Subscribe to Updates

    Get the latest creative news from FooBar about art, design and business.

    What's Hot

    ಕುಳಾಯಿ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ

    July 3, 2025

    ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮದ ಸರ್ವಾಧ್ಯಕ್ಷರಾಗಿ ಡಾ. ಸುಷ್ಮಾ ಶಂಕರ್ ಬೆಂಗಳೂರು ಆಯ್ಕೆ

    July 3, 2025

    ಗಡಿ ನಾಡು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಾಹಿತಿಗಳು ಹಾಗೂ ರಂಗ ನಿರ್ದೇಶಕರಾದ ಡಾ.ಇಂಚರ ನಾರಾಯಣ ಸ್ವಾಮಿಯವರು ಆಯ್ಕೆ

    July 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶಶಿಕಲಾ ಬಾಯಾರು ಇವರಿಗೆ ಗಡಿನಾಡ ಕಸಾಪ ಘಟಕದಿಂದ ಅಭಿನಂದನೆ
    Felicitation

    ಶಶಿಕಲಾ ಬಾಯಾರು ಇವರಿಗೆ ಗಡಿನಾಡ ಕಸಾಪ ಘಟಕದಿಂದ ಅಭಿನಂದನೆ

    July 2, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಜೇಶ್ವರ : ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಪರಿಷತ್‌ ನಡಿಗೆ ಹಿರಿಯ ಸಾಧಕರ ಕಡೆಗೆ ಎಂಬ ಕಾರ್ಯಕ್ರಮದ ಅಂಗವಾಗಿ ಕಸೂತಿ ಮತ್ತು ಕರಕುಶಲ ತಜ್ಞೆ, ಸಾಹಿತಿ, ಅಂಕಣಗಾರ್ತಿ ಶಶಿಕಲಾ ಬಾಯಾರು ಅವರನ್ನು ಬಾಯಾರು ಸಮೀಪದ ಸಜಂಕಿಲದಲ್ಲಿರುವ ಅವರ ನಿವಾಸವಾದ ಸ್ವಸ್ತಿಕದಲ್ಲಿ ದಿನಾಂಕ 27 ಜೂನ್ 2025ರಂದು ಅಭಿನಂದಿಸಲಾಯಿತು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಇದರ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಶಶಿಕಲಾ ಬಾಯಾರು ಇವರನ್ನು ಅಭಿನಂದಿಸಿದರು. ಅಭಿನಂದನಾ ಭಾಷಣ ಮಾಡಿದ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷರಾದ ಪ್ರೊ. ಪಿ. ಎನ್‌. ಮೂಡಿತ್ತಾಯ ಮಾತನಾಡಿ “ವಿದ್ವಾನ್ ಪೆರ್ಲ ಕೃಷ್ಣ ಭಟ್ ಇವರ ಪುತ್ರಿಯಾಗಿರುವ ಶಶಿಕಲಾ ಬಾಯಾರು ಕಾಸರಗೋಡಿನ ಹೆಮ್ಮೆಯ ಕಸೂತಿ ಚಿತ್ರಕಲಾವಿದೆ. ಅವರ ವ್ಯಕ್ತಿಚಿತ್ರಗಳು ಅಪೂರ್ವವಾದವುಗಳು. ಅವರ ಪತ್ರಾರ್ಜಿತ ಎಂಬ ಕೃತಿ, ಅಂಕಣ ಪತ್ರಗಳು, ಕಥೆಗಳು ವೈಶಿಷ್ಟ್ಯ ಪೂರ್ಣವಾದವುಗಳು. ಎಲೆಮರೆಯಕಾಯಂತಿರುವ ಶಶಿಕಲಾರ ಕಸೂತಿಚಿತ್ರಗಳು ನಾಡಿನಾದ್ಯಂತ ಪ್ರದರ್ಶನಗೊಳ್ಳಬೇಕಾಗಿವೆ” ಎಂದರು.
    ಕವಯತ್ರಿ ಸಂಧ್ಯಾಗೀತಾ ಬಾಯಾರು ಮತ್ತು ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್ ಮೀಯಪದವು ಅವರು ಶಶಿಕಲಾ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯದ ಕುರಿತು ಮಾತನಾಡಿದರು. ಶಿಕ್ಷಕ ಪ್ರಭಾಕರ, ಶಿಕ್ಷಕಿ ನಿವೇದಿತಾ, ಕೊಳಲು ತಜ್ಞ ಕೃಷ್ಣರಾಜ, ಚಿನ್ಮಯ ಕೃಷ್ಣ, ಆಶಯ, ಸ್ಮಿತಾ ಮುಂತಾದವರು ಉಪಸ್ಥಿತರಿದ್ದರು. ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ರವಿಲೋಚನ ಸಿ .ಎಚ್. ಧನ್ಯವಾದವಿತ್ತರು.

    baikady felicitation kannada roovari
    Share. Facebook Twitter Pinterest LinkedIn Tumblr WhatsApp Email
    Previous Article‘ಕಂಬತ್ತಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ – 2025’ ಪ್ರಶಸ್ತಿ ಪ್ರದಾನ ಸಮಾರಂಭ | ಜುಲೈ 06
    Next Article ಮುದ್ದಣ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಸೆಪ್ಟೆಂಬರ್ 15
    roovari

    Add Comment Cancel Reply


    Related Posts

    ಕುಳಾಯಿ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ

    July 3, 2025

    ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮದ ಸರ್ವಾಧ್ಯಕ್ಷರಾಗಿ ಡಾ. ಸುಷ್ಮಾ ಶಂಕರ್ ಬೆಂಗಳೂರು ಆಯ್ಕೆ

    July 3, 2025

    ಗಡಿ ನಾಡು ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಾಹಿತಿಗಳು ಹಾಗೂ ರಂಗ ನಿರ್ದೇಶಕರಾದ ಡಾ.ಇಂಚರ ನಾರಾಯಣ ಸ್ವಾಮಿಯವರು ಆಯ್ಕೆ

    July 3, 2025

    ಕವನ | ‘ಮುಟ್ಟು ನಿಂತಿತೇ ?’

    July 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.