ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಕೊಡಗು ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೋಕಾರ್ಪಣೆ ಮಾಡಿದ್ದರು. ಅರ್ಜುನ್ ಮೌರ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.