Subscribe to Updates

    Get the latest creative news from FooBar about art, design and business.

    What's Hot

    ಹೊಯಿಗೆಬಜಾರಿನಲ್ಲಿ ಮಾಧವ ತಿಂಗಳಾಯ ಜನ್ಮ ದಿನದ ನೆನಪು ಕಾರ್ಯಕ್ರಮ

    July 7, 2025

    ಬೆಂಗಳೂರಿನ ರಾಮಕೃಷ್ಣ ಮಠದಲ್ಲಿ ‘ರಾಮಕೃಷ್ಣ ಸಂಗೀತ ಸೌರಭ’ | ಜುಲೈ 11, 12 ಮತ್ತು 13

    July 7, 2025

    ಗೋವಿಂದದಾಸ ಪಿ. ಯು. ಸಿ. ಕಾಲೇಜಿನಲ್ಲಿ ಉದ್ಘಾಟನೆಗೊಂಡ ಸಾಹಿತ್ಯ ಸಂಘ

    July 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕದಲ್ಲಿ ಉಮಾಶ್ರೀಯವರ ಅಭಿನಯ ಅದ್ಭುತ
    Drama

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕದಲ್ಲಿ ಉಮಾಶ್ರೀಯವರ ಅಭಿನಯ ಅದ್ಭುತ

    July 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ರಂಗಸಂಪದ ಇದರ ಆಶ್ರಯದಲ್ಲಿ ಕೋನವಾಳ ಬೀದಿಯ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 05 ಜುಲೈ 2025ರಂದು ಪ್ರದರ್ಶನಗೊಂಡ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಜನಮನಸೂರೆಗೊಂಡಿತು.

    ಚಲನಚಿತ್ರಗಳಲ್ಲಿ ಅಭಿನಯಿಸಿ, ನಾಡಿನ ಜನರ ಮನ ಗೆದ್ದಿರುವ ಉಮಾಶ್ರೀ ನಾಟಕದಲ್ಲಿ ಶರ್ಮಿಷ್ಠೆಯಾಗಿ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡಿದರು. ಮೂಲ ಮರಾಠಿಯ ವಿ.ಸ. ಖಾಂಡೇಕರ ಇವರ ‘ಯಯಾತಿ’ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಂ. ಇನಾಮದಾರ ಅನುವಾದಿಸಿದ್ದಾರೆ. ಇದೇ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ ಕಾರ್ನಾಡ ರಚಿಸಿರುವ ‘ಯಯಾತಿ’ ನಾಟಕದಲ್ಲಿ ಬರುವ ಒಂದು ಪ್ರಮುಖ ಪಾತ್ರವೇ ‘ಶರ್ಮಿಷ್ಠೆ’. ಇವಳು ಒಬ್ಬಳು ರಾಜಕುಮಾರಿಯಾಗಿದ್ದರೂ ದೇವಯಾನಿ ಹತ್ತಿರ ಆಳಾಗಿ ದುಡಿದು ಬದುಕುವ ಪ್ರಸಂಗ ಬಂದಾಗ ಅವಳ ಮನಸ್ಸಿನಲ್ಲಿ ಆಗುವ ತಳಮಳ, ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾ ವಸ್ತು. ಉಮಾಶ್ರೀಯವರು ತಮ್ಮ ಅದ್ಭುತ ಹಾವ, ಭಾವ, ಅಭಿನಯದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಏಕವ್ಯಕ್ತಿಯ ರಂಗ ಪ್ರಯೋಗಗಳು ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ಕರ್ನಾಟಕದ ಉದಯೋನ್ಮುಖ ನಾಟಕಕಾರರಾದ ಬೇಲೂರು ರಘುನಂದನ ಈ ನಾಟಕವನ್ನು ರಚಿಸಿದ್ದು, ಕರ್ನಾಟಕದ ಪ್ರಸಿದ್ಧ ರಂಗ ನಿರ್ದೇಶಕ ಮೈಸೂರು ರಂಗಾಯಣದ ಮಾಜಿ ನಿರ್ದೇಶಕರು, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಚಿದಂಬರರಾವ್ ಜಂಬೆ ನಿರ್ದೇಶಸಿದ್ದಾರೆ. ಈ ನಾಟಕಕ್ಕೆ ಅನುಷ್ ಶೆಟ್ಟಿಯವರ ಸಂಗೀತ, ವಸ್ತ್ರವಿನ್ಯಾಸ, ರಂಗ ಸಜ್ಜಿಕೆ ಮತ್ತು ರಂಗ ಪರಿಕರಗಳ ನಿರ್ವಹಣೆ ಪ್ರಮೋದ ಶಿಗ್ಗಾಂವ ಮಾಡಿದ್ದಾರೆ. ನಾಟಕದ ಬಳಿಕ ಕಲಾವಿದೆ ಉಮಾಶ್ರೀಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.

    ರಂಗಸಂಪದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿ ಮಾತನಾಡಿ, ನಾಟಕ ನೋಡುವ ಪ್ರೇಕ್ಷಕರ ಕೊರತೆಯಿಲ್ಲ. ಒಳ್ಳೆಯ ನಾಟಕಗಳನ್ನು ನೀಡಿದಲ್ಲಿ ಪ್ರೇಕ್ಷಕರು ಖಂಡಿತ ಬರುತ್ತಾರೆ ಎಂಬುದಕ್ಕೆ ರಂಗಮಂದಿರವೇ ಸಾಕ್ಷಿ ಎಂದರು. ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್. ಇಂಚಲ, ಎಲ್.ಎಸ್. ಶಾಸ್ತ್ರಿ, ಜಯಂತ ಜೋಶಿ, ಡಾ. ಸರಜೂ ಕಾಟ್ಕರ್, ರವಿ ಭಜಂತ್ರಿ, ಸುರೇಖಾ ದೇಸಾಯಿ, ಜ್ಯೋತಿ ಬದಾಮಿ, ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ, ಅನಂತ ಪಪ್ಪು, ಪದ್ಮಾ ಕುಲಕರ್ಣಿ, ಯೋಗೇಶ ದೇಶಪಾಂಡೆ, ಚಿದಾನಂದ ವಾಳ್ಯ, ವಿನೋದ ಸಪ್ಪಣ್ಣವರ, ಎ.ಎಂ. ಕುಲಕರ್ಣಿ ಉಪಸ್ಥಿತರಿದ್ದರು.

    baikady drama felicitation roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಡೆಕೋಲು ಶಾಲೆಯಲ್ಲಿ ‘ಯಕ್ಷಧ್ರುವ -ಯಕ್ಷಶಿಕ್ಷಣ’ ಯಕ್ಷಗಾನ ಶಿಕ್ಷಣ ಅಭಿಯಾನಕ್ಕೆ ಚಾಲನೆ
    Next Article ಅಕಾಡೆಮಿ ಸಭಾಂಗಣದಲ್ಲಿ ʼಕಾವ್ಯಾಂ ವ್ಹಾಳೊ-4ʼ ಕೊಂಕಣಿ ಕವಿಗೋಷ್ಟಿ
    roovari

    Add Comment Cancel Reply


    Related Posts

    ಹೊಯಿಗೆಬಜಾರಿನಲ್ಲಿ ಮಾಧವ ತಿಂಗಳಾಯ ಜನ್ಮ ದಿನದ ನೆನಪು ಕಾರ್ಯಕ್ರಮ

    July 7, 2025

    ಬೆಂಗಳೂರಿನ ರಾಮಕೃಷ್ಣ ಮಠದಲ್ಲಿ ‘ರಾಮಕೃಷ್ಣ ಸಂಗೀತ ಸೌರಭ’ | ಜುಲೈ 11, 12 ಮತ್ತು 13

    July 7, 2025

    ಗೋವಿಂದದಾಸ ಪಿ. ಯು. ಸಿ. ಕಾಲೇಜಿನಲ್ಲಿ ಉದ್ಘಾಟನೆಗೊಂಡ ಸಾಹಿತ್ಯ ಸಂಘ

    July 7, 2025

    ಲೇಖನ | ಐತುಮನೆ ತಾಳಮದ್ದಲೆ-ಆಷಾಢ ಏಕಾದಶಿಯ ಆಧ್ಯಾತ್ಮ ಮೇಳ

    July 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.