Subscribe to Updates

    Get the latest creative news from FooBar about art, design and business.

    What's Hot

    ಹಿಮಾಂಗಿ ಡಿ. ಉಳ್ಳಾಲ ಇವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

    January 10, 2026

    ಏಳು ಮಂದಿ ಸಾಧಕರಿಗೆ ಹಾಗೂ ಒಂದು ಸಂಸ್ಥೆಗೆ ‘ಸಂದೇಶ ಪ್ರಶಸ್ತಿ’ ಪ್ರಕಟ

    January 10, 2026

    ಕುಂಜತ್ತೂರಿನ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ಕಲಾಕುಂಚದ ವಾರ್ಷಿಕೋತ್ಸವ

    January 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home »  ಲೋಕಾರ್ಪಣೆಗೊಂಡ ‘ತತ್ತ್ವಭಾಗವತಮ್’ ನಾಲ್ಕು ಕೃತಿಗಳು
    Book Release

     ಲೋಕಾರ್ಪಣೆಗೊಂಡ ‘ತತ್ತ್ವಭಾಗವತಮ್’ ನಾಲ್ಕು ಕೃತಿಗಳು

    June 23, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜೀ ಅವರ ತತ್ತ್ವಭಾಗವತಮ್ ಪ್ರವಚನಗಳನ್ನಾಧರಿಸಿದ ತತ್ತ್ವ ಭಾಗವತಮ್, ನಲ ದಮಯಂತಿ, ಕಲಿ ಸಂತರಣ ಹಾಗೂ ಅವತಾರಕಥಾ ಪುಸ್ತಕಗಳ ಲೋಕರ್ಪಣಾ ಸಮಾರಂಭವು ದಿನಾಂಕ 22 ಜೂನ್ 2025 ರಂದು ಬೆಂಗಳೂರಿನ ಶ್ರೀ ರಾಮಚಂದ್ರಾಪುರ ಮಠದ ಗಿರಿನಗರ ಶಾಖೆಯಲ್ಲಿ ನಡೆಯಿತು.

    ಸಮಾರಂಭದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮಿಜೀ ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಿದರು. ಈ ವೇಳೆ ಪುಸ್ತಕಗಳ ಸಂಪಾದಕರಾದ ಡಾ. ಪಾದೇಕಲ್ಲು ವಿಷ್ಣು ಭಟ್, ಅನೂರಾಧಾ ಪಾರ್ವತಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ. ಎಲ್., ಶ್ರೀ ಭಾರತೀ ಪ್ರಕಾಶನದ ಅಧ್ಯಕ್ಷರಾದ ಸಚಿನ್ ಎಲ್.ಎಸ್., ಹಿರಿಯ ಉಪಾಧ್ಯಕ್ಷರಾದ  ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಧರ್ಮಭಾರತೀ ಸಂಪಾದಕರಾದ ಗಣೇಶ್ ಕೃಷ್ಣ ಹೆಗಡೆ ಉಪಸ್ಥಿತರಿದ್ದರು. ಶ್ರೀ ಮದ್ಭಾಗವತದ ಕುರಿತಾದ ಪುಸ್ತಕಗಳನ್ನು ಭಾರತೀ ಪ್ರಕಾಶನದಿಂದ ಪ್ರಕಟ ಮಾಡಿದ್ದು, ಭಾರವಿ, ಮಲ್ಲಿನಾಥ ಸೂರಿ, ವಾಚಸ್ಪತಿ ಮಿಶ್ರ, ಪಾಣಿನಿ, ಮೀರ ಇವರ ಅದ್ಭುತ ಕಥೆಗಳು ‘ಪಿಬತ ಭಾಗವತಮ್’ ಪುಸ್ತಕದಲ್ಲಿದೆ. ಜತೆಗೆ ಹಲವು ಮಹನೀಯರ ಚರಿತ್ರೆಯ ಮೂಲಕ ಲೋಕೋಪಕಾರಿ ಸಾಧನೆ, ಮೋಕ್ಷ ಸಾಧನೆ ಮಾಡಬಹುದೆಂದು ಹೇಳಲಾಗಿದೆ. ಪಂಚಪಾಂಡವರ ನಿರ್ಯಾಣದ ಕಥನ, ಕಲಿಯ ಪ್ರವೇಶ, ಪರೀಕ್ಷಿತಮೋಕ್ಷ ಇವೆಲ್ಲದರ ಚಿತ್ರಣ ಕಲಿಸಂತರಣ, ರಾಮ ಸೀತೆಯರಿಗೆ ಆದರ್ಶವಾದ ನಲ ದಮಯಂತಿಯರ ಅದ್ಭುತ ಕಥನ ‘ನಲ ದಮಯಂತಿ’ ಪುಸ್ತಕದಲ್ಲಿದೆ. ಮತ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ ಇವರ ಕಥಾನಕ ‘ಅವತಾರಕಥಾ’ ಪುಸ್ತಕದಲ್ಲಿದೆ.

    ಪುಸ್ತಕಗಳಿಗಾಗಿ ದೂರವಾಣಿ ಸಂಖ್ಯೆ 9591542454 ಸಂಪರ್ಕಿಸಬಹುದಾಗಿದೆ.

    baikady Book release roovari
    Share. Facebook Twitter Pinterest LinkedIn Tumblr WhatsApp Email
    Previous Articleದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಕನ್ನಡ ಸಾಹಿತ್ಯ ಅಭಿಯಾನ
    Next Article ಖ್ಯಾತ ಲೇಖಕಿ ಕುಸುಮಾ ಶಾನಭಾಗ ನಿಧನ
    roovari

    Add Comment Cancel Reply


    Related Posts

    ಹಿಮಾಂಗಿ ಡಿ. ಉಳ್ಳಾಲ ಇವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ

    January 10, 2026

    ಏಳು ಮಂದಿ ಸಾಧಕರಿಗೆ ಹಾಗೂ ಒಂದು ಸಂಸ್ಥೆಗೆ ‘ಸಂದೇಶ ಪ್ರಶಸ್ತಿ’ ಪ್ರಕಟ

    January 10, 2026

    ಕುಂಜತ್ತೂರಿನ ಶ್ರೀ ಮಾತಾ ಕಲಾಲಯ ಸಭಾಂಗಣದಲ್ಲಿ ಕಲಾಕುಂಚದ ವಾರ್ಷಿಕೋತ್ಸವ

    January 10, 2026

    ಕಾರಂತ ಥೀಮ್ ಪಾರ್ಕ್‌ನಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ | ಕೊನೆಯ ದಿನಾಂಕ ಜನವರಿ 20

    January 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.