ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಾರ್ಕಳದ ಬಳಿ ನಕ್ರೆಯಲ್ಲಿರುವ ಖ್ಯಾತ ಸಾಹಿತಿ, ಶಿಕ್ಷಕ ಶ್ರೀ ಜೋರ್ಜ್ ಕ್ಯಾಸ್ತೆಲಿನೊರವರ ಮನೆ ‘ನಿಸರ್ಗ’, ಕಲಾಂಜಲಿ ವೇದಿಕೆಯಲ್ಲಿ ತನ್ನ ಅಚ್ಚುಮೆಚ್ಚಿನ ಕಾರ್ಯಕ್ರಮವಾದ ‘ಸಾಹಿತ್ಯ ಸಂಭ್ರಮ- 2 ಮತ್ತು ಕಾವ್ಯಾಂ- ವ್ಹಾಳೊ- 5 ಕಾರ್ಯಕ್ರಮವು ದಿನಾಂಕ 03 ಆಗಸ್ಟ್ 2025ರಂದು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಸಾಹಿತ್ಯದ ಸಂಭ್ರಮವು ನಮ್ಮ ಬದುಕಿನ ಸಂಭ್ರಮವಾಗಬೇಕು. ಎಲ್ಲೆಲ್ಲಿಯೂ ಕೊಂಕಣಿಯ ಸದ್ದು ಸಡಗರ ಕೇಳಬೇಕು” ಎಂದು ಕರೆಕೊಟ್ಟರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಂದನೀಯ ಪ್ರಾನ್ಸಿಸ್ ಲುವಿಸ್ ಡೆಸಾರವರು ಮಾತಾನಾಡಿ, “ಕೊಂಕಣಿ ನಮ್ಮ ಜೀವಂತರಗತ ಭಾಗವಾಗಬೇಕು. ಅದು ಬರೇ ಬಳಸುವ ವಸ್ತುವಾಗಬಾರದು. ನಮ್ಮ ಮಾತೃಭಾಷೆಯಲ್ಲಿ ನಾವು ಯೋಚನೆ ಮಾಡುವುದು ಸಾಧ್ಯ. ಆ ಯೋಚನೆಯನ್ನು ಕಾರ್ಯರೂಪಗೊಳಿಸಲು ನಾವೆಲ್ಲರೂ ಪ್ರವೃತರಾಗಬೇಕು” ಎಂದು ಕರೆಕೊಟ್ಟರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಮತ್ತು ಛಂದೋಶಾಸ್ತ್ರ ತಜ್ಞರು ರಾಮಾಯಣವನ್ನು ವಿವಿಧ ಭಾಷೆಗಳಲ್ಲಿ ಬರೆದಿರುವ ಶ್ರೀ ನಾರಾಯಣ ಎಸ್. ಗವಾಳ್ಕರ್ ಇವರನ್ನು ಪ್ರೀತಿಯಿಂದ ಸನ್ಮಾನಿಸಲಾಯಿತು. ಯುವ ಸಾಹಿತಿ ಹಾಗೂ ಹೆಸರಾಂತ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಎಲ್ಸನ್ ಡಿಸೋಜ ಹಿರ್ಗಾನ್ ರವರು ಸಭೆಯಲ್ಲಿ ಹಿರಿಯ ಸಾಹಿತಿ ಹಾಗೂ ಖ್ಯಾತ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಜೋರ್ಜ್ ಕ್ಯಾಸ್ತೆಲಿನೊ ಇವರೊಂದಿಗೆ ಸಂವಾದ ನಡೆಸಿದರು. ಶ್ರೀ ಜೋರ್ಜ್ ಕ್ಯಾಸ್ತೆಲಿನೊರವರು ತಮ್ಮ ಬದುಕಿನ ಆಯಾಮಾಗಳನ್ನು ಆಸಕ್ತಿದಾಯಾಕವಾಗಿ ಸಭೆಯ ಮುಂದಿಟ್ಟರು.
ಕಾವ್ಯಾಂ – ವ್ಹಾಳೊ -5 ಕಾರ್ಯಕ್ರಮದಲ್ಲಿ ಖ್ಯಾತ ಕೊಂಕಣಿ ಕವಿಗಳಿಂದ ಕವಿಗೋಷ್ಟಿ ನಡೆಸಲ್ಪಟ್ಟಿತು. ಕವಿಗೋಷ್ಟಿಯ ನಿರ್ವಹಣೆಯನ್ನು ಶ್ರೀಮತಿ ಲವೀಟಾ ಡಿಸೋಜ ನಕ್ರೆಯವರು ನಡೆಸಿಕೊಟ್ಟರು. ಶ್ರೀ ರಾಮಚಂದ್ರ ಪೈ, ಶ್ರೀಮತಿ ಪ್ರಮೀಳಾ ಫ್ಲಾವಿಯಾ ಕಾರ್ಕಳ, ಶ್ರೀ ರಾಘವೇಂದ್ರ ಪ್ರಭು ಕರ್ವಾಲು, ಶ್ರೀ ಓಜ್ವಾಲ್ಡ್ ಮರಿಯನ್ ಡಿಸೋಜ, ಡಾ. ಸುಮತಿ ಪಿ., ಶ್ರೀ ಪ್ರಕಾಶ್ ಮಾರ್ಟಿಸ್, ಶ್ರೀ ಕಾಂತಾವರ ಶಿವಾನಂದ ಶೆಣೈ, ಶ್ರೀ ರೋಬರ್ಟ್ ಮಿನೇಜಸ್ ಕಣಜಾರ್, ಶ್ರೀಮತಿ ಸೀಮಾ ಕಾಮತ್, ಶ್ರೀ ಪ್ರಕಾಶ್ ಡಿಸೋಜ ಅಜೆಕಾರ್ ಇವರು ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು. ಜೆರಾಲ್ಡ್ ಪ್ರಕಾಶ್ ಮಾರ್ಟಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ನವೀನ್ ಲೋಬೊ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸದಸ್ಯ ಸಂಚಾಲಕರಾದ ಶ್ರೀ ದಯಾನಂದ ಮಡ್ಕೇಕರ್ ರವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದರು.