Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಒ.ಬಿ.ಇ.’ ಹಾಸ್ಯ ನಾಟಕ ಪ್ರದರ್ಶನ | ಸೆಪ್ಟೆಂಬರ್ 04

    September 2, 2025

    ಬಿ. ದಾಮೋದರ ನಿಸರ್ಗ ಸಂಸ್ಮರಣೆ ಪ್ರಯುಕ್ತ ಪುನರೂರುರವರಿಗೆ ಪ್ರಶಸ್ತಿ ಪ್ರದಾನ

    September 2, 2025

    ವಿರಾಜಪೇಟೆಯ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ

    September 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬದುಕಿನ ಆತ್ಮವೇ ಸಂಗೀತ – ಎ.ಕೆ. ವಿಜಯ್ (ಕೋಕಿಲಾ)
    Music

    ಬದುಕಿನ ಆತ್ಮವೇ ಸಂಗೀತ – ಎ.ಕೆ. ವಿಜಯ್ (ಕೋಕಿಲಾ)

    September 2, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : “ಸಂಗೀತವು ಬದುಕಿನ ಆತ್ಮ. ಇದು ಕೇವಲ ಮನೋರಂಜನೆಗೆ ಮಾತ್ರವಲ್ಲ ; ಆಧ್ಯಾತ್ಮಿಕ ಮತ್ತು ಮನಸ್ಸಿಗಾದ ನೋವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಈಗಿನ ಯಾಂತ್ರಿಕ ಯುಗದಲ್ಲಿ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ ತಾಕತ್ತು ಸಂಗೀತಕ್ಕಿದೆ. ಒಳ್ಳೆಯ ಸಂಗೀತವನ್ನು ಆಲಿಸುವುದರಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ.ಕೆ. ವಿಜಯ್ (ಕೋಕಿಲಾ) ಹೇಳಿದರು.

    ಅವರು ದಿನಾಂಕ 24 ಆಗಸ್ಟ್ 2025 ರಂದು ಭಾನುವಾರ ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ಕಾಸರಗೋಡಿನ ಸಾಹಿತ್ಯಿಕ -ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿಯ ನೇತೃತ್ವದಲ್ಲಿ ಜರಗಿದ ‘ಅಂತರ್ಧ್ವನಿ -7’ ಕರೋಕೆ ಗಾಯನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

    ವ್ಯಾಪಾರಿ ಮನೋಭಾವ ಇಟ್ಟುಕೊಂಡು ನಗರಗಳಲ್ಲಿ ಹಲವಾರು ಕರೋಕೆ ಸಂಸ್ಥೆಗಳು ಹುಟ್ಟಿಕೊಂಡರೂ ಯಾವುದೇ ಫಲಪೇಕ್ಷೆ ಇಲ್ಲದೆ ಕಾಸರಗೋಡಿನ ಗಾಯಕ-ಗಾಯಕಿಯರಿಗಾಗಿ ವೇದಿಕೆ ನಿರ್ಮಾಣ ಮಾಡಿಕೊಟ್ಟ ರಂಗಚಿನ್ನಾರಿಯ ಕೆಲಸವನ್ನು ಶ್ಲಾಘಿಸಿದರು.

    ಅಧ್ಯಕ್ಷತೆ ವಹಿಸಿದ್ದ ನಾರಿಚಿನ್ನಾರಿಯ ಅಧ್ಯಕ್ಷೆ, ನಗರ ಸಭಾ ಸದಸ್ಯೆ ಶ್ರೀಮತಿ ಸವಿತಾ ಟೀಚರ್ ಮಾತನಾಡಿ “ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳ ಮೇಲೆ ಬೆಳಕು ಚೆಲ್ಲಲು ‘ಸ್ವರಚಿನ್ನಾರಿ’ಯ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು” ಎಂದರು. ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.

    ಸಮಾರೋಪ ಸಮಾರಂಭದಲ್ಲಿ ಕಾಸರಗೋಡಿನ ಖ್ಯಾತ ಮೂಳೆತಜ್ಞ ಡಾ. ಕೆ.ಕೆ. ಶ್ಯಾನುಭೋಗ್, ನ್ಯಾಯವಾದಿ ಎ.ಎನ್. ಅಶೋಕ ಕುಮಾರ್ ಉಪಸ್ಥಿತರಿದ್ದರು.

    ‘ಪದ್ಮಗಿರಿ ಕಲಾ ಕುಟೀರ’ಕ್ಕೆ ದೇಣಿಗೆ ನೀಡಿದ ಖ್ಯಾತ ಸಾಹಿತಿ ವೈ. ಸತ್ಯನಾರಾಯಣ ಹಾಗೂ ವಾಸುದೇವ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಂತರ್ಧ್ವನಿ ಸಂಚಿಕೆ 7ರ ಉತ್ತಮ ಗಾಯಕ, ಗಾಯಕಿ ವಿಜೇತರಾದ ಪ್ರದೀಪ್ ಆಚಾರ್ಯ ಹಾಗೂ ಕುಮಾರಿ ವರ್ಷಾ ಅವರಿಗೆ ಸ್ಮರಣಿಕೆ, ಶಾಲು ಹೊದಿಸಿ ಅಭಿನಂದಿಸಲಾಯಿತು.

    ಕುಮಾರಿ ಪ್ರಣೀತಾ ಪ್ರಾರ್ಥಿಸಿದರು. ರಂಗಚಿನ್ನಾರಿಯ ನಿರ್ದೇಶಕರೂ, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಸ್ವಾಗತಿಸಿದರು. ಶ್ರೀಮತಿ ಉಷಾ ಟೀಚರ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಬಬಿತಾ ಆಚಾರ್ಯ ವಂದಿಸಿದರು. ರಂಗಚಿನ್ನಾರಿಯ ಜನಾರ್ದನ ಅಣಂಗೂರು, ಉದಯ ಕುಮಾರ್ ಮನ್ನಿಪ್ಪಾಡಿ ಉಪಸ್ಥಿತರಿದ್ದರು.

    ಅಂತರ್ಧ್ವನಿ -7ರ ಕಾರ್ಯಕ್ರಮದಲ್ಲಿ ಪದ್ಮಭೂಷಣ, ಅಭಿನವ ಕಂಠೀರವ ಡಾ. ರಾಜಕುಮಾರ್ ಅವರ ಹಾಡುಗಳನ್ನು ಹಾಡುವ ಮುಖಾಂತರ ಅವರಿಗೆ ಅರ್ಪಿಸಲಾಯಿತು.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಎಸ್‌.ಡಿ.ಎಂ. ಮಹಾವಿದ್ಯಾಲಯದಲ್ಲಿ ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವ’ | ಸೆಪ್ಟೆಂಬರ್ 05
    Next Article ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ
    roovari

    Add Comment Cancel Reply


    Related Posts

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಒ.ಬಿ.ಇ.’ ಹಾಸ್ಯ ನಾಟಕ ಪ್ರದರ್ಶನ | ಸೆಪ್ಟೆಂಬರ್ 04

    September 2, 2025

    ಬಿ. ದಾಮೋದರ ನಿಸರ್ಗ ಸಂಸ್ಮರಣೆ ಪ್ರಯುಕ್ತ ಪುನರೂರುರವರಿಗೆ ಪ್ರಶಸ್ತಿ ಪ್ರದಾನ

    September 2, 2025

    ವಿರಾಜಪೇಟೆಯ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ

    September 2, 2025

    ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ

    September 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.