Subscribe to Updates

    Get the latest creative news from FooBar about art, design and business.

    What's Hot

    ಸುಸಂಪನ್ನಗೊಂಡ ವೀಣಾವಾದಿನಿಯ ವಾರ್ಷಿಕೋತ್ಸವ ‘ವೇದ ನಾದ ಯೋಗ ತರಂಗಿಣಿ’

    January 1, 2026

    ಕವನ | ಅಮ್ಮ ನೆನಪಾಗುತ್ತಾಳೆ

    January 1, 2026

    ಬೆಂಗಳೂರಿನ ವೆಂಕಟಗಿರಿ ಸಭಾಂಗಣದಲ್ಲಿ ‘ಪಂಚಮ ಪದ’ ನಾಟಕ ಪ್ರದರ್ಶನ | ಜನವರಿ 02 

    January 1, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷ ಮೇನಕಾ ಮೂಡುಬಿದಿರೆ ಇದರ 17ನೇ ವರ್ಷದ ಕಾರ್ಯಕ್ರಮ
    Felicitation

    ಯಕ್ಷ ಮೇನಕಾ ಮೂಡುಬಿದಿರೆ ಇದರ 17ನೇ ವರ್ಷದ ಕಾರ್ಯಕ್ರಮ

    July 10, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ: ಯಕ್ಷ ಮೇನಕಾ ಮೂಡುಬಿದಿರೆ ಇದರ 17ನೇ ವರ್ಷದ ಕಾರ್ಯಕ್ರಮದಂಗವಾಗಿ ಭಾಗವತ ಪ್ರಫುಲ್ಲಚಂದ್ರ ನೆಲ್ಯಾಡಿ ಇವರಿಗೆ ಸನ್ಮಾನ ಹಾಗೂ ಹಾಸ್ಯಗಾರ ಕಡಬ ದಿನೇಶ ರೈ ಇವರಿಗೆ ಯಕ್ಷ ಪ್ರೋತ್ಸಾಹ ನಿಧಿ ಸಮಾರ್ಪಣಾ ಸಮಾರಂಭವು ದಿನಾಂಕ 29 ಜೂನ್ 2025ರ ರವಿವಾರದಂದು ಮೂಡುಬಿದಿರೆಯ ಪೊನ್ನೆಚಾರಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಕಲಾ ಮಂದಿರದಲ್ಲಿ ನಡೆಯಿತು.
    ರಂಗಸ್ಥಳ ಮಂಗಳೂರು ಇದರ ಅಧ್ಯಕ್ಷ ಹಾಗೂ ಪ್ರಧಾನ ಪ್ರೋತ್ಸಾಹಕರಾದ ಎಸ್. ಎಲ್. ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಶ್ರೀಪತಿ ಭಟ್ ಮೂಡುಬಿದಿರೆ, ಕೆನರಾ ಬ್ಯಾಂಕ್ ಇದರ ನಿವೃತ್ತ ಅಧಿಕಾರಿ ಎ. ಎಸ್. ಭಟ್ ಮಂಗಳೂರು, ಯಕ್ಷ ಚೈತನ್ಯದ ಅಧ್ಯಕ್ಷರಾದ ಕೃಷ್ಣಮೂರ್ತಿ ಕಟೀಲು, ಭಾಗವತ ಮಾಧವ ಆಚಾರ್ಯ ಸಂಪಿಗೆ, ಪ್ರಗತಿಪರ ಕೃಷಿಕ ರಮೇಶ್ ಭಟ್ ಕೇಂಜೆ, ಪೊನ್ನೆಚಾರಿ ದೇವಳದ ಆನುವಂಶಿಕ ಆಡಳಿತ ಮೊಕೇಸರ ಅಶೋಕ ಕಾಮತ್ ಭಾಗವಹಿಸಿದ್ದರು.
    ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಯಕ್ಷ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ ಮಾತನಾಡಿ “ಕಲಾ ಸಂಘಟನೆ ಸುಲಭದ ಕಾರ್ಯ ಅಲ್ಲ, ಅದು ಶ್ರದ್ಧೆ, ಪರಿಶ್ರಮ ಬೇಡುವ ಕೈಂಕರ್ಯ. ಯಕ್ಷ ಮೇನಕಾದವರು ಆಟ, ಕೂಟಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವುದು ಶ್ಲಾಘನೀಯ. ದಿನೇಶ ರೈ ಯವರು ಹಾಸ್ಯಗಾರರು. ಕಥೆಗೆ ಪೂರಕವಾಗಿ ಯಾವುದೋ ಸಂದೇಶ ನೀಡುವ ಉತ್ಸಾಹ ಹೊಂದಿರುತ್ತಾರೆಯೇ ಹೊರತು ಇತರ ಉದ್ದೇಶದಿಂದಲ್ಲ” ಎಂದು ಸ್ಪಷ್ಟಪಡಿಸಿದರು. ಅನಂತ ನೆಲ್ಲಿಮಾರು, ನಾಗರಾಜ ಶರ್ಮ ಸಮ್ಮಾನ ಪತ್ರಗಳನ್ನು ವಾಚಿಸಿದರು. ‘ಯಕ್ಷ ಮೇನಕಾ’ ಇದರ ಅಧ್ಯಕ್ಷರಾದ ಸದಾಶಿವ ರಾವ್ ನೆಲ್ಲಿಮಾರು ಸ್ವಾಗತಿಸಿ ಪ್ರಸ್ತಾವನೆಗೈದು, ಶಿವದತ್ತ ಭಟ್ ನಿರೂಪಿಸಿ, ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು.
    ಸಭಾಕಾರ್ಯಕ್ರಮದ ಬಳಿಕ ನಡೆದ ‘ಶ್ರೀ ರಾಮಾಂಜನೇಯ’ ಯಕ್ಷಗಾನ ತಾಳಮದ್ದಳೆಯಲ್ಲಿ ನೆಲ್ಯಾಡಿ, ಭರತ್‌ರಾಜ್, ದೇವಾನಂದ, ಶ್ರೀಧರ, ವಗೆನಾಡು, ಮುರಾರಿ, ಉಜಿರೆ, ಹಿರಣ್ಯ, ಪವನ್, ಪಶುಪತಿ, ಡಾ. ಮಹೇಶ್, ದಿನೇಶ್ ರೈ ಪಾಲ್ಗೊಂಡಿದ್ದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕೋಶಾಧ್ಯಕ್ಷರಾಗಿ ಡಿ. ಆರ್. ವಿಜಯ ಕುಮಾರ್ ಅಧಿಕಾರ ಸ್ವೀಕಾರ
    Next Article ಮಂಗಳೂರು ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಉದ್ಘಾಟನೆಗೊಂಡ ಸಮುದಾಯ ವಾಚನಾಲಯ ಮತ್ತು ಗ್ರಂಥಾಲಯ
    roovari

    Add Comment Cancel Reply


    Related Posts

    ಸುಸಂಪನ್ನಗೊಂಡ ವೀಣಾವಾದಿನಿಯ ವಾರ್ಷಿಕೋತ್ಸವ ‘ವೇದ ನಾದ ಯೋಗ ತರಂಗಿಣಿ’

    January 1, 2026

    ಕವನ | ಅಮ್ಮ ನೆನಪಾಗುತ್ತಾಳೆ

    January 1, 2026

    ಬೆಂಗಳೂರಿನ ವೆಂಕಟಗಿರಿ ಸಭಾಂಗಣದಲ್ಲಿ ‘ಪಂಚಮ ಪದ’ ನಾಟಕ ಪ್ರದರ್ಶನ | ಜನವರಿ 02 

    January 1, 2026

    ರಾಯಚೂರು ಕನ್ನಡ ಭವನದಲ್ಲಿ ‘ಮಹಿಳಾ ಪರಿಷತ್’ ಇದರ ಉದ್ಘಾಟನಾ ಕಾರ್ಯಕ್ರಮ | ಜನವರಿ 04

    January 1, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.