ಮೈಸೂರು : ಡಿ.ವಿ.ಜಿ. ಬಳಗ ಪ್ರತಿಷ್ಠಾನ (ನೋಂ) ಇದರ ವತಿಯಿಂದ ಆಯೋಜಿಸಿದ ‘ಡಿ. ವಿ. ಜಿ. ಪ್ರಶಸ್ತಿ – 2025’ ಪ್ರದಾನ ಸಮಾರಂಭವು ದಿನಾಂಕ 22 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರಿನ ಕುವೆಂಪು ನಗರದ ರಮಾ ಗೋವಿಂದ ಕಲಾವೇದಿಕೆಯಲ್ಲಿ ನಡೆಯಿತು.
ಖ್ಯಾತ ವಾಗ್ಮಿಗಳಾದ ಶಿವಮೊಗ್ಗದ ವಿದ್ವಾನ್ ಜಿ. ಎಸ್. ನಟೇಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಶ್ರೀ ಟಿ. ಎನ್. ಶಿವಕುಮಾರ್ (ತ. ನಾ. ಶಿ.) ಇವರಿಗೆ ಈ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ತ. ನಾ. ಶಿ. ಯವರ ವಚನಗಳ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಸಮಾರಂಭದಲ್ಲಿ ಶ್ರೀಹರ್ಷ ಇವರು ತ. ನಾ. ಶಿ. ಯವರ ಕಾವ್ಯಗಳ, ಕಗ್ಗಗಳ ಬಗ್ಗೆ ಮಾತಾಡಿದರು. ತುಮಾಕೂರಿನ ಪುಟಾಣಿಯರಾದ ಆರ್ಯ ಮತ್ತು ಗಾರ್ಗಿಯವರ ಕಗ್ಗದ ವ್ಯಾಖ್ಯಾನ ಉತ್ತಮವಾಗಿ ಮೂಡಿಬಂದಿತ್ತು. ಕಾರ್ಯಕ್ರಮದಲ್ಲಿ ಶ್ರೀಹರ್ಷ ಪ್ರಾರ್ಥಿಸಿ, ಕನಕರಾಜು ಸ್ವಾಗತಿಸಿ, ಸಮುದ್ಯತಾ ಹಾಗೂ ತೇಜಸ್ ನಿರೂಪಿಸಿದರು. ಸಮಾರಂಭದ ಅಂತ್ಯದಲ್ಲಿ ನಟೇಶ್ ಇವರಿಂದ ‘ಕಗ್ಗ ಮಾತು’ ಕಾರ್ಯಕ್ರಮ ನಡೆಯಿತು.