ಬೆಂಗಳೂರು : ಆಜೀವಿಕ ಅರ್ಪಿಸುವ ರಂಗ ನಟನಾ ಶಿಬಿರ ಮತ್ತು ಸಂಸ್ಕೃತಿ ನೆಲೆಯ ಕಾರ್ಯಾಗಾರವನ್ನು ದಿನಾಂಕ 01 ಜುಲೈ 2025ರಿಂದ 17 ಜುಲೈ 2025ರವರೆಗೆ ಬೆಂಗಳೂರಿನ ಪ್ರಶಾಂತ ನಗರದಲ್ಲಿರುವ ಆಜೀವಿಕದಲ್ಲಿ ಹಮ್ಮಿಕೊಳ್ಳಲಾಗಿದೆ.
ನಟ ನಿರ್ದೇಶಕ ರಂಗ ಶಿಕ್ಷಕ ಹಾಗೂ ಸಂಶೋಧಕರಾದ ಡಾ. ಉದಯ್ ಸೋಸಲೆ ಇವರು 10 ದಿನಗಳ ರಂಗ ನಟನಾ ಶಿಬಿರವನ್ನು ಹಾಗೂ ಪ್ರಖ್ಯಾತ ನಾಟಕಕಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಸಿನಿಮಾ ಸಂಭಾಷಣಾಕಾರ ಹಾಗೂ ಸಂಸ್ಕೃತಿ ಚಿಂತಕರಾದ ಲಕ್ಷ್ಮೀಪತಿ ಕೋಲಾರ ಇವರು 3 ದಿನಗಳ ಸಂಸ್ಕೃತಿ ನೆಲೆಯ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಾಗಾರವು ನಮ್ಮ ಮುಂದಿನ ನಾಟಕ ಪ್ರಕ್ರಿಯೆಗೆ ಪೂರಕವಾಗಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 9901290575 ಮತ್ತು 7353712715 ಸಂಖ್ಯೆಯನ್ನು ಸಂಪರ್ಕಿಸಿರಿ.