ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸುವ ಒಡನಾಡಿ ಬಂಧು ಸಿಜಿಕೆ -75 ‘ಮಾಸದ ನೆನೆಪು’ ಸರಣಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭವನ್ನು ದಿನಾಂಕ 27 ಜೂನ್ 2025ರಂದು ಸಂಜೆ 6-00 ಗಂಟೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗ ಸಂಘಟಕ ಕೆ. ರೇವಣ್ಣ, ರಂಗ ನಿರ್ದೇಶಕ ರಾಜೇಶ್ ತಲಕಾಡು ಮತ್ತು ಹಿರಿಯ ಕಲಾವಿದರಾದ ಎಂ. ಚಂದ್ರಕಾಂತ ಇವರಿಗೆ ರಂಗ ಗೌರವ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಚಯ ತಂಡದಿಂದ ರಂಗಗೀತೆಗಳು, ರಂಗ ಪ್ರದರ್ಶನ ಕಲಾ ಕೇಂದ್ರ ಅಭಿನಯದ ಕುವೆಂಪು ರಚನೆಯ ‘ಜಲಗಾರ’ ನಾಟಕ ದೃಶ್ಯಾವಳಿ ಮತ್ತು ಡಾ. ಹೆಚ್.ಎಸ್. ಶಿವಪ್ರಕಾಶ್ ರಚನೆಯ ‘ಸಮಗಾರ ಭೀಮವ್ವ’ ಕಾವ್ಯ ವಾಚನ ಮಂಜನಾಥ್ ಕಗ್ಗೆರೆ ಇವರಿಂದ ಪ್ರಸ್ತುತಗೊಳ್ಳಲಿದೆ.