ಬೆಂಗಳೂರು : ಯಕ್ಷಕಲಾ ಅಕಾಡೆಮಿ (ರಿ.) ಬೆಂಗಳೂರು ಇದರ ವತಿಯಿಂದ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಪಾಂಡೇಶ್ವರ ವೆಂಕಟಪ್ಪ ವಿರಚಿತ ‘ಕರ್ಣಪರ್ವ’ ಎಂಬ ಪ್ರಸಂಗದ ತಾಳಮದ್ದಳೆ ಪ್ರದರ್ಶನವನ್ನು ದಿನಾಂಕ 29 ಜೂನ್ 2025ರಂದು ಮಧ್ಯಾಹ್ನ 4-30 ಗಂಟೆಗೆ ಬೆಂಗಳೂರಿನ ನಾಗರಭಾವಿಯಲ್ಲಿರುವ ಯಕ್ಷಕಲಾ ಅಕಾಡೆಮಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಚಿತ್ಕಲಾ ಕೆ. ತುಂಗ ಮತ್ತು ಚಿನ್ಮಯ ಹೆಗಡೆ ಹಾಗೂ ಮುಮ್ಮೇಳದಲ್ಲಿ ಶಶಾಂಕ ಅರ್ನಾಡಿ, ಅಂಬರೀಷ ಭಟ್, ವಿದ್ವಾನ್ ಪ್ರಸನ್ನ ಭಟ್, ರವಿ ಮಡೋಡಿ ಮತ್ತು ಮಿತ್ರ ಮಧ್ಯಸ್ಥ ಇವರುಗಳು ಸಹಕರಿಸಲಿದ್ದಾರೆ.