Subscribe to Updates

    Get the latest creative news from FooBar about art, design and business.

    What's Hot

    ಹಿರಿಯ ಸಾಹಿತಿ ಪ್ರಭಾ ಮಟಮಾರಿ ನಿಧನ

    June 24, 2025

    ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ‘ಕನ್ನಡ ಕಾರ್ಯಕರ್ತರಿಗೆ ಸಾಹಿತ್ಯ ಶಿಬಿರ’ | ಜೂನ್ 27, 28 ಮತ್ತು 29

    June 24, 2025

    ಬೆಂಗಳೂರಿನ ಅನೂರ್ ಸಭಾಂಗಣದಲ್ಲಿ ‘ಯುವ ಸಂಗೀತೋತ್ಸವ’ | ಜೂನ್ 29

    June 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಬನ್ನಂಜೆ 90 – ಉಡುಪಿ ನಮನ’ ಕಾರ್ಯಕ್ರಮದ ಪೂರ್ವಭಾವಿ ಸಭೆ
    Literature

    ‘ಬನ್ನಂಜೆ 90 – ಉಡುಪಿ ನಮನ’ ಕಾರ್ಯಕ್ರಮದ ಪೂರ್ವಭಾವಿ ಸಭೆ

    June 23, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : 03 ಆಗಸ್ಟ್ 2025ರಂದು ಎಂ.ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ‘ಬನ್ನಂಜೆ 90’ರ ನಮನ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆ ದಿನಾಂಕ 18 ಜೂನ್ 2025ರ ಬುಧವಾರದಂದು ಉಡುಪಿಯ ರಾಜಾಂಗಣ ಬಳಿಯ ಮಥುರಾ ಕಂಫರ್ಟ್‌ನಲ್ಲಿ ನಡೆಯಿತು.
    ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರ ಬನ್ನಂಜೆ ಬದುಕು, ಸಾಧನೆಯ ಸ್ಮರಣೆಗಾಗಿ ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ ರಾಜ್ಯದ 24 ಕಡೆಗಳಲ್ಲಿ ನಡೆಯಲಿದೆ ಎಂದು ಸಾಂಸ್ಕೃತಿಕ ಚಿಂತಕಿ ವೀಣಾ ಬನ್ನಂಜೆ ತಿಳಿಸಿದರು .
    ‘ಬನ್ನಂಜೆ 90ರ ನಮನ ಸಮಿತಿ ಕಾರ್ಯಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ “ಬನ್ನಂಜೆ ಗೋವಿಂದಾಚಾರ್ಯರಂತಹ ವ್ಯಕ್ತಿಗಳು ಬದುಕಿನಲ್ಲಿ ಮಾಡಿದ ಶ್ರೇಷ್ಠ ಸಾಧನೆ ಸತ್ತ ನಂತರವೂ ಸ್ಮರಣೀಯ” ಎಂದರು.
    ಸಭೆಯಲ್ಲಿ ನಡೆದಂತೆ ಬನ್ನಂಜೆಯವರ ಮೂಲಮನೆ ಕುಂಜಿಗುಡ್ಡೆಯಿಂದ ಕರಾವಳಿ ಜಂಕ್ಷನ್ ತನಕ ಮೆರವಣಿಗೆ ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ ಘಂಟೆ 10.00ಕ್ಕೆ ಕಾರ್ಯಕ್ರಮ ಉದ್ಘಾಟನೆ, ಬನ್ನಂಜೆ ರಚಿತ ಹಾಡುಗಳ ಗಾಯನ, ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದರಿಂದ ‘ಬನ್ನಂಜೆ 90 ಉಡುಪಿ ನಮನ’ ಕಾರ್ಯಕ್ರಮ ಉದ್ಘಾಟನೆ ಹಾಗೂ ಸಮಾರೋಪದಲ್ಲಿ ಗಂಗಾವತಿ ಪ್ರಾಣೇಶ್, ಲೇಖಕಿ ವೈದೇಹಿ ಮೊದಲಾದ ಗಣ್ಯರು ಉಪಸ್ಥಿತರಿರುವರು.
    ಬನ್ನಂಜೆ ಬದುಕಿನ ಎರಡು ಗೋಷ್ಠಿ, ಕೃತಿ ಮತ್ತು ಸ್ಮರಣಿಕೆಗಳ ಪ್ರದರ್ಶನ. ಸಮಾರೋಪದ ಬಳಿಕ ವಿದ್ಯಾಭೂಷಣರಿಂದ ಬನ್ನಂಜೆ ರಚಿತ ಕೃತಿಗಳ ಸುಮಧುರ ಗಾಯನ ಮತ್ತು 90ರ ಸ್ಮರಣೆಗಾಗಿ 90 ಗಿಡ ನೆಟ್ಟು ‘ಗೋವಿಂದ ವನ’ ನಿಮ್ಮಾಣಕ್ಕೆ ಚಾಲನೆ ದೊರೆಯಲಿದೆ.
    ಸಭೆಯಲ್ಲಿ ಉದ್ಯಮಿ ಯು. ವಿಶ್ವನಾಥ ಶೆಣೈ, ಡಾ. ಮಾಧವಿ ಭಂಡಾರಿ, ನಾರಾಯಣ ಮಡಿ ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ರವಿರಾಜ್ ಎಚ್. ಪಿ. ಸ್ವಾಗತಿಸಿ, ಅಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನಾರ್ದನ್ ಕೊಡವೂರು ನಿರೂಪಿಸಿ, ಪ್ರೊ. ಸದಾಶಿವ ರಾವ್ ವಂದಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಲೋಕಾರ್ಪಣೆಗೊಂಡ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನ
    Next Article ಮಂಗಳೂರಿನ ಅಮೃತ ಕಾಲೇಜಿನಲ್ಲಿ ತುಳು ನಾಟಕ ಕಾರ್ಯಾಗಾರ | ಜೂನ್ 24
    roovari

    Add Comment Cancel Reply


    Related Posts

    ಹಿರಿಯ ಸಾಹಿತಿ ಪ್ರಭಾ ಮಟಮಾರಿ ನಿಧನ

    June 24, 2025

    ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ ‘ಕನ್ನಡ ಕಾರ್ಯಕರ್ತರಿಗೆ ಸಾಹಿತ್ಯ ಶಿಬಿರ’ | ಜೂನ್ 27, 28 ಮತ್ತು 29

    June 24, 2025

    ಬೆಂಗಳೂರಿನ ಅನೂರ್ ಸಭಾಂಗಣದಲ್ಲಿ ‘ಯುವ ಸಂಗೀತೋತ್ಸವ’ | ಜೂನ್ 29

    June 24, 2025

    ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಸಂಗೀತ ದಿನಾಚರಣೆ

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.