Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನಲ್ಲಿ ‘ನೀರ್ಮಾದಳ ಹೂವಿನೊಂದಿಗೆ…’ ಏಕವ್ಯಕ್ತಿ ರಂಗ ಪ್ರಯೋಗ | ಸೆಪ್ಟೆಂಬರ್ 20  

    September 17, 2025

    ಎ.ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುದವಟ್ಟು ದತ್ತಿ ಪುರಸ್ಕಾರಕ್ಕೆ ಡಾ. ಎಚ್.ಎಸ್. ಸುರೇಶ್ ಆಯ್ಕೆ

    September 17, 2025

    ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿಗೆ ಕ.ಸಾ.ಪ. ವತಿಯಿಂದ ಪುಸ್ತಕಗಳ ಕೊಡುಗೆ

    September 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ತಾಳಮದ್ದಳೆ ‘ಕ್ರಾಂತಿ ಕಹಳೆ’
    Yakshagana

    ಮಂಗಳೂರಿನಲ್ಲಿ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ತಾಳಮದ್ದಳೆ ‘ಕ್ರಾಂತಿ ಕಹಳೆ’

    April 26, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : 17-4-2023ರಂದು ಸೋಮವಾರ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ‘ಆಜಾದಿ ಕಾ ಅಮೃತ್ ಮಹೋತ್ಸವ್’ದ ಅಂಗವಾಗಿ ಒಂದು ದಿನದ ಕಾರ್ಯಾಗಾರದಲ್ಲಿ ಉತ್ತರ ವಲಯದ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ಯಕ್ಷಗಾನ ತಾಳಮದ್ದಳೆ ‘ಕ್ರಾಂತಿ ಕಹಳೆ’ ನಡೆಯಿತು. ಈ ಪ್ರಸಂಗದ ಪರಿಕಲ್ಪನೆ ಮತ್ತು ಕಥಾ ಸಂಯೋಜನೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ. ಭಾರತ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಚಿತ್ರಗಳನ್ನು ಈ ಯಕ್ಷಗಾನಕ್ಕೆ ಅಳವಡಿಸಲಾಗಿದೆ. ಇದರ ನಿರ್ದೇಶನ ಮಾಡಿದವರು ಮಂಜುಳಾ ಶೆಟ್ಟಿ. ಕಥಾ ಸಂಯೋಜನೆಗೆ ಪೂರಕವಾಗಿ ಪ್ರಸಂಗದ ಪದ್ಯ ರಚನೆಯನ್ನು ಮಾಡಿದವರು ಡಾ. ದಿನಕರ ಎಸ್. ಪಚ್ಚನಾಡಿ. ಸುಮಾರು 1 ಗಂಟೆ 10 ನಿಮಿಷದ ಅವಧಿಯ ತಾಳಮದ್ದಳೆಯ ಈ ಕಾರ್ಯಕ್ರಮ ‘ಕ್ರಾಂತಿ ಕಹಳೆ’ ಚೆನ್ನಾಗಿ ಪ್ರಸ್ತುತಿಗೊಂಡಿತು. ಹಿಮ್ಮೇಳದಲ್ಲಿ – ಭಾಗವತಿಕೆ ಸೂಡ ಶ್ರೀ ಹರೀಶ್ ಶೆಟ್ಟಿ, ಮದ್ದಳೆಯಲ್ಲಿ – ಶ್ರೀ ಸ್ಕಂದ ಕೊನ್ನಾರ್, ಚೆಂಡೆಯಲ್ಲಿ – ಶ್ರೀ ಲಕ್ಷ್ಮೀನಾರಾಯಣ ಹೊಳ್ಳ.

    ಮುಮ್ಮೇಳದಲ್ಲಿ ಭಾಗವಹಿಸಿದ ಉತ್ತರ ವಲಯದ ಶಿಕ್ಷಕರು – ಉಳ್ಳಾಲ ಅಬ್ಬಕ್ಕ – ನಾಗರಾಜ ಖಾರ್ವಿ, ತಿಮ್ಮಪ್ಪನಾಯಕ ಮತ್ತು ದಿವಾನ್ ಪೂರ್ಣಯ್ಯ – ಕೃಪಾ, ಪೊರ್ಚುಗೀಸ್ ಕುಟಿನ್ನೊ – ಪ್ರಮೀಳಾ, ಝಾನ್ಸಿರಾಣಿ – ಚಿತ್ರಾಶ್ರೀ ಕೆ.ಎಸ್., ನಾನಾಸಾಹೆಬ್ – ವಿನೋದಾ ಅಮೀನ್, ಲಾರ್ಡ್ ಕಾರ್ನವಾಲಿಸ್, ಹ್ಯೂರೋಜ ಮತ್ತು ಆಂಗ್ಲಾಧಿಕಾರಿ – ಹರಿಪ್ರಸಾದ್ ಶೆಟ್ಟಿ, ಟಿಪ್ಪು ಮತ್ತು ಲಾಲಾ ಲಜಪತರಾಯ್ – ವಸಂತ ಪಾಲನ್, ಬಾಲ ಗಂಗಾಧರ ತಿಲಕ್ – ಗೀತಾ ಎಸ್, ಭಗತ್ ಸಿಂಗ್ – ಪ್ರೇಮನಾಥ್ ಮರ್ಣೆ, ಚಂದ್ರಶೇಖರ ಆಜಾದ್ – ವೀಣಾ, ವಿದ್ಯಾವತಿ – ಡಾ. ಮಂಜುಳಾ ಶೆಟ್ಟಿ.

