ಬೆಂಗಳೂರು : ಆಲಾಫ್ ಸಂಗೀತ ಸಭಾ ಇದರ ವತಿಯಿಂದ ಬೈಠಕ್ ಸಂಗೀತ ಕಛೇರಿಯನ್ನು ದಿನಾಂಕ 22 ಜೂನ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂಗೀತ ಕಛೇರಿಯಲ್ಲಿ ಅರ್ಜುನ್ ಆನಂದ್ ಇವರ ಸಿತಾರ್ ವಾದನ, ಸುದೀಪ್ತೋ ಚಕ್ರಬೋರ್ತಿ ಮತ್ತು ಮಾಹಿ ಜವೇರಿ ಇವರ ಹಾಡುಗಾರಿಕೆಗೆ ರೂಪಕ್ ಕಲ್ಲೂರ್ಕರ್, ಆದಿತ್ಯ ಸಿಂಗ್, ಕೌಶಿಕ್ ಭಟ್ ತಬಲಾದಲ್ಲಿ ಹಾಗೂ ಮಧುಸೂದನ್ ಭಟ್ ಮತ್ತು ಗೌರವ್ ಗಡಿಯಾರ್ ಇವರು ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.