Subscribe to Updates

    Get the latest creative news from FooBar about art, design and business.

    What's Hot

    ತೆಕ್ಕಟ್ಟೆಯಲ್ಲಿ ಯಕ್ಷ-ಗಾನ-ನಮನ

    June 27, 2025

    ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ ಜಂಟಿ ಹೆಸರಿನ ಪ್ರಶಸ್ತಿಗೆ ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಆಯ್ಕೆ

    June 27, 2025

    ಧಾರವಾಡದ ರಂಗಾಯಣದಲ್ಲಿ ಯಶಸ್ವಿಯಾಗಿ ನಡೆದ ‘ಗುರು ಗುಣಗಾನ’

    June 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೀನಾಸಂ ರಂಗ ಶಿಕ್ಷಣಕ್ಕೆ ಹಾರಂಬಿ ಯತಿನ್ ಆಯ್ಕೆ
    Drama

    ನೀನಾಸಂ ರಂಗ ಶಿಕ್ಷಣಕ್ಕೆ ಹಾರಂಬಿ ಯತಿನ್ ಆಯ್ಕೆ

    June 27, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೊಡಗು : ನೀನಾಸಂ ರಂಗ ಶಿಕ್ಷಣ ಕೇಂದ್ರ ಹೆಗ್ಗೋಡು ಇಲ್ಲಿನ ರಂಗ ಪದವಿ ಪಡೆಯಲು ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಹಾರಂಬಿ ಯತಿನ್ ವೆಂಕಪ್ಪ ಆಯ್ಕೆಯಾಗಿದ್ದಾರೆ. ಸುಳ್ಯದ ರಂಗಮನೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ನಡೆಸಿದ ಅರೆಭಾಷೆ ರಂಗ ಶಿಬಿರದಲ್ಲಿ ಭಾಗವಹಿಸಿದ ಯತಿನ್ ರಂಗ ಮಾಂತ್ರಿಕ ಡಾ. ಜೀವನ್ ರಾಂ ಸುಳ್ಯರ ಗರಡಿಯಲ್ಲಿ ಪಳಗಿದವರು. ಪ್ರಪ್ರಥಮವಾಗಿ ‘ಸಾಹೇಬ್ರು ಬಂದವೇ’ ಅರೆಭಾಷೆ ನಾಟಕದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದವರು. ತನ್ನ ಮೊದಲ ನಾಟಕದಲ್ಲೇ ರಾಜ್ಯದ ರಂಗಾಸಕ್ತರ ಪ್ರಶಂಸೆಗೆ ಪಾತ್ರವಾದ ಯತಿನ್ ನಂತರದಲ್ಲಿ ಆಳ್ವಾಸ್ ರಂಗ ತಂಡದ ‘ದೂತವಾಕ್ಯ’ ನಾಟಕದ ದುರ್ಯೋಧನನಾಗಿ, ಕಾರ್ಕಳ ಯಕ್ಷ ರಂಗಾಯಣದ ‘ಪರುಶುರಾಮ’ ನಾಟಕದ ಪರಶುರಾಮನಾಗಿ ಮತ್ತು ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ’ದ ಕಲ್ಯಾಣಸ್ವಾಮಿಯಾಗಿ, ಆಳ್ವಾಸ್ ನ ‘ನಾಯಿಮರಿ’ ನಾಟಕದ ಅಜ್ಜನಾಗಿ, ನೀನಾಸಂ ರಂಗ ಶಿಬಿರದಲ್ಲಿ ಸಿದ್ಧವಾದ ‘ಆಷಾಡದ ಒಂದು ದಿನ’ ನಾಟಕದ ಕಾಳಿದಾಸನಾಗಿ ಮಿಂಚಿದವರು. ಒಂದಷ್ಟು ಕಿರುಚಿತ್ರಗಳಲ್ಲೂ ಅಭಿನಯಿಸಿದ ಯತಿನ್ ಭರತನಾಟ್ಯವನ್ನೂ ಅಭ್ಯಸಿಸಿದ್ದಾರೆ. ರಂಗಮನೆ ಮತ್ತು ಆಳ್ವಾಸ್ ನ ಅಭಿನಯ ಪ್ರಧಾನ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಕುದ್ರೋಳಿ ಗಣೇಶ್ ರ ವಿಸ್ಮಯ ಜಾದೂ ತಂಡದಲ್ಲೂ ಕಲಾವಿದರಾಗಿ ಭಾಗವಹಿಸಿದ್ದಾರೆ. ಕಾನೂನು ಪದವೀಧರನಾಗಿರುವ ಯತಿನ್ ಕೃಷಿಕರಾದ ಹಾರಂಬಿ ಅರುಣೋದಯ ಕುಮಾರ್ ಹಾಗೂ ರೇಖಾ ಹಾರಂಬಿ ಇವರ ಪುತ್ರರಾಗಿದ್ದಾರೆ.

