Subscribe to Updates

    Get the latest creative news from FooBar about art, design and business.

    What's Hot

    ಮಂಡ್ಯ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ | ನವೆಂಬರ್ 23

    November 22, 2025

    ಸಾಗರದಲ್ಲಿ ‘ಯಕ್ಷ ಷಡಾಖ್ಯಾನಮ್’ ಯಕ್ಷಗಾನ ಪ್ರದರ್ಶನ | ನವೆಂಬರ್ 23

    November 22, 2025

    ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳರಿಗೆ ‘ಯಕ್ಷದೇಗುಲ 2025’ರ ಪ್ರಶಸ್ತಿ

    November 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಟೀಲಿನಲ್ಲಿ ನಾಟ್ಯಾಯನ ನೃತ್ಯ ಪ್ರದರ್ಶನ
    Bharathanatya

    ಕಟೀಲಿನಲ್ಲಿ ನಾಟ್ಯಾಯನ ನೃತ್ಯ ಪ್ರದರ್ಶನ

    April 25, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಭಗವದ್ಗೀತೆ, ಸಂಗೀತ, ನೃತ್ಯ, ಸಂಸ್ಕೃತಿ, ನಾಟಕ ಮತ್ತು ಶಿಕ್ಷಣಗಳ ವಿಶಿಷ್ಟ ಸಮ್ಮಿಲನವಾಗಿರುವ ನಾಟ್ಯಾಯನ ಯುಗಳ ನೃತ್ಯ ಕಾರ್ಯಕ್ರಮ ಏಪ್ರಿಲ್ 17ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯಿತು.

    ಶ್ರೀ ದುರ್ಗಾಪರಮೇಶ್ವರಿ ದೇವಿಯ ಜಾತ್ರೋತ್ಸವದ ಹಿನ್ನಲೆಯಲ್ಲಿ ಕಟೀಲಿನ ಸರಸ್ವತಿ ಸದನದಲ್ಲಿ ನಡೆದ ಕಾರ್ಯಕ್ರಮವನ್ನು ಬ್ರಹ್ಮಶ್ರೀ ವೇದಮೂರ್ತಿ ವಿದ್ವಾನ್ ವೆಂಕಟರಮಣ ಅಸ್ರಣ್ಣರ ಶುಭಾಶೀರ್ವಾದಗಳೊಂದಿಗೆ ಉದ್ಘಾಟಿಸಲಾಯಿತು. ಆಲಂಗಾರು ಶ್ರೀಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಸುಬ್ರಮಣ್ಯ ಭಟ್ , ಉದ್ಯಮಿ ಶ್ರೀಪತಿ ಭಟ್, ನಾದಸ್ವರ ವಿದ್ವಾನ್ ಶ್ರೀ ನಾಗೇಶ್ ಎ. ಬಪ್ಪನಾಡು, ಹಿರಿಯ ನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ , ನಿವೃತ್ತ ಕನ್ನಡ ಅಧ್ಯಾಪಕ ನರಸಿಂಹ ಭಟ್ ಮತ್ತಿತರರು ದೀಪ ಬೆಳಗಿದರು.

    ಕೆ.ವಿ. ರಮಣ್, ಮಂಗಳೂರು ಅವರ ಪರಿಕಲ್ಪನೆ ಮತ್ತು ನಿರೂಪಣೆಯೊಂದಿಗೆ ವಿದುಷಿ ಅಯನಾ ವಿ. ರಮಣ್ ಮೂಡುಬಿದಿರೆ ಮತ್ತು ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ನಾಟ್ಯಾಯನ-ಯುಗಳ ನೃತ್ಯ ಪ್ರದರ್ಶನ ನೀಡಿದರು. ಮೈಸೂರಿನ ಶ್ರೀ ದುರ್ಗಾ ನೃತ್ಯ ಚಾರಿಟೇಬಲ್ ಟ್ರಸ್ಟಿನ ವಿದುಷಿ ಶ್ರೀಮತಿ ಶ್ರೀವಿದ್ಯಾ ಶಶಿಧರ್ ನಟುವಾಂಗದಲ್ಲಿ ಸಹಕರಿಸಿದರು. ಡಾ. ಮುಕಾಂಬಿಕಾ ಜಿ.ಎಸ್. ಧ್ವನಿ-ಬೆಳಕು ನಿರ್ವಹಿಸಿದರು.

    ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೂಡುಬಿದಿರೆಯ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ಪ್ರಮತ್ ಕುಮಾರ್, ಕಾರ್ಯದರ್ಶಿ ಸುದರ್ಶನ್ ಎಂ., ಅಜಾರು ರಾಜಾರಾಮ್ ರಾವ್, ನ್ಯೂ ಪಡಿವಾಳ್ಸ್ ನ ಮಿಥುನ್ ಶೆಟ್ಟಿ, ಉದ್ಯಮಿ ನಾರಾಯಣ ಪಿ.ಎಂ., ಕಲಾವಿದ-ಕಲಾಪೋಷಕ ಉಮಾನಾಥ ಕೋಟ್ಯಾನ್ ವಿಶೇಷ ಸಹಕಾರ ನೀಡಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀಮತಿ ಗಂಗಾ ಪಾದೇಕಲ್ ಇವರಿಗೆ ‘ನಿರಂಜನ ಪ್ರಶಸ್ತಿ’ ಪ್ರದಾನ
    Next Article ಕುಕ್ಕುವಳ್ಳಿಯವರ ‘ಏಕಾಂತದಿಂದ ಲೋಕಾಂತರಕೆ’ ಕೃತಿ ಅನಾವರಣ
    roovari

    Add Comment Cancel Reply


    Related Posts

    ಮನರಂಜಿಸಿದ ‘ಕಲಾಭವ -04’ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ

    November 21, 2025

    ಮಂಗಳೂರಿನ ಪುರಭವನದಲ್ಲಿ ವಿದುಷಿ ಅಮೃತಾ ವಿ. ಇವರ ರಂಗಪ್ರವೇಶ | ನವೆಂಬರ್ 22

    November 20, 2025

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ‘ನಾಟ್ಯಮೋಹನ ನವತ್ಯುತ್ಸಹ’ ನೃತ್ಯ ಸರಣಿ 23 | ನವೆಂಬರ್ 21

    November 20, 2025

    NCPA Invites Arunodaya Kala Niketan for ‘Nritya Parichaya’ Session at City School, Mumbai

    November 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.