    ಸಿ.ಸಿ.ಆರ್.ಟಿ.ಯವರ ವತಿಯಿಂದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿರುವ ವಿಲ್ಮಾ ಕ್ರಾಸ್ತರವರ ನೇತೃತ್ವದಲ್ಲಿ ಈ ಕಾರ್ಯಗಾರವು ನಡೆಯಿತು. ನಮ್ಮ ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ವೀರರ ಬಗ್ಗೆ ಅಧ್ಯಯನ ಮಾಡಿ ಅವರ ಹೋರಾಟದ ಕಥೆಯನ್ನು ಹೊರತರುವುದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶ.

    ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಡಿಡಿಪಿಐ ಶ್ರೀ ದಯಾನಂದ ನಾಯಕ್ ಮತ್ತು ಯುವ ಲೇಖಕರಾದ ಶ್ರೀ ಅನಿಂದಿದ್ ಗೌಡ ಉಪಸ್ಥಿತರಿದ್ಡರು. ದೆಹಲಿಯಿಂದ ಆಗಮಿಸಿರುವ ಸಿ.ಸಿ.ಆರ್.ಟಿ.ಯ ಉಪ ನಿರ್ದೇಶಕರಾದ ಶ್ರೀ ರಾಹುಲ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಾಗಾರದಲ್ಲಿ 98 ಮಂದಿ ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ಕೆಲವು ಶಿಕ್ಷಕರೂ, ಕೆಲವು ಕವಿ ಹಾಗೂ ಲೇಖಕರು, ಕಲಾವಿದರು, ವಿದ್ವಾಂಸರು, ಎನ್.ಜಿ.ಒ. ಅವರೂ ಪಾಲ್ಗೊಂಡಿದ್ದರು. ಶ್ರೀಮತಿ ವಿಲ್ಮಾ ಕ್ರಾಸ್ತಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಯಟ್ ನ ಪ್ರಿನ್ಸಿಪಲ್ ಶ್ರೀಮತಿ ರಾಜಲಕ್ಷ್ಮಿ ಸ್ವಾಗತಿಸಿ, ದೆಹಲಿಯ ಶ್ರೀ ವಿಮಲ್ ಧನ್ಯವಾದ ಸಮರ್ಪಿಸಿದರು. ಸಿ.ಸಿ.ಆರ್.ಟಿ.ಯ ಈ ಡಿ.ಡಿ.ಆರ್. ಕಾರ್ಯಾಗಾರವು ತುಂಬಾ ಯಶಸ್ವಿಯಾಗಿ ಮುಕ್ತಾಯಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಅಳಿಕೆ ಯಕ್ಷ ಸಹಾಯ ನಿಧಿಗೆ ಬಿ.ಕೆ.ಚೆನ್ನಪ್ಪ ಗೌಡ ಆಯ್ಕೆ
    Next Article ಕರಾವಳಿ ಲೇಖಕಿಯರ – ವಾಚಕಿಯರ ಸಂಘದಲ್ಲಿ ‘ಮೌನ ಹೊದ್ದವಳು’ ಹಾಗೂ ‘ಕಸ್ತೂರಿ ಚಿಕ್ಕಿ ಮತ್ತು ಪುನುಗು ಬೆಕ್ಕು’ ಕೃತಿಗಳು ಲೋಕಾರ್ಪಣೆ
    roovari

    Add Comment Cancel Reply


    Related Posts

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಂಕ್ರಾಂತಿ’ | ಸೆಪ್ಟೆಂಬರ್ 20

    September 17, 2025

    ಮೂಡುಬಿದಿರೆಯಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಸೆಪ್ಟೆಂಬರ್ 20

    September 17, 2025

    ಚಿಗುರುಪಾದೆಯಲ್ಲಿ ರಂಜಿಸಿದ ಶ್ರೀಗುರುನರಸಿಂಹ ಯಕ್ಷಬಳಗದ ‘ಯಕ್ಷಚಿಗುರು -2025’

    September 16, 2025

    ಪಾವಂಜೆಯಲ್ಲಿ ಯಕ್ಷಗಾನ ಬಯಲಾಟ | ಸೆಪ್ಟೆಂಬರ್ 17

    September 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.