    ಅರೆಭಾಷೆ ಶಿಬಿರದ ಮೂವರಿಗೆ ನೀನಾಸಂ ರಂಗ ಶಿಕ್ಷಣ : ನೀನಾಸಂ ಸಂದರ್ಶನದಲ್ಲಿ ಆಯ್ಕೆ ಆಗುವುದು ಅಷ್ಟು ಸುಲಭವಲ್ಲ. ನೂರಕ್ಕಿಂತ ಹೆಚ್ಚು ಜನ ಆಕಾಂಕ್ಷಿಗಳು ಸಂದರ್ಶನದಲ್ಲಿ ಭಾಗವಹಿಸ್ತಾರೆ. ಆಯ್ಕೆ ಪ್ರಕ್ರಿಯೆ ತುಂಬ ಪಾರದರ್ಶಕವಾಗಿರುತ್ತದೆ. ಕೇವಲ ಹದಿನಾರು ಜನರನ್ನು ಆಯ್ಕೆ ಮಾಡಲಾಗುವುದು. ಲಕ್ಷ್ಮೀನಾರಾಯಣ ಕಜೆಗದ್ದೆಯವರು ಕರ್ನಾಟಕ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ರಂಗಮನೆಯಲ್ಲಿ ಹಮ್ಮಿಕೊಂಡ ಅರೆಭಾಷೆ ರಂಗ ಶಿಬಿರದಲ್ಲಿ ಭಾಗವಹಿಸಿದ ಮಮತಾ ಕಲ್ಮಕಾರು ಹಾಗೂ ಸುಶ್ಮಿತಾ ಮೋಹನ್ ಇಬ್ಬರೂ ಈಗಾಗಲೇ ನೀನಾಸಂ ರಂಗ ಪದವಿಯನ್ನು ಪಡೆದಿದ್ದು, ಈ ವರ್ಷ ಪ್ರತಿಭಾವಂತ ಕಲಾವಿದ ಯತಿನ್ ಆಯ್ಕೆ ಆಗಿದ್ದಾರೆ. ಅರೆಭಾಷೆ ಶಿಬಿರದ ಒಟ್ಟು ಮೂರು ಜನರು ರಂಗ ಶಿಕ್ಷಣವನ್ನು ಪಡೆದಂತಾಗುತ್ತದೆ. ಮೂವರೂ ನನ್ನ ಅಚ್ಚುಮೆಚ್ಚಿನ ಶಿಷ್ಯರು ಅನ್ನಲು ತುಂಬಾ ಸಂತೋಷವಾಗಿದೆ.
    – ಡಾ. ಜೀವನ್ ರಾಂ ಸುಳ್ಯ

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleನಲ್ಲೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ಶಿಕ್ಷಣ ಅಭಿಯಾನ ಉದ್ಘಾಟನೆ
    Next Article ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ‘ವೊವಿಯೊ – ವೇರ್ಸ್’ ಕಾರ್ಯಾಗಾರ | ಜೂನ್ 29
    roovari

    Add Comment Cancel Reply


    Related Posts

    ತೆಕ್ಕಟ್ಟೆಯಲ್ಲಿ ಯಕ್ಷ-ಗಾನ-ನಮನ

    June 27, 2025

    ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ ಜಂಟಿ ಹೆಸರಿನ ಪ್ರಶಸ್ತಿಗೆ ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಆಯ್ಕೆ

    June 27, 2025

    ಧಾರವಾಡದ ರಂಗಾಯಣದಲ್ಲಿ ಯಶಸ್ವಿಯಾಗಿ ನಡೆದ ‘ಗುರು ಗುಣಗಾನ’

    June 27, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನ | ಜೂನ್ 29 

    June 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.