ಮಂಗಳೂರು : ಅಂಬುರುಹ ಯಕ್ಷ ಕಲಾ ಕೇಂದ್ರ (ರಿ.) ಮಾಲೆಮಾರ್ ಇದರ ‘ಸಪ್ತಮ ಸಂಭ್ರಮ’ ಸಮಾರಂಭವನ್ನು ದಿನಾಂಕ 28 ಮತ್ತು 29 ಜೂನ್ 2025ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 28 ಜೂನ್ 2025ರಂದು ಅಂಬುರುಹ ಕುಣಿತ ಭಜನಾ ತಂಡದವರಿಂದ ‘ಕುಣಿತ ಭಜನೆ’ ಹಾಗೂ ವಿವಿಧ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಅಂಬುರುಹ ಕಲಾವಿದರು ಕುಡ್ಲ ಇವರು ಅಭಿನಯಿಸುವ ಕುಮಾರ್ ಮಾಲೆಮಾರ್ ಇವರ ನಿರ್ದೇಶನದಲ್ಲಿ ‘ಶ್ರೀ ಶಿರಡಿ ಸಾಯಿಬಾಬ’ ಎಂಬ ಐತಿಹಾಸಿಕ ತುಳು ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 29 ಜೂನ್ 2025ರಂದು ಅಂಬುರುಹ ಯಕ್ಷ ಕಲಾ ಕೇಂದ್ರದ ಪುಟಾಣಿ ಮಕ್ಕಳಿಂದ ‘ಅಮರ್ ಬೊಳ್ಳಿಲು’ ತುಳು ಯಕ್ಷಗಾನ, ಸಭಾ ಕಾರ್ಯಕ್ರಮದಲ್ಲಿ ‘ಅಂಬುರುಹ ಪ್ರಶಸ್ತಿ’ ಪ್ರದಾನ ಹಾಗೂ ಸಂಜೀವ ಕಜೆಪದವು ಇವರ ನಿರ್ದೇಶನದಲ್ಲಿ ‘ಮಹಿಮೆದ ಅಪ್ಪೆ ಮಂತ್ರದೇವತೆ’ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.