ಬೆಂಗಳೂರು : ಕ. ವಿ. ಪ್ರ. ನಿ. ನಿ., ಲೆಕ್ಕಾಧಿಕಾರಿಗಳ ಸಂಘ ಬೆಂಗಳೂರು ಆಯೋಜಿಸುವ ‘ಯಕ್ಷ ನೃತ್ಯ -ಸಂವಾದ ಸನ್ಮಾನ’ ಕಾರ್ಯಕ್ರಮವು ದಿನಾಂಕ 12 ಜುಲೈ 2025ರ ಎರಡನೆಯ ಶನಿವಾರ ಬೆಳಗ್ಗೆ ಘಂಟೆ 10.00ರಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ ಕ. ವಿ. ಪ್ರ. ನಿ. ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ನಡೆಯಲಿದೆ.
ಅಂಕಣಕಾರರು ಹಾಗೂ ಲೇಖಕರಾದ ಶ್ರೀ ರಾಜು ಅಡಕಳ್ಳಿ ಮತ್ತು ಯಕ್ಷಗಾನ ಪ್ರಸಂಗಕರ್ತರು ಹಾಗೂ ಕೆ. ಪಿ. ಟಿ. ಸಿ. ಎಲ್ ಇದರ ನಿವೃತ್ತ ಇಂಜಿನಿಯರ್ ಆಗಿರುವ ಶ್ರೀ ಜಿ. ಮೃತ್ಯುಂಜಯ ಇವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಸಾಹಿತ್ಯದ, ವಿ. ಉಮಾಕಾಂತ ಭಟ್ಟ ಕರೇಕೈ ನಿರ್ದೇಶನದಲ್ಲಿ ಕು. ತುಳಸಿ ಹೆಗಡೆ ಪ್ರಸ್ತುತಪಡಿಸುವ ‘ಯಕ್ಷ ನೃತ್ಯ ವಿಶ್ವಾಭಿಗಮನಮ್’ ಯಕ್ಷಗಾನ ನೃತ್ಯ ಪ್ರದರ್ಶನಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಸಾಹಿತಿಗಳು, ಯಕ್ಷಗಾನ ಪ್ರಸಂಗಕರ್ತರು ಹಾಗೂ ಕೆ. ಪಿ. ಟಿ. ಸಿ. ಎಲ್. ಇದರ ನಿವೃತ್ತ ಲೆಕ್ಕಾಧಿಕಾರಿಗಳಾದ ಸನ್ಮಾನ ಶ್ರೀ ದಿನೇಶ ಉಪ್ಪರ ಇವರನ್ನು ಸನ್ಮಾನಿಸಲಾಗುವುದು.

